ಆ್ಯಪ್ನಗರ

ವಿವಿ ಕಾಮಗಾರಿಗೆ ಜಮೀನು ತೆರವು ಯತ್ನ

ಯಡೇಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಇರುವಕ್ಕಿ ಗ್ರಾಮದಲ್ಲಿಕೃಷಿ ಮತ್ತು ತೋಟಗಾರಿಕೆ ವಿವಿ ಹೊಸ ಆವರಣ ನಿರ್ಮಿಸುವ ಕಾಮಗಾರಿ ಜತೆ ರೈತರ ಕೃಷಿ ಜಮೀನನ್ನು ಅನಗತ್ಯವಾಗಿ ತೆರವುಗೊಳಿಸುವ ಕಾರ‍್ಯ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಇತ್ತೀಚೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka 12 Oct 2019, 5:00 am
ಆನಂದಪುರಂ : ಯಡೇಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಇರುವಕ್ಕಿ ಗ್ರಾಮದಲ್ಲಿಕೃಷಿ ಮತ್ತು ತೋಟಗಾರಿಕೆ ವಿವಿ ಹೊಸ ಆವರಣ ನಿರ್ಮಿಸುವ ಕಾಮಗಾರಿ ಜತೆ ರೈತರ ಕೃಷಿ ಜಮೀನನ್ನು ಅನಗತ್ಯವಾಗಿ ತೆರವುಗೊಳಿಸುವ ಕಾರ‍್ಯ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಇತ್ತೀಚೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web land clearance for vv work
ವಿವಿ ಕಾಮಗಾರಿಗೆ ಜಮೀನು ತೆರವು ಯತ್ನ

ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ವಿವಿ ಎಂಜಿನಿಯರ್‌ಗಳು ಸಾಗುವಳಿ ಜಮೀನೊಳಗೆ ನುಗ್ಗಿ ಅಡಕೆ, ತೆಂಗು, ಜೋಳ, ಶುಂಠಿ ಇತ್ಯಾದಿ ಬೆಳೆ ಕಿತ್ತು ಹಾಕಿದ್ದಾರೆ. ಅಲ್ಲದೇ ಜಮೀನಿನ ಒಳಗೆ ಅಗಳ ನಿರ್ಮಿಸುವ ಕಾರ್ಯ ನಡೆಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರೆಲ್ಲಒಟ್ಟಾಗಿ ಪ್ರಶ್ನಿಸಿ ದರೆ ಸಮರ್ಪಕ ಮಾಹಿತಿ ನೀಡದೆ ದರ್ಪದಿಂದ ವರ್ತಿಸಿದ್ದಾರೆ ಎಂದು ಗ್ರಾಮಸ್ಥರಾದ ಸೋಮಶೇಖರ, ಅರುಣ, ದೇವೇಂದ್ರ , ಚಂದ್ರಶೇಖರ ಶೆಟ್ಟಿ, ಗುರುಪ್ರಸಾದ, ಉಮೇಶ ಇತರರು ಅಸಮಾಧಾನವ್ಯಕ್ತಪಡಿಸಿದ್ದಾರೆ. ವಿವಿ ಆವರಣ ನಿರ್ಮಾಣಕ್ಕೆ ಸರಕಾರಿ ಕಾಡಿ ಜಾಗ ಗುರುತಿಸಿ ನಕ್ಷೆ ನೀಡಿದೆ. ಅಲ್ಲದೇ ರೈತರು ಸಾಗುವಳಿ ಮಾಡುತ್ತಿರುವ ಖಾತೆ

ಜಮೀನು ಮತ್ತು ಬಗರ್‌ ಹುಕುಂ ಜಮೀನಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸುವಂತೆ ಹಿಂದಿನ ಸಚಿವರಾದ ಕಾಗೋಡು ತಿಮ್ಮಪ್ಪ ಮತ್ತು ಹಾಲಿ ಶಾಸಕರಾದ ಹರತಾಳು ಹಾಲಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕ್ಷೇತ್ರದ ಶಾಸಕರು ರೈತರ ಪರವಾಗಿ ಇದ್ದು ಸದಾ ರಕ್ಷಣೇ ನೀಡುವ ಕಾರ್ಯ ನಡೆಸಿದ್ದಾರೆ. ಆದರೂ ಆನಂದಪುರಂನ ಕಂದಾಯ ಇಲಾಖೆಯ ಅಧಿಕಾರಿಗಳು ವ್ಯಾಪ್ತಿ ಮೀರಿ ರೈತರ ಜಮೀನು ತೆರವು ಕಾರ್ಯ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಪಾದಿಸಿದ್ದಾರೆ. 2012ರಲ್ಲಿಹಕ್ಕು ಪತ್ರ ನೀಡಲಾದ ಜಮೀನಿಗೂ ಕಂದಾಯ ಇಲಾಖೆಯಲ್ಲಿಆರ್‌ಟಿಸಿ ನೀಡದೆ ರೈತರನ್ನು ಸತಾಯಿಸು

ತ್ತಿದ್ದಾರೆ. ಶರಾವತಿ ವಿದ್ಯುತ್‌ ಯೋಜನೆಯಿಂದ ಮೂಲ ನೆಲೆ ಕಳೆದುಕೊಂಡು ನಿರಾಶ್ರಿತರಾಗಿ ವಲಸೆ ಬಂದ ಕುಟುಂಬಗಳೇ ಇಲ್ಲಿಅಧಿಕವಾಗಿದೆ. ಈಗ ಇರುವಕ್ಕಿ ಗ್ರಾಮದಲ್ಲಿಸಹ ತಮ್ಮ ನೆಲೆ ಕಸಿದುಕೊಳ್ಳುವ ಕಾರ್ಯ ನಡೆಯುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ