ಆ್ಯಪ್ನಗರ

‘ಕೈ’ಗೆ ಖಾಕಿ ದಿಗ್ಬಂಧನ

ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದು, ನಗರದಲ್ಲಿನಡೆಯಬೇಕಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು.

Vijaya Karnataka 20 Dec 2019, 5:00 am
ಶಿವಮೊಗ್ಗ: ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದು, ನಗರದಲ್ಲಿನಡೆಯಬೇಕಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು.
Vijaya Karnataka Web 19SOM1_46
ಶಿವಮೊಗ್ಗದ ಜಿಲ್ಲಾಕಾಂಗ್ರೆಸ್‌ ಭವನದಲ್ಲಿನಡೆದ ಸಭೆಯಲ್ಲಿಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿದರು.


ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ನಗರದ ಕಾಂಗ್ರೆಸ್‌ ಕಚೇರಿ ಮುಂಭಾಗದಲ್ಲಿಸಾಕಷ್ಟು ಜನ ಸೇರಿದ್ದರು. ಆದರೆ, ಕಚೇರಿ ಸುತ್ತಲೂ ಮುಂಜಾಗೃತಾ ಕ್ರಮವಾಗಿ ಪೊಲೀಸ್‌ ಗಸ್ತಿನಲ್ಲಿದ್ದರಿಂದ ಮೆರವಣಿಗೆ ಮಾಡಲೂ ಸಾಧ್ಯವಾಗಲಿಲ್ಲ.

ಪೂರ್ವ ನಿಗದಿಯಂತೆ ಕಾಂಗ್ರೆಸ್‌ ಜಿಲ್ಲಾಕಚೇರಿಯಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಕ್ಕೆ ನೂರಾರು ಜನ ನಾನಾ ಭಾಗಗಳಿಂದ ಸೇರಿದ್ದರು.

ಕಚೇರಿಯಲ್ಲಿನಡೆದ ಸಭೆಯಲ್ಲಿಕಾಂಗ್ರೆಸ್‌ ಮುಖಂಡರು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು. ಪ್ರತಿಭಟನೆ ಹತ್ತಿಕ್ಕುವುದಕ್ಕಾಗಿಯೇ ನಿಷೇಧಾಜ್ಞೆ ಹೇರಲಾಗಿದೆ. ಸದ್ಯಕ್ಕೆ ಪ್ರತಿಭಟನೆ ಮುಂದೂಡಿ, ಮತ್ತಷ್ಟು ಸಂಘಟನೆಯೊಂದಿಗೆ ಹೋರಾಟ ಮಾಡಲಾಗುವುದು ಎಂದು ಪಕ್ಷದ ಮುಖಂಡರು ಹೇಳಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಜಿಲ್ಲಾಧ್ಯಕ್ಷ ಎಚ್‌.ಎಸ್‌. ಸುಂದರೇಶ್‌, ಬಿ.ಎ. ರಮೇಶ್‌ ಹೆಗ್ಡೆ, ಎಚ್‌.ಸಿ. ಯೋಗೇಶ್‌, ಎಸ್‌.ಪಿ. ಶೇಷಾದ್ರಿ, ದೇವೇಂದ್ರಪ್ಪ, ಕಲಗೋಡು ರತ್ನಾಕರ್‌, ಕಾಶಿ ವಿಶ್ವನಾಥ್‌ ಇತರರಿದ್ದರು.

===
ಬಿಜೆಪಿಯ ಅವಸಾನ ಆರಂಭ
ರಾಜ್ಯದಲ್ಲಿತುರ್ತು ಪರಿಸ್ಥಿತಿ ಘೋಷಣೆ ಮಾಡಿ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ. ಬಿಜೆಪಿಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿಯಲಾಗಿದೆ. ಇದೆಲ್ಲಬಿಜೆಪಿಯ ಅವಸಾನದ ಆರಂಭ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಭವಿಷ್ಯ ನುಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾತ್ಕಾಲಿಕವಾಗಿ ಪ್ರತಿಭಟನೆ ಮಂದೂಡಲಾಗಿದೆ. ಕೆಪಿಸಿಸಿ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬರುವ ದಿನಗಳಲ್ಲಿಕಾಯಿದೆ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದರು.

ದೇಶಕ್ಕಾಗಿ ಗಾಂಧಿ ಪ್ರಾಣವನ್ನೇ ನೀಡಿದ್ದಾರೆ. ಹೀಗಿರುವಾಗ, ದೇಶದ ಸಮಗ್ರತೆ, ಏಕತೆ ಹಾಳು ಮಾಡುತ್ತಿರುವ ಬಿಜೆಪಿಯ ನಿಲುವಿನ ವಿರುದ್ಧ ಹೋರಾಟ ಮಾಡುತ್ತ ನಾವು ಜೈಲಿಗೆ ಹೋಗಲೂ ಸಿದ್ಧರಿದ್ದೇವೆ. ಬಿಜೆಪಿ ವಿರುದ್ಧ ಹೋರಾಡುವುದಕ್ಕೆ ನಮಗೆ ಯಾವುದೇ ರೀತಿಯ ಭಯವಿಲ್ಲ. ಕೆಪಿಸಿಸಿ ನಿರ್ದೇಶನಕ್ಕಾಗಿ ಕಾಯುತ್ತೇವೆ ಎಂದು ಹೇಳಿದರು.

ಗಾಂಧಿಯನ್ನು ಕೊಂದವರು ನಮಗೆ ವಿವೇಕ ಹೇಳುತ್ತಿದ್ದಾರೆ. ಬಿಜೆಪಿಯವರಲ್ಲೇ ಒಂದು ವರ್ಗ ಗಾಂಧೀಜಿಯವರನ್ನು ವಿರೋಧಿಸುತ್ತದೆ. ಮತ್ತೊಂದು ಓಲೈಸುತ್ತದೆ. ಬಿಜೆಪಿಯ ನಡವಳಿಕೆ ನೋಡಿದರೆ, ನಾವು ನಮ್ಮ ದೇಶದಲ್ಲಿಯೇ ಇದ್ದೇವಾ ಎಂಬ ಅನುಮಾನ ಮೂಡುತ್ತಿದೆ ಎಂದರು.

===
ಪ್ರತಿಭಟನೆಗೆ ಪಟ್ಟು
ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಘೋಷಿಸುತ್ತಿದ್ದಂತೆಯೇ ಅಲ್ಲಿನೆರೆದಿದ್ದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ತಾವು ಹೋರಾಟ ಮಾಡುವುದಾಗಿ ಪಟ್ಟು ಹಿಡಿದರು. ಬಳಿಕ ಕೆಂಡಾಮಂಡಲಗೊಂಡ ಕಾರ್ಯಕರ್ತರನ್ನು ಶಾಂತ ಸ್ಥಿತಿಗೆ ತರಲು ಮುಖಂಡರು ಹರಸಾಹಸ ಪಟ್ಟರು. ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್‌ ಅವರು ಸಮಾಧಾನ ಮಾಡಿದರು.

===
ಬಿಜೆಪಿ ನಿಲುವು ಸರಿಯಲ್ಲ
ನಿಷೇಧಾಜ್ಞೆ ಜಾರಿ ಅಗತ್ಯವಿರದ್ದಿದ್ದರೂ ಬಿಜೆಪಿ ಈ ಕೆಲಸ ಮಾಡಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದೇ ಕಾಂಗ್ರೆಸ್‌ ಗುರಿಯಾಗಿದೆ. ಪೌರತ್ವ ಕಾಯಿದೆ ತಿದ್ದುಪಡಿ ವಿರುದ್ಧ ಹೋರಾಟ ಮಾಡಲಾಗುವುದು. ಇದಕ್ಕಾಗಿ, ಜೈಲುವಾಸಕ್ಕೂ ಸಿದ್ಧರಿದ್ದೇವೆ. ಡಿ.ಎಚ್‌.ಶಂಕರಮೂರ್ತಿ ಹಾಗೂ ಬಿಜೆಪಿಯೇ ದೇಶದ್ರೋಹಿಗಳು.
- ಕಾಗೋಡು ತಿಮ್ಮಪ್ಪ, ಮಾಜಿ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ