ಆ್ಯಪ್ನಗರ

ಶೃಂಗೇರಿ ಶ್ರೀಗಳ ಸಾನ್ನಿಧ್ಯದಲ್ಲಿ ಕುಂಭಾಭಿಷೇಕ

ಅಡ್ಡಿ ಆತಂಕಗಳ ನಡುವೆಯೂ ಧಾರ್ಮಿಕ ಕಾರ‍್ಯಕ್ರಮಗಳು, ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳು ಸಫಲವಾಗುವುದು ನಂಬಿಕೆಯ ಸಂಕೇತ ಎಂದು ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ ಸಿಗಂದೂರು ಹೇಳಿದರು.

Vijaya Karnataka 27 Apr 2019, 5:00 am
ಸಾಗರ: ಅಡ್ಡಿ ಆತಂಕಗಳ ನಡುವೆಯೂ ಧಾರ್ಮಿಕ ಕಾರ‍್ಯಕ್ರಮಗಳು, ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳು ಸಫಲವಾಗುವುದು ನಂಬಿಕೆಯ ಸಂಕೇತ ಎಂದು ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ ಸಿಗಂದೂರು ಹೇಳಿದರು.
Vijaya Karnataka Web SMR-24sgr1


ತಾಲೂಕಿನ ಹೊಸಗುಂದದಲ್ಲಿ ಬುಧವಾರ ಹೊಸಗುಂದ ಉಮಾಮಹೇಶ್ವರ ಸೇವಾ ಟ್ರಸ್ಟ್‌ ವತಿಯಿಂದ ಏ. 29ರಿಂದ ಮೇ 3ರವರೆಗೆ ಶೃಂಗೇರಿ ಶಂಕರ ಮಠದ ಶ್ರೀವಿಧುಶೇಖರ ಭಾರತೀ ಸಾನ್ನಿಧ್ಯದಲ್ಲಿ ನಡೆಯಲಿರುವ ದೇವಸ್ಥಾನದ ಪುನಾಪ್ರತಿಷ್ಠಾ ಸಹಿತ ಕುಂಭಾಭಿಷೇಕ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದೇವಸ್ಥಾನ ಪುನರುಜ್ಜೀವನಗೊಳಿಸುವುದು ಶ್ರೇಷ್ಠ ಸಂಕಲ್ಪವಾಗಿದ್ದು, ಅಂಥ ಕೆಲಸವನ್ನು ಸಿ.ಎಂ.ಎನ್‌.ಶಾಸ್ತ್ರಿ ಮತ್ತು ತಂಡದವರು ಅನೇಕ ವರ್ಷಗಳಿಂದ ಗ್ರಾಮಸ್ಥರು ಮತ್ತು ದಾನಿಗಳ ಸಹಕಾರದಿಂದ ಮಾಡಿಕೊಂಡು ಬಂದಿದ್ದಾರೆ. ಅಂಥ ಕಾರ‍್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದರು.

ಸಾಗರ ಶೃಂಗೇರಿ ಶಂಕರಮಠದ ಅಶ್ವಿನಿಕುಮಾರ್‌ ಮಾತನಾಡಿ, ಶೃಂಗೇರಿ ಶಂಕರಪೀಠದ ಶ್ರೀವಿಧುಶೇಖರ ಭಾರತಿ ಸ್ವಾಮಿಗಳು ಹೊಸಗುಂದದಲ್ಲಿ ನಡೆಯುವ ದೇವಸ್ಥಾನದಲ್ಲಿ ಪುನಾ ಪ್ರತಿಷ್ಠಾ ಸಹಿತ ಕುಂಭಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಸ್ಮರಣೀಯ ಸಂಗತಿಯಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲ ಜಾತಿವರ್ಗದವರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವ ಸಂಕಲ್ಪ ಕೈಗೊಳ್ಳಬೇಕಾಗಿದೆ. ಶೃಂಗೇರಿ ಮಠವು ಧಾರ್ಮಿಕ ಪರಂಪರೆಗೆ, ಆಚರಣೆಗೆ ಆದ್ಯತೆ ನೀಡಿದೆ ಎಂದರು. ಟ್ರಸ್ಟ್‌ ಮುಖ್ಯಸ್ಥ ಸಿ.ಎಂ.ಎನ್‌.ಶಾಸ್ತ್ರಿ ಮಾತನಾಡಿ, 2001ರ ಮೇ 4ರಂದು ಉಮಾಮಹೇಶ್ವರ ದೇವಸ್ಥಾನ ಪುನರುಜ್ಜೀವನಗೊಳಿಸುವ ಕೆಲಸಕ್ಕೆ ಚಾಲನೆ ನೀಡಲಾಯಿತು. ಶೃಂಗೇರಿ ಜಗದ್ಗುರುಗಳ ಮಾರ್ಗದರ್ಶನ ಮತ್ತು ಆಶೀರ್ವಾದ, ಧರ್ಮಸ್ಥಳ ಡಾ.ವೀರೇಂದ್ರ ಹೆಗ್ಗಡೆಯವರ ಸಲಹೆಯಂತೆ ಶಿಥಿಲಾವಸ್ಥೆಯಲ್ಲಿದ್ದ ದೇವಸ್ಥಾನ ಪುನರ್‌ ಪ್ರತಿಷ್ಠಾಪಿಸಲಾಗಿದೆ ಎಂದರು.

ಕೃಷ್ಣಮೂರ್ತಿ ಜೋಯ್ಸ್‌, ಹೆಡತ್ರಿ ಬಸವರಾಜಗೌಡ, ಶೇಷಗಿರಿ ಹೆಗಡೆ, ಗಿರೀಶ್‌ ಕೋವಿ, ಸ್ವಾಮಿರಾವ್‌ ಹೊಸಗುಂದ, ವಿನಾಯಕ ಭಟ್ಟ, ಮಹೇಶ್‌ ಮಂಕಾಳೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ