ಆ್ಯಪ್ನಗರ

ಮಂಗನಕಾಯಿಲೆ: ಮತ್ತೊಬ್ಬರ ಸ್ಥಿತಿ ಗಂಭೀರ

ಮಂಗನ ಕಾಯಿಲೆಯಿಂದ ಪೀಡಿತರಾಗಿದ್ದಾರೆ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿರುವ ಅರಳಗೋಡಿನ ಲೋಕರಾಜ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದ್ದು, ಸೋಮವಾರ ಅವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಿಂದ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಭಾನುವಾರ ರಾತ್ರಿ ಅವರನ್ನು ತೀವ್ರ ಜ್ವರ, ಸಕ್ಕರೆ ಕಾಯಿಲೆ ಹಿನ್ನೆಲೆಯಲ್ಲಿ ಮೆಗ್ಗಾನ್‌ಗೆ ಸೇರಿಸಲಾಗಿತ್ತು.

Vijaya Karnataka 1 Jan 2019, 5:00 am
ಸಾಗರ : ಮಂಗನ ಕಾಯಿಲೆಯಿಂದ ಪೀಡಿತರಾಗಿದ್ದಾರೆ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿರುವ ಅರಳಗೋಡಿನ ಲೋಕರಾಜ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದ್ದು, ಸೋಮವಾರ ಅವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಿಂದ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಭಾನುವಾರ ರಾತ್ರಿ ಅವರನ್ನು ತೀವ್ರ ಜ್ವರ, ಸಕ್ಕರೆ ಕಾಯಿಲೆ ಹಿನ್ನೆಲೆಯಲ್ಲಿ ಮೆಗ್ಗಾನ್‌ಗೆ ಸೇರಿಸಲಾಗಿತ್ತು.
Vijaya Karnataka Web kfd another serious
ಮಂಗನಕಾಯಿಲೆ: ಮತ್ತೊಬ್ಬರ ಸ್ಥಿತಿ ಗಂಭೀರ


ಅರಳಗೋಡು ಗ್ರಾಮ ಪಂಚಾಯಿತಿ ಪ್ರದೇಶಕ್ಕೆ ಸೋಮವಾರ ಕ್ಯಾಸನೂರು ಮಂಗನ ಕಾಯಿಲೆ ವಿಶೇಷ ವಿಭಾಗದ ಉಪನಿರ್ದೇಶಕರಾದ ಡಾ.ರವಿಕುಮಾರ್‌ ಭೇಟಿ ನೀಡಿ ಸಭೆ ನಡೆಸಿದ್ದಾರೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಲೋಕರಾಜ್‌ ಅವರ ರಕ್ತವನ್ನು ಕೆಎಫ್‌ಡಿ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗಿದ್ದು ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಅರೆ ಪ್ರಜ್ಞಾವಸ್ಥೆಯಲ್ಲಿರುವ ಅವರನ್ನು ಕುಟುಂಬಸ್ಥರ ಮನವಿಯಂತೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಲಾಗಿದೆ ಎಂದರು.

ಅರಳಗೋಡು ಭಾಗದಲ್ಲಿ ಸೋಮವಾರ ಯಾವುದೇ ಮೃತ ಮಂಗದ ಶವ ಪತ್ತೆಯಾಗಿಲ್ಲ. ಸುಮಾರು 18 ಜನರಲ್ಲಿ ಜ್ವರ ಕಾಣಿಸಿದ್ದು, ಅದರಲ್ಲಿ 10 ಜನರ ರಕ್ತವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಈ ಭಾಗದಲ್ಲಿ ಈಗಾಗಲೇ ಎರಡು ಬಾರಿ ಪ್ರತಿರೋಧಕ ಲಸಿಕೆ ಹಾಕಲಾಗಿದ್ದು ಇನ್ನೂ ಕೆಲವರಿಗೆ ಲಸಿಕೆಯ ಎರಡನೇ ಡೋಸ್‌ ಕೊಡಲಾಗುವುದು. ಆರು ತಿಂಗಳ ನಂತರ ಈಗ ಲಸಿಕೆ ತೆಗೆದುಕೊಂಡವರಿಗೆ ಇನ್ನೊಂದು ಡೋಸ್‌ ಕೊಡಲಾಗುತ್ತದೆ ಎಂದು ತಿಳಿಸಿದರು.

ಆವಿನಹಳ್ಳಿ ಭಾಗದಲ್ಲಿ ಮಂಗನಲ್ಲಿ ಮಂಗನ ಕಾಯಿಲೆ ವೈರಸ್‌ ಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಆರಂಭಿಕ ಸಮೀಕ್ಷೆಗಳ ಪ್ರಕಾರ ಸುಮಾರು ಒಂದೂವರೆ ಸಾವಿರ ಜನಕ್ಕೆ ಮುನ್ನೆಚ್ಚರಿಕೆ ಲಸಿಕೆ ಹಾಕಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ನಮ್ಮಲ್ಲಿ ಅಗತ್ಯವಿರುವಷ್ಟು ಡಿಎಂಪಿ, ಮೆಲಾಥಿಯಾನ್‌ ಪುಡಿ ಲಭ್ಯವಿದ್ದು ಅದನ್ನು ಆವಿನಹಳ್ಳಿ, ಹಸಿರುಮಕ್ಕಿ ಭಾಗದ ಜನರಿಗೆ ಒದಗಿಸಲಾಗುವುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ