ಆ್ಯಪ್ನಗರ

ಯೋಜನೆ ವಿರೋಧಿಸಿ ವಕೀಲರ ಪ್ರತಿಭಟನೆ

ತಾಲೂಕಿನ ಶರಾವತಿ ನದಿಯ ನೀರನ್ನು ಬೆಂಗಳೂರಿಗೆ ಸರಬರಾಜು ಮಾಡುವ ಯೋಜನೆ ವಿರೋಧಿಸಿ ಸೋಮವಾರ ವಕೀಲರ ಸಂಘದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಉಪವಿಭಾಗಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Vijaya Karnataka 25 Jun 2019, 5:00 am
ಸಾಗರ: ತಾಲೂಕಿನ ಶರಾವತಿ ನದಿಯ ನೀರನ್ನು ಬೆಂಗಳೂರಿಗೆ ಸರಬರಾಜು ಮಾಡುವ ಯೋಜನೆ ವಿರೋಧಿಸಿ ಸೋಮವಾರ ವಕೀಲರ ಸಂಘದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ಉಪವಿಭಾಗಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
Vijaya Karnataka Web SMR-24SGR7


ಪ್ರತಿಭಟನೆ ಉದ್ದೇಶಿಸಿ ಸಂಘದ ಅಧ್ಯಕ್ಷ ರವೀಶ್‌ ಕುಮಾರ್‌ ಮಾತನಾಡಿ, ರಾಜ್ಯ ಸರಕಾರದ ಈ ನಿರ್ಧಾರ ಅತ್ಯಂತ ಅವೈಜ್ಞಾನಿಕವಾಗಿದೆ. ಬೆಂಗಳೂರಿನಲ್ಲಿರುವ ಕೆರೆಕಟ್ಟೆಗಳನ್ನು ನಾಶಮಾಡಿ, ಐಷಾರಾಮಿ ಕಟ್ಟಡ ನಿರ್ಮಿಸಲಾಗಿದೆ. ಕೆರೆಗಳ ಪುನಶ್ಚೇತನ ಬಿಟ್ಟು ಶರಾವತಿ ನದಿ ನೀರಿನ ಮೇಲೆ ಕಣ್ಣು ಹಾಕಿರುವುದು ಖಂಡನೀಯ. ಯೋಜನೆಯ ಹಿಂದೆ ಕಮಿಷನ್‌ ಮಾಫಿಯಾ ಅಡಗಿದೆ ಎಂದು ಆರೋಪಿಸಿದರು.

ಹಿರಿಯ ವಕೀಲ ಎಂ.ರಾಘವೇಂದ್ರ ಮಾತನಾಡಿ, ಈ ಭಾಗದ ಜನರ ಮುಳುಗಡೆ ಗೋಳನ್ನು ಪರಿಹರಿಸದ ಸರಕಾರ, ಯಾವ ಮಾನದಂಡ ಆಧರಿಸಿ ಬೆಂಗಳೂರಿಗೆ ನೀರು ಒಯ್ಯಬಹುದು ಎಂದು ಚಿಂತನೆ ನಡೆಸಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಸಮುದ್ರಕ್ಕೆ ಸೇರಿ ವ್ಯರ್ಥವಾಗುವ ನೀರನ್ನು ಒಯ್ಯುತ್ತೇವೆ ಎಂಬ ಬಾಲಿಶ ಹೇಳಿಕೆ ನೀಡಲಾಗುತ್ತಿದೆ. ಅಸಾಧ್ಯವಾದ ಯೋಜನೆ ತಕ್ಷ ಣ ಕೈಬಿಡಬೇಕು ಎಂದು ಆಗ್ರಹಿಸಿದರು.

ಸಂಘದ ಕಾರ್ಯದರ್ಶಿ ಕೆ.ಎಚ್‌. ರಮೇಶ್‌ , ನವೀನಕುಮಾರ್‌, ಮರಿದಾಸ್‌, ಕೆ.ವಿ.ಪ್ರವೀಣಕುಮಾರ್‌, ಕೆ.ಎಲ್‌.ಭೋಜರಾಜ್‌, ನಾಗವೇಣಿ, ಜ್ಯೋತಿ, ಮಹಮದ್‌ ಜಕ್ರಿಯಾ, ಈ.ನಾಗರಾಜ್‌, ರಾಮಸ್ವಾಮಿ, ಆರೀಫ್‌ ಅಲಿಖಾನ್‌, ತ್ಯಾಗರಾಜ್‌, ಕೃಷ್ಣ, ಖಂಡಿಕಾ ಸೂರ್ಯನಾರಾಯಣ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ