ಆ್ಯಪ್ನಗರ

ಇಂದು ತುಂಗೆಯಲ್ಲಿ ವೈಭವದ ತೆಪ್ಪೋತ್ಸವ

ನಗರದ ಪುರಾಣ ಪ್ರಸಿದ್ಧ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆಯುತ್ತಿರುವ ಶ್ರೀಸೀತಾಕಲ್ಯಾಣ ಮಹೋತ್ಸವ ಅಂಗವಾಗಿ ಡಿ.22ರಂದು ಸಂಜೆ ಕೋರ್ಪಲಯ್ಯನ ಛತ್ರದ ಬಳಿಯ ತುಂಗಾ ನದಿಯಲ್ಲಿ ಶ್ರೀಸೀತಾರಾಮಾಂಜನೇಯ ಸ್ವಾಮಿಯ ವೈಭವದ ತೆಪ್ಪೋತ್ಸವ ನೆರವೇರಲಿದೆ.

Vijaya Karnataka 22 Dec 2018, 5:00 am
ಶಿವಮೊಗ್ಗ: ನಗರದ ಪುರಾಣ ಪ್ರಸಿದ್ಧ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆಯುತ್ತಿರುವ ಶ್ರೀಸೀತಾಕಲ್ಯಾಣ ಮಹೋತ್ಸವ ಅಂಗವಾಗಿ ಡಿ.22ರಂದು ಸಂಜೆ ಕೋರ್ಪಲಯ್ಯನ ಛತ್ರದ ಬಳಿಯ ತುಂಗಾ ನದಿಯಲ್ಲಿ ಶ್ರೀಸೀತಾರಾಮಾಂಜನೇಯ ಸ್ವಾಮಿಯ ವೈಭವದ ತೆಪ್ಪೋತ್ಸವ ನೆರವೇರಲಿದೆ.
Vijaya Karnataka Web SMG-2112-2-15-IMG-20181221-WA0027


ದೇವಾಲಯ ಆವರಣದಿಂದ ತುಂಗಾ ನದಿ ತೀರಕ್ಕೆ ಸಂಜೆ 7ಕ್ಕೆ ದೇವರ ಉತ್ಸವ ಮೂರ್ತಿಯ ಮೆರವಣಿಗೆ ಹೊರಡಲಿದ್ದು, 8ಗಂಟೆಗೆ ಆರಂಭವಾಗುವ ತೆಪ್ಪೋತ್ಸವದಲ್ಲಿ ಆಕರ್ಷಕ ಬಿರುಸುಬಾಣ, ಪಟಾಕಿ ಸಿಡಿತ ಉತ್ಸವದ ಮೆರಗನ್ನು ಹೆಚ್ಚಿಸಲಿದೆ. ನದಿ ತೀರದಲ್ಲಿ ಸಂಜೆಯಿಂದಲೇ ಸಂಗೀತ ಕಾರ್ಯಕ್ರಮ, ದೇವಾಲಯ ಭಜನಾ ಮಂಡಳಿ ಸದಸ್ಯರಿಂದ ಭಜನೆ ನಡೆಯಲಿದ್ದು, ಉತ್ಸವದ ನಂತರ ಪ್ರಸಾದ ವಿತರಣೆಯಾಗಲಿದೆ.

ತೆಪ್ಪೋತ್ಸವ ನಡೆದು ಬಂದ ಹಾದಿ
ಮೊದಲು 8-10 ವರ್ಷಗಳ ಕಾಲ ಬಿದಿರು ಬೊಂಬುಗಳ ತೆಪ್ಪದಲ್ಲಿ ದೇವಾಲಯ ಸಮೀಪದ ತುಂಗಾ ನದಿಯ ಭೀಮನ ಮಡುವಲ್ಲಿ ತೆಪ್ಪೋತ್ಸವ ನಡೆಯಿತು. ನಂತರ ಜೋಡಿ ದೋಣಿಯಲ್ಲಿ ಅದೇ ಜಾಗದಲ್ಲಿ 4-5 ವರ್ಷ ಕಾಲ ತೆಪ್ಪೋತ್ಸವ ಮುಂದುವರಿಯಿತು. ಮಡುವಿನ ಜಾಗ ದರ್ಶನಾಕಾಂಕ್ಷಿ ಭಕ್ತರ ಮತ್ತು ಉತ್ಸವ ಮೂರ್ತಿಯ ಸುರಕ್ಷತೆಗೆ ಸೂಕ್ತ ತಾಣವಲ್ಲ ಎಂದು ಕೋರ್ಪಲಯ್ಯ ಛತ್ರದ ಬಳಿಗೆ ಸ್ಥಳಾಂತರಿಸಲಾಯಿತು. ಅಂದಿನಿಂದ ತೆಪ್ಪೋತ್ಸವದ ಸ್ವರೂಪದಲ್ಲಿ ಕಾಲಕಾಲಕ್ಕೆ ನವೀನ ರೀತಿಯಲ್ಲಿ ತೆಪ್ಪವನ್ನು ನಿರ್ಮಿಸಿ ಉತ್ಸವ ನಡೆಸಲಾಗುತ್ತಿದೆ.

ಕಲ್ಯಾಣೋತ್ಸವ ಸಮಿತಿ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತಿದ್ದ ತೆಪ್ಪೋತ್ಸವವನ್ನು ಒಂದು ಸ್ವತಂತ್ರ ಸಮಿತಿ ರಚಿಸಿ ಅದರ ಮೇಲ್ವಿಚಾರಣೆಯಲ್ಲಿ ಮತ್ತಷ್ಟು ಅದ್ದೂರಿಯಿಂದ ತೆಪ್ಪೋತ್ಸವ ನಡೆಸಲಾಗುತ್ತಿದೆ. ಈ ಸಮಿತಿಯು ಕಳೆದ 18 ವರ್ಷಗಳಿಂದ ಅದ್ದೂರಿಯಾಗಿ ತೆಪ್ಪೋತ್ಸವವನ್ನು ನಡೆಸಿಕೊಂಡು ಬರುತ್ತಿದೆ.

ಉತ್ಸವಕ್ಕೆ 15 ದಿನಕ್ಕೂ ಮುನ್ನವೇ ಸಮಿತಿಯು ತುಂಗಾ ಹಳೆ ಸೇತುವೆ, ಕೋರ್ಪಳ್ಳಯ್ಯನ ಛತ್ರದ ಬಳಿಯ ಕಲ್ಲಿನ ಮಂಟಪ, ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸಿ, ಸುಣ್ಣಬಣ್ಣ ಬಳಿಯಲಾಗಿದೆ.

ಝಗ ಝಗಿಸುವ ವಿದ್ಯುತ್‌ ದೀಪಾಲಂಕಾರ, ಬಣ್ಣ-ಬಣ್ಣದ ಹೂ ಬೆಳಕನ್ನು ಹೊರಹಾಕುವ ಸುಡುಮದ್ದುಗಳು, ಸುಶ್ರಾವ್ಯವಾದ ಮಂಗಳವಾದ್ಯ, ಭಕ್ತಿ ಸಂಗೀತ ಹಾಗೂ ಮನಕ್ಕೆ ಮುದ ನೀಡುವ ಭಜನೆ ಇವುಗಳೆಲ್ಲದರ ಮಧ್ಯೆ ಸರ್ವಾಲಂಕಾರ ಭೂಷಿತ ಶ್ರೀ ಕೋದಂಡರಾಮರ ಉತ್ಸವ ಮೂರ್ತಿ ತೆಪ್ಪದಲ್ಲಿ ಬಿಜಯ ಮಾಡುವುದನ್ನು ನೋಡಲು ಭಕ್ತ ಸಾಗರವೇ ನೆರೆದಿರುತ್ತದೆ. ನಗರದ ಜನತೆ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ತೆಪ್ಪೋತ್ಸವ ಸಮಿತಿ ಅಧ್ಯಕ್ಷರಾದ ಬಿ.ವಿ.ಗೋಪಾಲಕೃಷ್ಣ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ