ಆ್ಯಪ್ನಗರ

ವೀರಶೈವ ಧರ್ಮದ ಸಾರ ಅರಿಯಿರಿ

ವೀರಶೈವ ಧರ್ಮಿಯರಲ್ಲಿ ಲಿಂಗಾಧರಣೆ ಖಡ್ಡಾಯವಿದೆ. ಆದರೆ, ಇಂದು ಆಧುನಿಕತೆಯ ನಾಗಾಲೋಟಕ್ಕೆ ಮಾರುಹೋಗಿ ಯುವಜನತೆ ಲಿಂಗಧಾರಣೆಯಿಂದ ವಿಮುಖ ಆಗುತ್ತಿರುವುದು ವಿಷಾದದ ಸಂಗತಿ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

Vijaya Karnataka 14 Aug 2019, 5:00 am
ಹೊಸನಗರ : ವೀರಶೈವ ಧರ್ಮಿಯರಲ್ಲಿ ಲಿಂಗಾಧರಣೆ ಖಡ್ಡಾಯವಿದೆ. ಆದರೆ, ಇಂದು ಆಧುನಿಕತೆಯ ನಾಗಾಲೋಟಕ್ಕೆ ಮಾರುಹೋಗಿ ಯುವಜನತೆ ಲಿಂಗಧಾರಣೆಯಿಂದ ವಿಮುಖ ಆಗುತ್ತಿರುವುದು ವಿಷಾದದ ಸಂಗತಿ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
Vijaya Karnataka Web learn the essence of veerashaiva dharma
ವೀರಶೈವ ಧರ್ಮದ ಸಾರ ಅರಿಯಿರಿ


ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಘಟಕವು ಪಟ್ಟಣದ ಮಾರಿಗುಡ್ಡದ ಬಸಪ್ಪಗೌಡ ಮನೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಚಿಂತನ-ವಚನ ಮಂಟಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ವೀರಶೈವ ಧರ್ಮದ ಪ್ರಕಾರ ತಾಯಿ ಗರ್ಭಧರಿಸಿದ ಎಂಟನೇ ತಿಂಗಳಲ್ಲೆ ಲಿಂಗಧಾರಣೆ ಆಗಬೇಕು. ಮುಂದೆ ಮಗುವಿಗೆ ಶಿವದೀಕ್ಷೆ ಆಗಬೇಕು. ಭಸ್ಮಧಾರಣೆ, ಪಾದೋದಕ, ಪ್ರಸಾದ ಹಾಗೂ ಲಿಂಗಪೂಜೆ ಕುರಿತು ತಿಳಿದುಕೊಂಡಿರಬೇಕು ಎಂದರು.

ಸೊನಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷ ಕ ಲಿಂಗರಾಜು ವಿಶೇಷ ಉಪನ್ಯಾಸ ನೀಡಿ, ವೀರಶೈವ ಧರ್ಮವು ವೇದಗಳ ಕಾಲಕ್ಕಿಂತ ಪ್ರಾಚೀನವಾದುದು ಎಂದು ನಮ್ಮ ಇತಿಹಾಸಕಾರರು ಅನ್ವೇಷಿಸಿದ್ದಾರೆ. ಶೈವ ಸಿದ್ಧಾಂತಕ್ಕೆ ಆಗಮಗಳೇ ಮೂಲ ಬೇರುಗಳು. ಶಿವನು ಶಕ್ತಿಗೆ ಬೋಧಿಸಿದ ತತ್ವಗಳೇ ಆಗಮಗಳು. ಆಗಮಗಳ ಕತೃ ಶಿವನೇ ಆಗಿದ್ದಾನೆ ಎಂದು ಶಿವಪುರಾಣದ ಸಾರುತ್ತದೆ ಎಂದರು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಿ.ವಿ. ರೇವಣಪ್ಪಗೌಡ ಅಧ್ಯಕ್ಷ ತೆ ವಹಿಸಿದ್ದರು. ಪ್ರಮುಖರಾದ ಬಸವರಾಜ್‌, ಈಶ್ವರಪ್ಪಗೌಡ, ಮಹೇಶಗೌಡ, ವಿರೂಪಾಕ್ಷ ಪ್ಪಗೌಡ, ಈಶ್ವರ, ಮಂಜಪ್ಪ ಮೊದಲಾದವರು ಹಾಜರಿದ್ದರು. ಪರಿಷತ್ತಿನ ಕಾರ್ಯದರ್ಶಿ ಗಂಗಾಧರಯ್ಯ ನಿರೂಪಿಸಿದರು. ತೇಜಸ್ವಿನಿ ಪ್ರಾರ್ಥಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ