ಸಾಗರ : ದೈವಿಕ ಗ್ರಂಥ ಕುರಾನ್ ಕೃತಿಯು ಇಸ್ಲಾಂ ಧರ್ಮದ ಪರಿಪೂರ್ಣ ಮಾರ್ಗದರ್ಶಿ ಗ್ರಂಥವಾಗಿದೆ ಎಂದು ಅಹ್ಮದೀಯ ಮುಸ್ಲಿಂ ಸಂಘಟನೆಯ ಜಿಲ್ಲಾ ಪ್ರಚಾರ ಸಂಚಾಲಕ ತಾರೀಖ್ ಸಲ್ಮಾನ್ ಹೇಳಿದರು.
ಇಲ್ಲಿನ ಅಹ್ಮದೀಯ ಮುಸ್ಲಿಂ ಸಂಘಟನೆ ವತಿಯಿಂದ ಗುರುವಾರ ಕುರಾನ್ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಪ್ರಸ್ತುತ ಮುಸ್ಲಿಂ ಸಮಾಜದಲ್ಲಿ ಪವಿತ್ರ ಕುರಾನ್ನ ಸಂದೇಶಗಳ ಅನುಷ್ಠಾನ ಕಣ್ಮರೆಯಾಗುತ್ತಿದೆ. ದುರ್ವರ್ತನೆ, ಅಶ್ಲೀಲತೆ, ಅನಾಚಾರ, ಅಸಭ್ಯತೆ, ವಂಚನೆ, ಅನ್ಯಧರ್ಮದ ಮೇಲೆ ಅಪಹಾಸ್ಯದಂತಹ ಕೃತ್ಯಗಳು ಹೆಚ್ಚಾಗುತ್ತಿವೆ. ಇದರಿಂದ ಧರ್ಮಧರ್ಮಗಳ ನಡುವೆ ಭಿನ್ನಾಭಿಪ್ರಾಯ ತಲೆದೋರುತ್ತಿದ್ದು, ಕುರಾನ್ ನೀಡಿದ ಸಂದೇಶಕ್ಕೆ ಅವಮಾನ ಮಾಡಿದಂತಾಗುತ್ತದೆ ಎಂದರು.
ಶಾಂತಿ, ಸೌಹಾರ್ದತೆ, ಸಮಾನತೆ ಮತ್ತು ಕ್ಷ ಮಾಗುಣ, ಸಹನೆ, ಪ್ರಾಮಾಣಿಕತೆಯಂತಹ ನೈತಿಕ ಮತ್ತು ಮಾನವೀಯ ಗುಣಗಳನ್ನು ಪವಿತ್ರ ಕುರಾನ್ ಕಲಿಸುತ್ತದೆ. ಕುರಾನ್ನ ನೈಜ ಉಪದೇಶದ ಅರಿವಿನಿಂದ ಚಾರಿತ್ರ್ಯ ಶುದ್ಧಿ ಸಾಧ್ಯ ಎಂದರು. ಅಹ್ಮದೀಯ ಮುಸ್ಲಿಂ ಜಮಾತ್ನ ತಾಲೂಕು ಅಧ್ಯಕ್ಷ ಯೂಸೂಫ್ ಶರೀಫ್ ಸಾಬ್ ಅಧ್ಯಕ್ಷ ತೆ ವಹಿಸಿದ್ದರು. ಮೊಹಮದ್ ಜಫರುಲ್ಲಾ ಪ್ರಾರ್ಥಿಸಿದರು. ನದೀಮ್ ಅಹ್ಮದ್ ವಂದಿಸಿದರು. ನೇಮತುಲ್ಲಾ ನವಾಜ್ ನಿರೂಪಿಸಿದರು.
ಇಲ್ಲಿನ ಅಹ್ಮದೀಯ ಮುಸ್ಲಿಂ ಸಂಘಟನೆ ವತಿಯಿಂದ ಗುರುವಾರ ಕುರಾನ್ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಪ್ರಸ್ತುತ ಮುಸ್ಲಿಂ ಸಮಾಜದಲ್ಲಿ ಪವಿತ್ರ ಕುರಾನ್ನ ಸಂದೇಶಗಳ ಅನುಷ್ಠಾನ ಕಣ್ಮರೆಯಾಗುತ್ತಿದೆ. ದುರ್ವರ್ತನೆ, ಅಶ್ಲೀಲತೆ, ಅನಾಚಾರ, ಅಸಭ್ಯತೆ, ವಂಚನೆ, ಅನ್ಯಧರ್ಮದ ಮೇಲೆ ಅಪಹಾಸ್ಯದಂತಹ ಕೃತ್ಯಗಳು ಹೆಚ್ಚಾಗುತ್ತಿವೆ. ಇದರಿಂದ ಧರ್ಮಧರ್ಮಗಳ ನಡುವೆ ಭಿನ್ನಾಭಿಪ್ರಾಯ ತಲೆದೋರುತ್ತಿದ್ದು, ಕುರಾನ್ ನೀಡಿದ ಸಂದೇಶಕ್ಕೆ ಅವಮಾನ ಮಾಡಿದಂತಾಗುತ್ತದೆ ಎಂದರು.
ಶಾಂತಿ, ಸೌಹಾರ್ದತೆ, ಸಮಾನತೆ ಮತ್ತು ಕ್ಷ ಮಾಗುಣ, ಸಹನೆ, ಪ್ರಾಮಾಣಿಕತೆಯಂತಹ ನೈತಿಕ ಮತ್ತು ಮಾನವೀಯ ಗುಣಗಳನ್ನು ಪವಿತ್ರ ಕುರಾನ್ ಕಲಿಸುತ್ತದೆ. ಕುರಾನ್ನ ನೈಜ ಉಪದೇಶದ ಅರಿವಿನಿಂದ ಚಾರಿತ್ರ್ಯ ಶುದ್ಧಿ ಸಾಧ್ಯ ಎಂದರು. ಅಹ್ಮದೀಯ ಮುಸ್ಲಿಂ ಜಮಾತ್ನ ತಾಲೂಕು ಅಧ್ಯಕ್ಷ ಯೂಸೂಫ್ ಶರೀಫ್ ಸಾಬ್ ಅಧ್ಯಕ್ಷ ತೆ ವಹಿಸಿದ್ದರು. ಮೊಹಮದ್ ಜಫರುಲ್ಲಾ ಪ್ರಾರ್ಥಿಸಿದರು. ನದೀಮ್ ಅಹ್ಮದ್ ವಂದಿಸಿದರು. ನೇಮತುಲ್ಲಾ ನವಾಜ್ ನಿರೂಪಿಸಿದರು.