ಆ್ಯಪ್ನಗರ

ಜಲಸಂರಕ್ಷಣೆಗೆ ಒತ್ತು ನೀಡಿದ್ದ ಕೆಂಪೇಗೌಡರು

ಬೆಂಗಳೂರು ನಿರ್ಮಿಸಿದ ಕೆಂಪೇಗೌಡರು ಸಾವಿರಾರು ಕೆರೆಗಳನ್ನು ನಿರ್ಮಿಸಿದ್ದರು. ಆದರೆ, ಈಗ ಆ ಎಲ್ಲ ಕೆರೆಗಳನ್ನು ಮುಚ್ಚಿ ಅವೈಜ್ಞಾನಿಕ ಯೋಜನೆ ರೂಪಿಸುತ್ತಿರುವುದು ದುರಂತ ಎಂದು ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.

Vijaya Karnataka 28 Jun 2019, 5:00 am
ಸಾಗರ: ಬೆಂಗಳೂರು ನಿರ್ಮಿಸಿದ ಕೆಂಪೇಗೌಡರು ಸಾವಿರಾರು ಕೆರೆಗಳನ್ನು ನಿರ್ಮಿಸಿದ್ದರು. ಆದರೆ, ಈಗ ಆ ಎಲ್ಲ ಕೆರೆಗಳನ್ನು ಮುಚ್ಚಿ ಅವೈಜ್ಞಾನಿಕ ಯೋಜನೆ ರೂಪಿಸುತ್ತಿರುವುದು ದುರಂತ ಎಂದು ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.
Vijaya Karnataka Web SMR-27SGR1


ಇಲ್ಲಿನ ಸಾಮರ್ಥ್ಯ‌ಸೌಧದಲ್ಲಿ ಗುರುವಾರ ತಾಲೂಕು ಆಡಳಿತ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ದೂರದೃಷ್ಟಿಯುಳ್ಳ ಕೆಂಪೇಗೌಡರು ಜನರ ಅನುಕೂಲಕ್ಕಾಗಿ ಕೆರೆಕಟ್ಟೆ ನಿರ್ಮಿಸಿದ್ದರು. ಆದರೆ, ಆಳುವ ಸರಕಾರಗಳು ಅಭಿವೃದ್ಧಿ ಹೆಸರಿನಲ್ಲಿ ಕೆರೆಗಳನ್ನು ಮುಚ್ಚಿ ಬಹುಮಹಡಿ ಕಟ್ಟಡ ನಿರ್ಮಿಸಿದ್ದರಿಂದ ನೀರಿನ ಬರ ಉಂಟಾಗಿದೆ. ಮಲೆನಾಡು ಭಾಗದ ನದಿಗಳ ನೀರನ್ನು ಬೆಂಗಳೂರಿಗೆ ಒಯ್ಯಲಾಗುತ್ತಿದೆ. ಸರಕಾರದ ಈ ಅವೈಜ್ಞಾನಿಕ ಯೋಜನೆಯನ್ನು ತಾ.ಪಂ. ಸಹ ಖಂಡಿಸುತ್ತದೆ ಎಂದರು.

ಉಪನ್ಯಾಸ ನೀಡಿದ ರಿಪ್ಪನ್‌ಪೇಟೆ ಸರಕಾರಿ ಪಿಯು ಕಾಲೇಜು ಉಪನ್ಯಾಸಕ ಕೆಸವಿನಮನೆ ರತ್ನಾಕರ್‌ ಮಾತನಾಡಿದರು. ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ಪೌರಾಯುಕ್ತ ಎಸ್‌.ರಾಜು, ತಾಪಂ ಇಒ ಎಚ್‌.ಎನ್‌.ಮಂಜುನಾಥಸ್ವಾಮಿ, ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎಚ್‌.ಕನ್ನಪ್ಪ, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಅಖಿಲ ಮತ್ತು ಸಂಗಡಿಗರು ಪ್ರಾರ್ಥಿಸಿ, ಕಲ್ಲಪ್ಪ ಮೆಣಸಿನಾಳ್‌ ಸ್ವಾಗತಿಸಿದರು. ಕೆ.ಎನ್‌.ಗಾವಡಿ ವಂದಿಸಿ, ವಿ.ಟಿ.ಸ್ವಾಮಿ ನಿರೂಪಿಸಿದರು.

ಬಾರದ ಜನ: ಅಧ್ಯಕ್ಷ ರ ಆಕ್ಷೇಪ:
ಕೆಂಪೇಗೌಡ ಜಯಂತಿಯಲ್ಲಿ ಅಧಿಕಾರಿ ವರ್ಗದವರನ್ನು ಸೇರಿಸಿ ಅಂದಾಜು 25 ಜನರಿದ್ದರು. ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಹಾಜರಾಗಬೇಕಾಗಿದ್ದ ಅನೇಕ ಇಲಾಖೆ ಅಧಿಕಾರಿಗಳೆ ಗೈರಾಗಿದ್ದರು. ಕೆಲವು ನಗರಸಭೆ ಜನಪ್ರತಿನಿಧಿಗಳು ಹಾಜರಿದ್ದರು. ಈ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಿದ ತಾ.ಪಂ. ಅಧ್ಯಕ್ಷ ಹಕ್ರೆ, ಜಯಂತಿ ಆಚರಣೆಗಳು ಅಧಿಕಾರಿಗಳ ನಿರಾಸಕ್ತಿಯಿಂದ ವಿಫಲವಾಗುತ್ತಿವೆ. ಸಾಗರಕ್ಕೆ ಬಂದ ನಂತರ ಉಪವಿಭಾಗಾಧಿಕಾರಿಗಳು ಯಾವುದೇ ಜಯಂತಿ ಆಚರಣೆಗೂ ಹಾಜರಾಗಿಲ್ಲ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ