ಆ್ಯಪ್ನಗರ

ಲಾಭದತ್ತ ಕೊಡಚಾದ್ರಿ ಅಡಕೆ ಸೌಹಾರ್ದ ಸಂಸ್ಥೆ

ಕೊಡಚಾದ್ರಿ ಅಡಕೆ ಸೌಹಾರ್ದ ಸಹಕಾರಿಯ 19ನೇ ಸರ್ವ ಸದಸ್ಯರ ಸಭೆ ಬುಧವಾರ ಇಲ್ಲಿನ ಗಾಯತ್ರಿ ಮಂದಿರದಲ್ಲಿನಡೆಯಿತು. ಬೊಮ್ಮಲಾಪುರದ ವೇದ ಬ್ರಹ್ಮಶ್ರೀ ಅನಂತಭಟ್‌ ಸಭೆಗೆ ಚಾಲನೆ ನೀಡಿದರು.

Vijaya Karnataka 15 Sep 2019, 5:00 am
ಹೊಸನಗರ: ಕೊಡಚಾದ್ರಿ ಅಡಕೆ ಸೌಹಾರ್ದ ಸಹಕಾರಿಯ 19ನೇ ಸರ್ವ ಸದಸ್ಯರ ಸಭೆ ಬುಧವಾರ ಇಲ್ಲಿನ ಗಾಯತ್ರಿ ಮಂದಿರದಲ್ಲಿನಡೆಯಿತು. ಬೊಮ್ಮಲಾಪುರದ ವೇದ ಬ್ರಹ್ಮಶ್ರೀ ಅನಂತಭಟ್‌ ಸಭೆಗೆ ಚಾಲನೆ ನೀಡಿದರು.
Vijaya Karnataka Web 421613HOSP1_46


ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ನಿವಣೆ ಸೀತಾರಾಮ ಭಟ್‌ ಮಾತನಾಡಿ, ಸಂಸ್ಥೆಯು ದಶಕಗಳಿಂದ ಅಡಕೆ ಬೆಳೆಗಾರರ ಹಿತಾಸಕ್ತಿ ಕಾಪಾಡಲು ಶ್ರಮ ವಹಿಸುತ್ತಾ ಬಂದಿದೆ. ಆರ್ಥಿಕವಾಗಿ ಸದೃಢವಾಗಿದ್ದು, ಸಂಸ್ಥೆ ಯಶಸ್ಸಿನ ಹಿಂದೆ ಸದಸ್ಯರ ಸಹಕಾರ, ಆಡಳಿತ ಮಂಡಳಿ ಶ್ರಮ ಅಡಗಿದೆ ಎಂದರು.

ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಎನ್‌.ಬಿ.ಬಾಲಚಂದ್ರ ಮಾತನಾಡಿ, 2018-19ನೇ ಸಾಲಿನಲ್ಲಿ16 ಸಾವಿರ ಅಡಕೆ ಮೂಟೆ ಆವಕವಾಗಿದ್ದು, ವಾರ್ಷಿಕ ರೂ. 42 ಲಕ್ಷ ನಿವ್ವಳ ಲಾಭಗಳಿಸಿದೆ. ಸಂಸ್ಥೆಯು ರೂ. 3 ಕೋಟಿಗೂ ಅಧಿಕ ಮೌಲ್ಯದ ಸ್ಥಿರಾಸ್ತಿ ಹೊಂದಿದೆ. ಪ್ರಸ್ತುತ 2611 ಸದಸ್ಯರು ಸಂಸ್ಥೆಯಲ್ಲಿವ್ಯವಹರಿಸುತ್ತಿದ್ದು, 1.70 ಕೋಟಿ ಷೇರು ಹಣ ಸಂಗ್ರಹಿಸಲಾಗಿದೆ. ರೂ.8.16 ಕೋಟಿ ವಿವಿಧ ಸಾಲ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ಈಶ್ವರಪ್ಪಗೌಡ, ನಿರ್ದೇಶಕರಾದ ಕೃಷ್ಣಮೂರ್ತಿ ಕುಂಭತ್ತಿ, ಮಾರುತಿ, ದೇವೇಂದ್ರಪ್ಪ, ಲೆಕ್ಕಪರಿಶೋಧಕ ಬಿ.ವಿ.ರವೀಂದ್ರನಾಥ್‌ ಮತ್ತಿತರರು ಇದ್ದರು. ನಿರ್ದೇಶಕ ಹನಿಯ ರವಿ ಸ್ವಾಗತಿಸಿ, ಗರ್ತಿಕೆರೆ ರಾಘವೇಂದ್ರ ನಿರೂಪಿಸಿದರು. ಹುಲುಗಾರು ಜಗದೀಶ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ