ಆ್ಯಪ್ನಗರ

ಹಾಸ್ಯೋತ್ಸವ ಕಾರ್ಯಕ್ರಮ

ರಾರ‍ಯಂಕ್‌ ಬರುವವರು ಮಾತ್ರ ಬುದ್ಧಿವಂತ ವಿದ್ಯಾವಂತರೆಂಬ ತಪ್ಪು ಕಲ್ಪನೆ ದೂರವಾಗಬೇಕು. ಸಾಮಾನ್ಯ ಜ್ಞಾನದೊಂದಿಗೆ ಬದುಕು ಕಟ್ಟಿಕೊಳ್ಳುವವರೂ ಸಹ ವಿದ್ಯಾವಂತರೇ ಎಂದು ಚಲನ ಚಿತ್ರನಟ ಮುಖ್ಯಮಂತ್ರಿ ಚಂದ್ರು ಹೇಳಿದರು.

Vijaya Karnataka 17 Dec 2018, 5:00 am
ಭದ್ರಾವತಿ: ರಾರ‍ಯಂಕ್‌ ಬರುವವರು ಮಾತ್ರ ಬುದ್ಧಿವಂತ ವಿದ್ಯಾವಂತರೆಂಬ ತಪ್ಪು ಕಲ್ಪನೆ ದೂರವಾಗಬೇಕು. ಸಾಮಾನ್ಯ ಜ್ಞಾನದೊಂದಿಗೆ ಬದುಕು ಕಟ್ಟಿಕೊಳ್ಳುವವರೂ ಸಹ ವಿದ್ಯಾವಂತರೇ ಎಂದು ಚಲನ ಚಿತ್ರನಟ ಮುಖ್ಯಮಂತ್ರಿ ಚಂದ್ರು ಹೇಳಿದರು.
Vijaya Karnataka Web smr-16bdvt2


ಅವರು ಶನಿವಾರ ನ್ಯೂಟೌನ್‌ ಆದಿಚುಂಚನಗಿರಿ ವಿದ್ಯಾವರ್ಧಕ ಟ್ರಸ್ಟ್‌ ಶಾಲಾ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಹರಟೆ ಮಲ್ಲರ ವಿಶೇಷ ಹಾಸ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ತಾಯಿಯ ಆಸೆಯು ವೈದ್ಯನಾಗಬೇಕೆಂಬುದಿತ್ತು. ಆದರೆ ತಾಯಿಯ ಆಸೆ ಈಡೇರಿಸಲಿಲ್ಲ. 35 ವರ್ಷಗಳಾದರೂ ಬಿಎಸ್ಸಿ ಪಾಸ್‌ ಮಾಡಲಾಗಲಿಲ್ಲ. ಏನನ್ನಾದರೂ ಸಾಧಿಸುವ ಛಲಹೊಂದಿ ಕಲೆಯಲ್ಲಿ ನಿರತನಾದೆ. ಅಂದಿನಿಂದ ಕಲೆಯ ಗೀಳು ಉಳಿಸಿಕೊಂಡಿದ್ದರಿಂದ ಇಂದು ಇಷ್ಟೆತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು.

ನಾವೆಲ್ಲರೂ ವಿಭಿನ್ನ ಸಂಸ್ಕೃತಿ, ಜಾತಿ, ಧರ್ಮಗಳ ನಡುವೆ ಏಕತೆಯಿಂದ ಬದುಕುತ್ತಿದ್ದೇವೆ. ಏಕತೆ ಕಾಪಾಡಿಕೊಂಡು ಬರುತ್ತಿರುವ ದೇಶವಿದ್ದರೆ ಅದು ಭಾರತ. ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆ ಬಗ್ಗೆ ಕೀಳರಿಮೆ ಯಾರಿಗೂ ಇರಬಾರದು. ಎಲ್ಲ ಭಾಷೆಗಳೂ ಶ್ರೇಷ್ಠತೆ ಹೊಂದಿವೆಯಾದರೂ ಸಹೋದರ ಭಾಷೆಗಳನ್ನು ಗೌರವಿಸುವ ಮೂಲಕ ಮಾತೃಭಾಷೆ ಕನ್ನಡದ ತಾಯ್ನೆಲವನ್ನು ಗಟ್ಟಿಗೊಳಿಸಬೇಕಿದೆ ಎಂದು ಸಲಹೆ ನೀಡಿದರು.

ಕಿರುತೆರೆನಟ ನರಸಿಂಹಮೂರ್ತಿ ಹಾಸ್ಯದ ಹೊನಲನ್ನು ಕವಿತೆ ಮೂಲಕ ತೇಲಿಸಿದರೆ, ಹಾಸ್ಯ ನಟ ಗುಂಡೂರಾವ್‌ ಅವರು ಹಾಸ್ಯ ಘಟನೆ ತಿಳಿಸುವ ಮೂಲಕ ವಿದ್ಯಾರ್ಥಿಗಳು ಪಠ್ಯ ವಿಷಯಗಳನ್ನು ಅಂಕಗಳಿಸಲು ಓದಬಾರದು, ಜ್ಞಾನಾರ್ಜನೆಗಾಗಿ ಓದಬೇಕೆಂದು ಕಿವಿಮಾತು ಹೇಳಿದರು. ವೇದಿಕೆಯಲ್ಲಿ ಶಿವಮೊಗ್ಗ ಬಸವೇಶ್ವರ ಕಾಲೇಜು ಉಪನ್ಯಾಸಕ ಉಮೇಶ್‌ಗೌಡ, ಕಾಲೇಜು ಪ್ರಾಂಶುಪಾಲರಾದ ಡಾ.ಎಸ್‌.ಹರಿಣಾಕ್ಷಿ, ಉಪನ್ಯಾಸಕರಾದ ಎಂ.ಎನ್‌.ಗಿರೀಶ್‌, ಖಂಡೋಜಿರಾವ್‌ ಇತರರು ಇದ್ದರು. ಇದೇ ಸಂದರ್ಭ ಆದಿಚುಂಚನಗಿರಿಯಲ್ಲಿ ನಡೆದ ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಚಂದ್ರು ಬಹುಮಾನ ವಿತರಿಸಿದರು.

=========================
ವಿದ್ಯಾರ್ಥಿಗಳು ಕಷ್ಟ ಸುಖದ ಮಧ್ಯೆ ಬೆಳೆಯಬೇಕು. ದೃಢ ಸಂಕಲ್ಪದಿಂದ ಭವಿಷ್ಯ ಗಟ್ಟಿಗೊಳಿಸಿಕೊಳ್ಳಬೇಕು. ಪರೀಕ್ಷೆಯಲ್ಲಿ ಫೇಲಾದಾಗ ಆತ್ಮಹತ್ಯೆಗೆ ಪ್ರಯತ್ನಿಸುವುದು ಸರಿಯಲ್ಲ. ಬದಲಾಗಿ ತಪ್ಪುಗಳಾದಾಗ ಚಿಂತನೆ ಮಾಡುವುದು ಉತ್ತಮ.
-ಮುಖ್ಯಮಂತ್ರಿ ಚಂದ್ರು, ಚಲನಚಿತ್ರ ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ