ಆ್ಯಪ್ನಗರ

ಅಧಿಕಾರಿಗಳ ದೃಢ ನಿರ್ಧಾರದಿಂದ ಮಾತ್ರ ನವುಲೆ ಕೆರೆ ಉಳಿವು

ನಗರದ ನವುಲೆ ಕರೆ ಪ್ರಕರಣ ಈಗ ಉದ್ವಿಗ್ನಗೊಂಡಿದ್ದು, ನಾಗರಿಕ ಹಿತರಕ್ಷಣಾ ವೇದಿಕೆಯ ಚಿತ್ತ ಕೆರೆ ಉಳಿಸುವ ಕಡೆಯಾದರೆ, ಇತ್ತ ಅಧಿಕಾರಿಗಳ ಚಿತ್ತ ಹೋರಾಟವನ್ನು ಹತ್ತಿಕ್ಕುವ ಹಾಗೂ ಪರಿಸರಾಸಕ್ತರನ್ನು ಯಾಮಾರಿಸುವತ್ತ ಎಂಬಂತಾಗಿದೆ ಎಂದು ಪರಿಸರಾಸಕ್ತ ನಾಗರಿಕ ನಾಗರಾಜ್‌ ಶೆಟ್ಟರ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Vijaya Karnataka 14 Feb 2018, 5:00 am

ಶಿವಮೊಗ್ಗ: ನಗರದ ನವುಲೆ ಕರೆ ಪ್ರಕರಣ ಈಗ ಉದ್ವಿಗ್ನಗೊಂಡಿದ್ದು, ನಾಗರಿಕ ಹಿತರಕ್ಷಣಾ ವೇದಿಕೆಯ ಚಿತ್ತ ಕೆರೆ ಉಳಿಸುವ ಕಡೆಯಾದರೆ, ಇತ್ತ ಅಧಿಕಾರಿಗಳ ಚಿತ್ತ ಹೋರಾಟವನ್ನು ಹತ್ತಿಕ್ಕುವ ಹಾಗೂ ಪರಿಸರಾಸಕ್ತರನ್ನು ಯಾಮಾರಿಸುವತ್ತ ಎಂಬಂತಾಗಿದೆ ಎಂದು ಪರಿಸರಾಸಕ್ತ ನಾಗರಿಕ ನಾಗರಾಜ್‌ ಶೆಟ್ಟರ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ನಾ' ಮೇಲು 'ತಾ' ಮೇಲು ಎಂಬ ಈ ಜಿದ್ದಾ ಜಿದ್ದಿಗೆ ಬಿದ್ದಿರುವ ವೇದಿಕೆ ಮತ್ತು ಅಧಿಕಾರಿಗಳ ಸಮಬಲದ ಹೋರಾಟದಿಂದ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಕೆರೆ ಮುಚ್ಚಿ ರಸ್ತೆ ಮಾಡುವ ಬದಲು ಅಗತ್ಯವಿರುವಷ್ಟು ಕಾಂಕ್ರಿಟ್‌ ಪಿಲ್ಲರ್‌ ಬಳಸಿ ಸೇತುವೆ ರೀತಿಯಲ್ಲಿ ರಸ್ತೆ ಮಾಡಿ ಎಂಬುದು ವೇದಿಕೆ ಆಗ್ರಹವಾಗಿದ್ದರೆ, ಇದು ಸಾಧ್ಯವಿಲ್ಲ ಎಂಬ ನಿಲುವು ಅಧಿಕಾರಿಗಳದ್ದಾಗಿದೆ.

ಶಿವಮೊಗ್ಗ ಸ್ಮಾರ್ಟ್‌ ಸಿಟಿ ಆಗುತ್ತಿರುವ ಸಂದರ್ಭ ಮೂಲ ಸೌಕರ್ಯ ಹಾಗೂ ನಗರದ ಸೌಂದರ್ಯ ಎರಡನ್ನೂ ಗಣನೆಯಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕಾದ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ. ಇರುವ ಕೆರೆಯನ್ನು ಕಳೆದುಕೊಳ್ಳದೆ ಹೈಟೆಕ್‌ ಟಚ್‌ ಮೂಲಕ ಅಭಿವೃದ್ಧಿ ಪಡಿಸುವತ್ತ ಚಿಂತನೆ ನಡೆಯಬೇಕಿದೆ. ಅತ್ತ ಕೆರೆಯೂ ಉಳಿಯಬೇಕು, ಇತ್ತ ರಸ್ತೆಯೂ ಆಗಬೇಕು ಎಂದರೆ ಮೇಲ್‌ ಸೇತುವೆ ನಿರ್ಮಿಸಿದರೆ ಕೆರೆಯ ಸೌಂದರ್ಯವೂ ಹೆಚ್ಚುತ್ತದೆ. ತಿರುವೂ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ದೃಢ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ