ಆ್ಯಪ್ನಗರ

ವಿದ್ಯೆ ಯಾರೂ ಕದಿಯಲಾಗದ ಸ್ವತ್ತು

ದಾನಗಳಲ್ಲೇ ಶ್ರೇಷ್ಠ ವಿದ್ಯಾದಾನ. ಕಲಿಕೆಯಲ್ಲಿಮಕ್ಕಳು, ಪೋಷಕರು ಹಾಗೂ ಶಿಕ್ಷಕರು ಸಮಾನ ಪಾತ್ರ ವಹಿಸುತ್ತಾರೆ ಎಂದು ಜಡೆ ಸಂಸ್ಥಾನದ ಮಠಾಧೀಶರಾದ ಡಾ. ಮಹಾಂತ ಸ್ವಾಮೀಜಿ ಹೇಳಿದರು.

Vijaya Karnataka 11 Jan 2020, 5:00 am
ಆನವಟ್ಟಿ: ದಾನಗಳಲ್ಲೇ ಶ್ರೇಷ್ಠ ವಿದ್ಯಾದಾನ. ಕಲಿಕೆಯಲ್ಲಿಮಕ್ಕಳು, ಪೋಷಕರು ಹಾಗೂ ಶಿಕ್ಷಕರು ಸಮಾನ ಪಾತ್ರ ವಹಿಸುತ್ತಾರೆ ಎಂದು ಜಡೆ ಸಂಸ್ಥಾನದ ಮಠಾಧೀಶರಾದ ಡಾ. ಮಹಾಂತ ಸ್ವಾಮೀಜಿ ಹೇಳಿದರು.
Vijaya Karnataka Web 225309AVT NEWS P1_46
ಕೋಟಿಪುರದ ಎವರಾನ್‌ ಶಾಲೆಯ ಎವರಾನ್‌ ರಾಕ್ಸ್‌ನ ಅನ್ವೇಷಣಾ ಕಾರ‍್ಯಕ್ರಮದಲ್ಲಿಸಾನ್ನಿಧ್ಯ ವಹಿಸಿದ್ದ ಮೂಡಿ ವಿರಕ್ತ ಮಠದ ಸದಾಶಿವ ಸ್ವಾಮಿಜಿ ಆಶೀರ್ವಚನ ನೀಡಿದರು. ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಇದ್ದರು.


ಆನವಟ್ಟಿ ಹೋಬಳಿಯ ಕೋಟಿಪುರದ ಎವರಾನ್‌ ಶಾಲೆಯ ಎವರಾನ್‌ ರಾಕ್ಸ್‌ ಅನ್ವೇಷಣಾ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಮೂಡಿ ವಿರಕ್ತ ಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿ, ಲೌಖಿಕ ಶಿಕ್ಷಣ ಶಾಲೆಯಲ್ಲಿದೊರೆಯುತ್ತದೆ. ಲೌಖಿಕಕ್ಕೂ ಮೀರಿದ ವಿದ್ಯೆ ಸಂಸ್ಕಾರ. ತಂದೆ-ತಾಯಿ, ಪೋಷಕರು ಉತ್ತಮ ಸಂಸ್ಕಾರ ಮಕ್ಕಳಲ್ಲಿಮೂಡಿಸಿದರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದಂತಾಗುತ್ತದೆ. ವಿದ್ಯೆ ಯಾರು ಕದಿಯಲಾಗದ ಸ್ವತ್ತು. ಪಠ್ಯೇತರ ಚಟುವಟಿಕೆ ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಸಹಕಾರಿ ಎಂದರು.

ಕಲಿಕೆಯಿಂದಾಗಿ ಮಕ್ಕಳು ನಮ್ಮನ್ನೆ ಪ್ರಶ್ನೆ ಮಾಡುವಷ್ಟು ಬುದ್ಧಿವಂತರಾಗುತ್ತಿದ್ದಾರೆ. ಜಾಗತೀಕರಣದಿಂದಾಗಿ ಸ್ಮಾರ್ಟ್‌ಫೋನ್‌ ಮಕ್ಕಳ ಕೈಗೆ ಸುಲಭವಾಗಿ ಸಿಗುತ್ತಿವೆ. ಆದ್ದರಿಂದ ಮಕ್ಕಳು ಫೋನ್‌ ಉಪಯೋಗಿಸುವ ಬಗ್ಗೆ ಪೋಷಕರು ಸದಾ ಗಮನ ಇಡಬೇಕೆಂದರು. ನೇತ್ರಾವತಿ ಮಾತನಾಡಿ, ಶಿಕ್ಷೆಯಿಂದ ಶಿಕ್ಷಣ ಸಾಧ್ಯವಿಲ್ಲ. ತಿಳುವಳಿಕೆಯ ಮೂಲಕ ಮಕ್ಕಳ ಮನಸ್ಸನ್ನು ಗೆಲ್ಲಬೇಕು. ಮಕ್ಕಳಲ್ಲಿರುವ ಭಾವನೆ ಅರಿತು ಬೋಧನೆ ನೀಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.

ಶಾಲಾ ಸಂಸ್ಥಾಪಕ ಎಂ.ಎಸ್‌. ಕಾರ್ತಿಕ್‌ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿಚರಿತಾ ಕಾರ್ತಿಕ್‌, ಜಯಲಿಂಗಪ್ಪ ಶೆಟ್ಟರು ಹುರುಳಿ, ಪತ್ರಕರ್ತರ ಸಂಘದ ಅಧ್ಯಕ್ಷ ನಟರಾಜ ಉಡುಗಣಿ, ಹಿರಿಯ ಪತ್ರಕರ್ತ ಯು.ಎನ್‌.ಲಕ್ಷಿತ್ರ್ಮಕಾಂತ್‌ ಸೊರಬ ಇದ್ದರು.

------
ವಿದ್ಯೆ ಎಂಬುದು ಜೀವನ ಪರ‍್ಯಂತ ಮನುಷ್ಯನ ಜತೆಗೆ ಸಾಗುತ್ತದೆ. ಕನ್ನಡ ನಮ್ಮ ಮಾತೃಭಾಷೆಯಾಗಿದ್ದರೂ ಜೀವನ ನಿರ್ವಹಣೆಗಾಗಿ ಹಾಗೂ ಎಲ್ಲಭಾಷೆಗಳಿಗೆ ಗೌರವ ನೀಡಲು ಬೇರೆ ಭಾಷೆ ಕಲಿಯುವುದು ಅವಶ್ಯಕ.
-ಡಾ.ಮಹಾಂತಸ್ವಾಮೀಜಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ