ಆ್ಯಪ್ನಗರ

ಲಿಂಗಧಾರಣೆ ಧಾರ್ಮಿಕ ಮಹತ್ವ ಅರಿಯಿರಿ

ಇತ್ತೀಚೆಗೆ ಗರ್ಭ ಸಂಸ್ಕಾರ, ಲಿಂಗಧಾರಣೆ ಕಡಿಮೆ ಆಗುತ್ತಿದ್ದು, ಪ್ರತಿಯೊಬ್ಬರು ಲಿಂಗಧಾರಣೆಯ ಧಾರ್ಮಿಕ ಮಹತ್ವ ಅರಿಯಬೇಕೆಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

Vijaya Karnataka 18 Aug 2019, 5:00 am
ಶಿವಮೊಗ್ಗ: ಇತ್ತೀಚೆಗೆ ಗರ್ಭ ಸಂಸ್ಕಾರ, ಲಿಂಗಧಾರಣೆ ಕಡಿಮೆ ಆಗುತ್ತಿದ್ದು, ಪ್ರತಿಯೊಬ್ಬರು ಲಿಂಗಧಾರಣೆಯ ಧಾರ್ಮಿಕ ಮಹತ್ವ ಅರಿಯಬೇಕೆಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
Vijaya Karnataka Web SMR-17ganesh7


ನಗರದ ಬಸವಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ ಬಸವಕೇಂದ್ರ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ್ದ ಇಷ್ಟಲಿಂಗ ವಿವಿಧ ಆಯಾಮ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಗರ್ಭ ಸಂಸ್ಕಾರ, ಲಿಂಗಧಾರಣೆ ಹಾಗೂ ಲಿಂಗ ದೀಕ್ಷೆ ಪ್ರತಿಯೊಬ್ಬ ಲಿಂಗಾಯತರಿಗೆ ಅತಿ ಅಗತ್ಯವಾದ ಪ್ರಕ್ರಿಯೆ. ಆದರೆ ಅನೇಕರು ಇದನ್ನು ಪಾಲಿಸುತ್ತಿಲ್ಲ . ಮಗು 8 ತಿಂಗಳ ಗರ್ಭದಲ್ಲಿ ಇರುವಾಗಲೇ ಗರ್ಭ ಸಂಸ್ಕಾರ ಮಾಡಬೇಕು. ಇದು ಗರ್ಭದಲ್ಲಿರುವ ಮಗುವಿಗೆ ಇಷ್ಟಲಿಂಗ ನೀಡುವ ಪದ್ಧತಿಯಾಗಿದೆ. ಮಗು ಹುಟ್ಟಿದ ನಂತರ ಲಿಂಗಧಾರಣೆ ಮಾಡುವುದರೊಂದಿಗೆ ನಾಮಕರಣ ಮಾಡಬೇಕೆಂದರು.

ಲಿಂಗಧಾರಣೆ ನಂತರ ಲಿಂಗದ ಬಗ್ಗೆ ನಂಬಿಕೆ ಮೂಡಿದಾಗ ಲಿಂಗದೀಕ್ಷೆ ಅಗತ್ಯವಾಗಿ ಆಗಬೇಕು. ಆದರೆ ಇತ್ತೀಚೆಗೆ ಕೇವಲ ಜಂಗಮರು ಲಿಂಗದೀಕ್ಷೆ ಪಡೆಯುತ್ತಿದ್ದು ಇತರರು ಲಿಂಗ ದೀಕ್ಷೆ ಪಡೆಯುತ್ತಿಲ್ಲ. ಪ್ರತಿಯೊಬ್ಬರೂ ಲಿಂಗ ದೀಕ್ಷೆ ಮಾಡಿಕೊಳ್ಳಬೇಕು, ಆಗ ಮಾತ್ರ ಪರಿಪೂರ್ಣ ಸಾಧನೆ ಸಾಧ್ಯ. ಲಿಂಗ ದೀಕ್ಷೆಯಿಂದ ನಮ್ಮಲ್ಲಿನ ದೋಷ ದೂರವಾಗುವುದರ ಜತೆಗೆ ಅಜ್ಞಾನ ಕಣ್ಮರೆಯಾಗುತ್ತದೆ ಎಂದರು.

ಪಂಚೆಂದ್ರೀಯಗಳಲ್ಲೂ ಲಿಂಗವಿದೆ. ಜೀವನದ ಎಲ್ಲಾ ಅನುಭವಗಳು ಲಿಂಗಕ್ಕೆ ಅರ್ಪಣೆ ಆಗುತ್ತವೆ. ಆದ್ದರಿಂದ ಲಿಂಗವು ಜತೆಗಿದ್ದರೆ ನಾವು ಮಾಡಿದ ಪುಣ್ಯ, ಪಾಪ ಎಲ್ಲವೂ ಲಿಂಗಕ್ಕೆ ಅರ್ಪಿತವಾಗಿ ನಾವು ನಿತ್ಯ ಮುಕ್ತರಾಗುತ್ತೇವೆ ಎಂದರು.

ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಶಿವಮೊಗ್ಗ ತಾಲೂಕು ಘಟಕವನ್ನು ಉದ್ಘಾಟಿಸಲಾಯಿತು. ಘಟಕದ ನಿರ್ದೇಶಕರಿಗೆ ಪ್ರಮಾಣಪತ್ರ ವಿತರಿಸಲಾಯಿತು. ನಂತರ ಶಶಿಧರ ಕರವೀರ ಶೆಟ್ಟರ್‌ ಉಪನ್ಯಾಸ ನೀಡಿದರು. ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್‌, ತಾಲೂಕು ಅಧ್ಯಕ್ಷ ಜೆ.ವಿಜಯಕುಮಾರ್‌ ಮತ್ತಿತರರು ಇದ್ದರು.

-----------
ಬಸವಣ್ಣ ತನ್ನ ಅಕ್ಕನಿಗೆ ಜನಿವಾರ ಹಾಕಲು ಒಪ್ಪಲಿಲ್ಲ ಎಂಬುದನ್ನು ವಿರೋಧಿಸಿ ಹೊರಬಂದು ಇಷ್ಟಲಿಂಗವನ್ನು ಎಲ್ಲರಿಗೂ ಕಟ್ಟಿದ. ಲಿಂಗ ಕಟ್ಟಿಕೊಂಡವರು ಅದಕ್ಕೆ ತಕ್ಕಂತೆ ಪ್ರಾಮಾಣಿಕ ಜೀವನ ನಡೆಸಬೇಕು. ಆಗ ಜೀವನ ಸಾರ್ಥಕ.

*ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ