ಆ್ಯಪ್ನಗರ

ಯೋಗ ರಹಿತ ಜೀವನ ಅನಾರೋಗ್ಯಕ್ಕೆ ದಾರಿ

ಪೌಷ್ಟಿಕ ಆಹಾರ ಸೇವನೆ ನಿರಾಕರಣೆ, ವ್ಯಾಯಾಮ ರಹಿತ ಜೀವನ, ಉತ್ತಮ ಹವ್ಯಾಸ ರೂಢಿಸಿಕೊಳ್ಳದಿರುವುದರಿಂದ ಮಕ್ಕಳಲ್ಲಿ ಒತ್ತಡ ಹೆಚ್ಚಾಗಿ ಏಕಾಗ್ರತೆ ಕಡಿಮೆಯಾಗುತ್ತಿದೆ ಎಂದು ಸ್ತ್ರೀರೋಗ ತಜ್ಞರಾದ ಡಾ. ಯು.ಆರ್‌.ರಕ್ಷಾ ಹೇಳಿದರು.

Vijaya Karnataka 14 Feb 2019, 5:00 am
ಶಿವಮೊಗ್ಗ: ಪೌಷ್ಟಿಕ ಆಹಾರ ಸೇವನೆ ನಿರಾಕರಣೆ, ವ್ಯಾಯಾಮ ರಹಿತ ಜೀವನ, ಉತ್ತಮ ಹವ್ಯಾಸ ರೂಢಿಸಿಕೊಳ್ಳದಿರುವುದರಿಂದ ಮಕ್ಕಳಲ್ಲಿ ಒತ್ತಡ ಹೆಚ್ಚಾಗಿ ಏಕಾಗ್ರತೆ ಕಡಿಮೆಯಾಗುತ್ತಿದೆ ಎಂದು ಸ್ತ್ರೀರೋಗ ತಜ್ಞರಾದ ಡಾ. ಯು.ಆರ್‌.ರಕ್ಷಾ ಹೇಳಿದರು.
Vijaya Karnataka Web SMG-1302-2-15-13SMG 3


ನಗರದ ಕಸ್ತೂರಬಾ ಬಾಲಿಕಾ ಪ್ರೌಢಶಾಲೆಯಲ್ಲಿ ಮಂಗಳವಾರ ದಿ ಆರ್ಟ್‌ ಆಫ್‌ ಲಿವಿಂಗ್‌ ಸಹಯೋಗದಲ್ಲಿ ರಥಸಪ್ತಮಿ ಅಂಗವಾಗಿ 10ನೇ ತರಗತಿ ಮಕ್ಕಳಿಗೆ ಏರ್ಪಡಿಸಿದ್ದ ಯುವಶಕ್ತಿ ಮತ್ತು ಆರೋಗ್ಯ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಸಮತೋಲನ ಭರಿತವಾದ ಆಹಾರ, ದೇಹಕ್ಕೆ ಅವಶ್ಯಕವಾಗುವಷ್ಟು ವ್ಯಾಯಾಮ, ದೈಹಿಕ ಚಟುವಟಿಕೆ, ಒಳ್ಳೆಯ ಹವ್ಯಾಸ ಕಲಿಸುವ ಕಡೆಗೆ ಪೋಷಕರು ಹೆಚ್ಚು ಗಮನಹರಿಸಬೇಕು. ಒತ್ತಡದ ಜೀವನ ಶೈಲಿಯಿಂದ ಪ್ರತಿಯೊಬ್ಬರಲ್ಲೂ ಬಿಪಿ, ಶುಗರ್‌, ಕ್ಯಾನ್ಸರ್‌ ಇತರೆ ಕಾಯಿಲೆ ಹೆಚ್ಚುತ್ತಿವೆ. ಹಾಗಾಗಿ ನಮ್ಮ ಆಧುನಿಕ ಜೀವನಕ್ಕೆ ಅನುಗುಣವಾದ ದೈಹಿಕ ಪರಿಶ್ರಮ, ಆಹಾರ ಕ್ರಮ ರೂಢಿಸಿಕೊಳ್ಳಬೇಕು ಎಂದರು.

ಊಟಕ್ಕೆ ಹೆಚ್ಚು ಹಸಿ ತರಕಾರಿ, ಮನೋರಂಜನೆಗಾಗಿ ಒಳ್ಳೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಉತ್ತಮ ಆರೋಗ್ಯ, ದೃಢವಿಶ್ವಾಸ, ಕ್ರಿಯಾಶೀಲತೆ ಹೆಚ್ಚುತ್ತದೆ. ಮಕ್ಕಳು ಪರೀಕ್ಷೆ ಸಂದರ್ಭ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು. ಸತತ ಪರಿಶ್ರಮದಿಂದ ಗುರಿ ಸಾಧಿಸಬೇಕು. ಕೌಟುಂಬಿಕ, ಶೈಕ್ಷ ಣಿಕ, ಸಾಮಾಜಿಕ ಬೆಳವಣಿಗೆಗೆ ಪೂರಕವಾದ ಪರಿಸರ ನಿರ್ಮಿಸಬೇಕೆಂದರು. ಆರ್ಟ್‌ ಆಫ್‌ ಲಿವಿಂಗ್‌ನ ಶಿಕ್ಷ ಕ ಶಶಿಭೂಷಣ್‌ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಯೋಗ ಗುರು ಶೈಲಜಾ ಶಿವಶಂಕರ್‌, ಶಬರೀಶ್‌ ಕಣ್ಣನ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ