ಆ್ಯಪ್ನಗರ

‘ಕನ್ನಡ ಮಾಧ್ಯಮದಲ್ಲಿ ಕಲಿಕೆ ಕಡ್ಡಾಯವಾಗಲಿ’

ಪ್ರತಿಯೊಂದು ಮಗುವಿಗೆ 1ನೇ ತರಗತಿಯಿಂದ 5ನೇ ತರಗತಿವರೆಗಾದರೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವುದು ಕಡ್ಡಾಯವಾಗಬೇಕೆಂದು ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ. ಆನಂದ್‌ಅಭಿಪ್ರಾಯಪಟ್ಟರು.

Vijaya Karnataka 6 May 2019, 5:00 am
ಶಿವಮೊಗ್ಗ: ಪ್ರತಿಯೊಂದು ಮಗುವಿಗೆ 1ನೇ ತರಗತಿಯಿಂದ 5ನೇ ತರಗತಿವರೆಗಾದರೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವುದು ಕಡ್ಡಾಯವಾಗಬೇಕೆಂದು ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ. ಆನಂದ್‌ಅಭಿಪ್ರಾಯಪಟ್ಟರು.
Vijaya Karnataka Web SMR-5ganesh2


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಗರದ ನಿವೃತ್ತ ನೌಕರರ ಸಂಘದ ಕಟ್ಟಡದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕನ್ನಡ ಉಳಿಸಿ, ಬೆಳೆಸಬೇಕು ಎಂಬುದು ಪ್ರತಿಯೊಬ್ಬ ಕನ್ನಡಿಗನ ಕೂಗಾಗಿದ್ದರೂ ಇಂದು ಕನ್ನಡ ಮಾಧ್ಯಮದಲ್ಲಿ ತಮ್ಮ ಮಕ್ಕಳನ್ನು ನಾವು ಸಿದ್ಧರಿಲ್ಲ. ಹೀಗಾಗಿ ಕನ್ನಡ ಭಾಷೆ ಉಳಿಸುವುದು ಕೇವಲ ಘೋಷಣೆಯಾಗೇ ಉಳಿದು ಬಿಟ್ಟಿದೆ. ಎಲ್ಲರೂ ಇಂಗ್ಲಿಷ್‌ ಮಾಧ್ಯಮದ ವ್ಯಾಮೋಹದಲ್ಲಿರುವುದರಿಂದ ತನ್ನ ನೆಲದಲ್ಲೆ ಕನ್ನಡ ಭಾಷೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡ ಭಾಷೆ ಅಳಿಯದಂತೆ ನೋಡಿಕೊಳ್ಳಲು ಮಹತ್ವದ ಹೆಜ್ಜೆ ಇಡಬೇಕಿದೆ. ಕನ್ನಡಿಗರಾದ ನಾವು ಮಕ್ಕಳಿಗೆ ಕನಿಷ್ಠ ಪಕ್ಷ 1ನೇ ತರಗತಿಯಿಂದ 5 ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಕೊಡಿಸಬೇಕೆಂದು ಪ್ರತಿಜ್ಞೆ ಮಾಡಬೇಕಿದೆ. ಕಸಾಪ ಕೂಡ ಈ ಕುರಿತು ಸರಕಾರವನ್ನು ಒತ್ತಾಯಿಸಬೇಕೆಂದು ಮನವಿ ಮಾಡಿದರು.

ಸಾಹಿತಿ ಪ್ರಕಾಶ್‌ ಆರ್‌.ಕಮ್ಮಾರ್‌ ಮಾತನಾಡಿ, ಹಲವು ಪ್ರಾಂತ್ಯದಲ್ಲಿ ಹರಿದು ಹಂಚಿರುವ ಕನ್ನಡಿಗರನ್ನು ಒಂದೆಡೆ ಸೇರಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿಕೊಂಡಿದೆ. ದಶಕದ ಹಿಂದೆ ನಾಡು, ನುಡಿ ಹಾಗೂ ಸಂಸ್ಕೃತಿ ಉಳಿವಿಗಾಗಿ ಅನೇಕ ಧ್ಯೇಯ ಹಾಗೂ ಉದ್ದೇಶಗಳೊಂದಿಗೆ ಜನ್ಮ ತಾಳಿತು ಎಂದರು.

1938ರಲ್ಲಿ ಬಳ್ಳಾರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ನಂತರ ಕನ್ನಡ ಸಾಹಿತ್ಯ ಪರಿಷತ್ತು ಎಂದು ಮರುನಾಮಕರಣ ಮಾಡಲಾಯಿತು. ಅಂದೇ ಕನ್ನಡ ಬಾವುಟ ಬಿಡುಗಡೆಗೊಳಿಸಲಾಯಿತು. 1978ರಲ್ಲಿ ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾ ಪರಿಷತ್‌ ರಚಿಸಲಾಯಿತು. ನಂತರ ಅದು ತಾಲೂಕು ಹಾಗೂ ಹೋಬಳಿ ಮಟ್ಟದವರೆಗೂ ವ್ಯಾಪಕವಾಗಿ ಹಬ್ಬಿದೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ. ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್‌.ವಿ.ಚಂದ್ರಕಲಾ, ಸಂಪತ್‌ಕುಮಾರ್‌, ಎಂ.ಎನ್‌.ಸುಂದರಾಜ್‌, ನಾಗರಾಜ್‌, ಚನ್ನಬಸಪ್ಪ ನ್ಯಾಮತಿ, ಹಸನ್‌ ಬೆಳ್ಳಿಗನೂರು ಇದ್ದರು. ಇದೇ ಸಂದರ್ಭ ಸಿ.ಯು. ಸೋಮಶೇಖರ್‌, ಎಂ.ಸಿ. ಆನಂದ, ಬನಶಂಕರಿಮೂರ್ತಿ, ಎ.ಕೆ. ಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ