ಆ್ಯಪ್ನಗರ

ಕ್ಷತ್ರಿಯ ಸಮಾಜದ ಸಮ್ಮೇಳನ ನಾಳೆ

ಜಿಲ್ಲಾ ಕ್ಷತ್ರಿಯ ಸಮಾಜದಿಂದ ಜ.6ರಂದು ಬೆಳಗ್ಗೆ 10ಕ್ಕೆ ಲಗನಾ ಮಂದಿರದಲ್ಲಿ ಜಿಲ್ಲಾ ಕ್ಷತ್ರಿಯ ಸಮಾಜ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ರಾಜ್ಯ ಉಪಾಧ್ಯಕ್ಷ ಆಯನೂರು ರವಿಕುಮಾರ್‌ ಹೇಳಿದರು.

Vijaya Karnataka 5 Jan 2019, 5:00 am
ಶಿವಮೊಗ್ಗ: ಜಿಲ್ಲಾ ಕ್ಷತ್ರಿಯ ಸಮಾಜದಿಂದ ಜ.6ರಂದು ಬೆಳಗ್ಗೆ 10ಕ್ಕೆ ಲಗನಾ ಮಂದಿರದಲ್ಲಿ ಜಿಲ್ಲಾ ಕ್ಷತ್ರಿಯ ಸಮಾಜ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ರಾಜ್ಯ ಉಪಾಧ್ಯಕ್ಷ ಆಯನೂರು ರವಿಕುಮಾರ್‌ ಹೇಳಿದರು.
Vijaya Karnataka Web kshatriya society conference
ಕ್ಷತ್ರಿಯ ಸಮಾಜದ ಸಮ್ಮೇಳನ ನಾಳೆ


ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಅವರು ಮಾತನಾಡಿ, ಕ್ಷತ್ರಿಯ ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಜಿಲ್ಲೆಯಲ್ಲಿ ಯುವ ಸಂಘಟನೆ, ಮಹಿಳಾ ಸಂಘಟನೆ, ನೌಕರರ ಸಂಘಟನೆ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಗ್ರಾಮಗಳ ಗ್ರಾಮ ಘಟಕಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಕ್ಷತ್ರಿಯ ಮಹಿಳಾ ವೇದಿಕೆ ಮತ್ತು ಶಿವಮೊಗ್ಗ ಜಿಲ್ಲಾ ಕ್ಷತ್ರಿಯ ಯುವ ವೇದಿಕೆಗಳ ಉದ್ಘಾಟನೆ ಜತೆಗೆ ಕರ್ನಾಟಕ ಪ್ರದೇಶ ಹಿಂದೂ ಕ್ಷತ್ರಿಯ ಸಂಘದ ರಾಜ್ಯ ಸಮಿತಿ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಸಮ್ಮೇಳನ ಮೂಲಕ ಕ್ಷತ್ರಿಯ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ, ಕ್ಷತ್ರಿಯ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ, ಕ್ಷತ್ರಿಯ ಸಮಾಜದ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿ ನಿಲಯ ಸ್ಥಾಪನೆ, ಜಿಲ್ಲಾ ಕ್ಷತ್ರಿಯರ ಸಹಕಾರ ಸಂಘ ಸ್ಥಾಪನೆ ಇತರೆ ಬೇಡಿಕೆಗಳ ಈಡೇರಿಕೆಗೆ ಸರಕಾರವನ್ನು ಒತ್ತಾಯಿಸಲಾಗುವುದು ಎಂದರು. ಗೋಷ್ಠಿಯಲ್ಲಿ ಪ್ರಮುಖರಾದ ಧರ್ಮಪ್ಪ, ಬಿ.ಚಂದ್ರಪ್ಪ, ಮಂಜಪ್ಪ, ದುರ್ಗಪ್ಪ, ಎ.ಆರ್‌.ಲಂಕೇಶಪ್ಪ, ಮಂಜುನಾಥ್‌, ಯಲ್ಲಪ್ಪ ಮತ್ತಿತರರು ಇದ್ದರು.


===============================
ಈ ಸಮ್ಮೇಳನವನ್ನು ಆನೆಗೊಂದಿ ಸಂಸ್ಥಾನದ ರಾಜ ಶ್ರೀ ಕೃಷ್ಣದೇವರಾಯ ಅರಸ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಉದ್ಘಾಟಿಸುವರು. ಶಾಸಕ ಕೆ.ಎಸ್‌.ಈಶ್ವರಪ್ಪ, ಕರ್ನಾಟಕ ಪ್ರದೇಶದ ಹಿಂದೂ ಕ್ಷತ್ರಿಯ ಸಂಘದ ಗೌರವಾಧ್ಯಕ್ಷ ಡಾ.ಎಚ್‌.ಎಫ್‌.ಯೋಗಪ್ಪನವರ್‌, ರಾಜ್ಯಾಧ್ಯಕ್ಷ ರಾಮನಗೌಡ ಬಿ.ಪಾಟೀಲ್‌, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್‌ ಸದಸ್ಯರು, ಹಾಲಿ ಹಾಗೂ ಮಾಜಿ ಶಾಸಕರು, ಪಕ್ಷದ ಮುಖಂಡರು ಇತರರು ಭಾಗವಹಿಸುವರು.
-ಆಯನೂರು ರವಿಕುಮಾರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ