ಆ್ಯಪ್ನಗರ

ಜಾನುವಾರು ಬಿಟ್ಟು ಪರಾರಿ

ಅಪರಿಚಿತ ವ್ಯಕ್ತಿಗಳು ವಾಹನದಲ್ಲಿ ತುಂಬಿಕೊಂಡು ಬಂದ ದನಕರುಗಳನ್ನು ರಸ್ತೆ ಪಕ್ಕದಲ್ಲಿ ಇಳಿಸಿ ಪರಾರಿಯಾದ ಘಟನೆ ತಾಲೂಕಿನ ಯಡೂರು ಗ್ರಾಮದಲ್ಲಿ ಬುಧವಾರ ನಡೆದಿದೆ.

Vijaya Karnataka 20 Jun 2019, 5:00 am
ಹೊಸನಗರ: ಅಪರಿಚಿತ ವ್ಯಕ್ತಿಗಳು ವಾಹನದಲ್ಲಿ ತುಂಬಿಕೊಂಡು ಬಂದ ದನಕರುಗಳನ್ನು ರಸ್ತೆ ಪಕ್ಕದಲ್ಲಿ ಇಳಿಸಿ ಪರಾರಿಯಾದ ಘಟನೆ ತಾಲೂಕಿನ ಯಡೂರು ಗ್ರಾಮದಲ್ಲಿ ಬುಧವಾರ ನಡೆದಿದೆ. ನಸುಕಿನ ವೇಳೆ ಅಪರಿಚಿತ ವಾಹನದಲ್ಲಿ ಬಂದ ಕೆಲ ವ್ಯಕ್ತಿಗಳು 3 ದನ, 3 ಕರು ಹಾಗೂ ಒಂದು ಹೋರಿಯನ್ನು ರಸ್ತೆ ನಡುವೆಯೇ ಇಳಿಸಿ ಹೋಗಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಜಾನುವಾರುಗಳು ಕೂಗಲು ಆರಂಭಿಸಿದ್ದು ಗ್ರಾಮಸ್ಥರ ಗಮನಕ್ಕೆ ಬಂದಿದೆ. ಅಪರಿಚಿತ ಸ್ಥಳವಾಗಿರುವ ಕಾರಣಕ್ಕೆ ದನಕರುಗಳು ರಸ್ತೆ ಪಕ್ಕದಲ್ಲಿಯೇ ಮೇಯುತ್ತಾ ನಿಂತಿದ್ದು, ಗ್ರಾಮಸ್ಥರು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಕೆಲ ದಿನಗಳಿಂದಲೂ ಜಾನುವಾರು ಅಕ್ರಮ ಸಾಗಣೆ ಈ ಭಾಗದಲ್ಲಿ ನಡೆಯುತ್ತಿರುವ ಆರೋಪಗಳು ಕೇಳಿ ಬಂದಿದ್ದು, ಈ ಘಟನೆ ಇದಕ್ಕೆ ಇನ್ನಷ್ಟು ಇಂಬು ಕೊಡುವಂತಿದೆ. ಪೊಲೀಸರು ತನಿಖೆ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Vijaya Karnataka Web leave the cattle run
ಜಾನುವಾರು ಬಿಟ್ಟು ಪರಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ