ಆ್ಯಪ್ನಗರ

ಕಾನೂನು ತಿಳಿವಳಿಕೆ ಸಮಾಜ ಒಳಿತಿಗೆ ಸಹಕಾರಿ

ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಕಾನೂನಿನ ನೆರವು ಸಿಗಬೇಕು. ಕಾನೂನು ಸೇವಾ ಪ್ರಾಧಿಕಾರ ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಹೆಚ್ಚಾಗಬೇಕು ಎಂದು ತೀರ್ಥಹಳ್ಳಿ ಜೆಎಂಎಫ್‌ಸಿ ನ್ಯಾಯಾಧೀಶರಾದ ಗೀತಾಂಜಲಿ ಹೇಳಿದರು.

Vijaya Karnataka 19 Jul 2019, 5:00 am
ತೀರ್ಥಹಳ್ಳಿ: ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಕಾನೂನಿನ ನೆರವು ಸಿಗಬೇಕು. ಕಾನೂನು ಸೇವಾ ಪ್ರಾಧಿಕಾರ ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಹೆಚ್ಚಾಗಬೇಕು ಎಂದು ತೀರ್ಥಹಳ್ಳಿ ಜೆಎಂಎಫ್‌ಸಿ ನ್ಯಾಯಾಧೀಶರಾದ ಗೀತಾಂಜಲಿ ಹೇಳಿದರು.
Vijaya Karnataka Web knowing the law can help social good
ಕಾನೂನು ತಿಳಿವಳಿಕೆ ಸಮಾಜ ಒಳಿತಿಗೆ ಸಹಕಾರಿ


ತಾಲೂಕಿನ ಕೋಣಂದೂರು ರೋಟರಿ ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ಕಂದಾಯ, ಪೋಲಿಸ್‌ ಇಲಾಖೆ, ವಕೀಲರ ಸಂಘದ ಆಶ್ರಯದಲ್ಲಿ ಗುರುವಾರ ನಡೆದ ಕಾನೂನು ಸಾಕ್ಷರತಾ ಕಾರ‍್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶೋಷಿತರು, ಬಡವರು, ನೈಸರ್ಗಿಕ ದುರಂತದಿಂದ ನೊಂದವರು ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆಯಬಹುದಾಗಿದೆ. ಕಾನೂನಿನ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಂಡರೆ ಸಮಾಜಕ್ಕೆ ಅನುಕೂಲವಾಗುತ್ತದೆ. ಕಾನೂನು ತಿಳಿವಳಿಕೆ ಕುರಿತು ಸಮಾಜದಲ್ಲಿ ಜಾಗ್ರತೆ ಮೂಡಬೇಕು ಎಂದು ಗೀತಾಂಜಲಿ ಅಭಿಪ್ರಾಯಪಟ್ಟರು.

ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರ ಸಂಘದ ಉಪಾಧ್ಯಕ್ಷ ಎಂ.ಎನ್‌. ರಮೇಶ್‌ ಮಾತನಾಡಿದರು. ವೇದಿಕೆಯಲ್ಲಿ ತಹಶೀಲ್ದಾರ್‌ ಆನಂದಪ್ಪನಾಯಕ್‌, ಸಿಪಿಐ ಸುರೇಶ್‌, ಸರಕಾರಿ ಅಭಿಯೋಜಕ ಡಿ. ಬಿನು ಮಾತನಾಡಿದರು.

ನ್ಯಾಯಾಧೀಶರಾದ ಎನ್‌.ನಿವೇದಿತಾ, ಕೋಣಂದೂರು ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷೆ ಗಾಯಿತ್ರಿ, ಸದಸ್ಯರಾದ ಮೋಹನ್‌ಶೆಟ್ಟಿ, ಸತೀಶ್‌ಶೆಟ್ಟಿ, ಪಿಡಿಓ ವಿನಾಯಕ್‌ ಮತ್ತಿತರರು ಇದ್ದರು. ಕಾರ‍್ಯಗಾರದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

-------
ಕಾನೂನು ಪಾಲನೆ ಮಾಡುವ ಸಮಾಜ ಸದಾ ಕಾಲ ಸುಖಿ ಆಗಿರಲು ಸಾಧ್ಯ. ಶಾಸನಬದ್ಧವಾಗಿ ಸಿಗಬೇಕಾದ ಹಕ್ಕುಗಳು, ಸೌಕರ‍್ಯಗಳ ಕುರಿತು ಕಾನೂನು ಅರಿವು ಮುಖ್ಯ. ಸಂವಿಧಾನದಲ್ಲಿ ಇರುವಂತಹ ವಿಚಾರಗಳ ಕುರಿತು ಮಾಹಿತಿ ಇರಬೇಕು. ಕಾನೂನು ಸೇವಾ ಅರಿವು ಕಾರ‍್ಯಗಾರ ಹಲವು ವರ್ಷ ನಡೆಯುತ್ತಿರಲಿಲ್ಲ. ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ಕಾನೂನು ನೆರವು ಸಿಗುತ್ತದೆ.
- ಎಂ.ಎನ್‌.ರಮೇಶ್‌ , ವಕೀಲರ ಸಂಘದ ಉಪಾಧ್ಯಕ್ಷರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ