ಆ್ಯಪ್ನಗರ

ಸಮಾಜದ ಎಲ್ಲ ಮಕ್ಕಳಿಗೆ ಶಿಕ್ಷ ಣ ಸಿಗಲಿ

ಬಾಲಕರು ಕಾರ್ಮಿಕರಾಗಿ ಕೆಲಸ ಮಾಡುವುದು ಅಪರಾಧ. ಇದನ್ನು ತಪ್ಪಿಸಬೇಕು. ಸಮಾಜದ ಎಲ್ಲ ಮಕ್ಕಳಿಗೆ ಶಿಕ್ಷ ಣ ಸಿಗಬೇಕೆಂದು ಸರಕಾರ ಸಾಕಷ್ಟು ಯೋಜನೆ ರೂಪಿಸಿದೆ. ಇದಕ್ಕಾಗಿ ದೊಡ್ಡ ಮೊತ್ತದ ಹಣವೂ ವ್ಯಯವಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಎಲ್ಲರಿಗೂ ಶಿಕ್ಷ ಣ ಕೊಡಿಸುವತ್ತ ಗಮನ ನೀಡಬೇಕೆಂದು ನ್ಯಾಯಾಧೀಶ ಟಿ.ಎಲ್‌. ಸಂದೇಶ್‌ ಹೇಳಿದರು.

Vijaya Karnataka 2 Jul 2019, 7:54 pm
ಶಿಕಾರಿಪುರ: ಬಾಲಕರು ಕಾರ್ಮಿಕರಾಗಿ ಕೆಲಸ ಮಾಡುವುದು ಅಪರಾಧ. ಇದನ್ನು ತಪ್ಪಿಸಬೇಕು. ಸಮಾಜದ ಎಲ್ಲ ಮಕ್ಕಳಿಗೆ ಶಿಕ್ಷ ಣ ಸಿಗಬೇಕೆಂದು ಸರಕಾರ ಸಾಕಷ್ಟು ಯೋಜನೆ ರೂಪಿಸಿದೆ. ಇದಕ್ಕಾಗಿ ದೊಡ್ಡ ಮೊತ್ತದ ಹಣವೂ ವ್ಯಯವಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಎಲ್ಲರಿಗೂ ಶಿಕ್ಷ ಣ ಕೊಡಿಸುವತ್ತ ಗಮನ ನೀಡಬೇಕೆಂದು ನ್ಯಾಯಾಧೀಶ ಟಿ.ಎಲ್‌. ಸಂದೇಶ್‌ ಹೇಳಿದರು.
Vijaya Karnataka Web SMR-30skp2


ಪಟ್ಟಣದ ಲಯನ್ಸ್‌ ವಿದ್ಯಾಸಂಸ್ಥೆಯಲ್ಲಿ ಶನಿವಾರ ವಕೀಲರ ಸಂಘ, ಕಾನೂನು ಸೇವಾ ಪ್ರಾಧಿಕಾರ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಬಾಲಕಾರ್ಮಿಕ ವಿರೋಧಿ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದಿನ ಬಾಲಕರು ಮುಂದಿನ ಪ್ರಜೆಗಳು. ನಮ್ಮ ದೇಶದ ಭವಿಷ್ಯ ಉಜ್ವಲವಾಗಿರಲು ಪ್ರತಿಯೊಬ್ಬರೂ ಶಿಕ್ಷಿತರಾಗಬೇಕು. ಬಾಲಕಾರ್ಮಿಕ ವಿರೋಧಿ ಕಾಯ್ದೆ ರೂಪಿಸಿದ ನಂತರವೂ ಸಾಕಷ್ಟು ಬಾಲಕ, ಬಾಲಕಿಯರು ಗ್ಯಾರೇಜ್‌, ಇಟ್ಟಿಗೆ ಬಟ್ಟಿ, ಹೋಟೆಲ್‌ ಸೇರಿದಂತೆ ಹಲವೆಡೆ ಕೆಲಸ ಮಾಡುತ್ತಿದ್ದಾರೆ. ಇದನ್ನು ತಪ್ಪಿಸುವುದು ಸಮುದಾಯದ ಎಲ್ಲರ ಜವಾಬ್ದಾರಿ ಎಂದರು.

ಲಯನ್ಸ್‌ ವಿದ್ಯಾಸಂಸ್ಥೆ ಉಪಾಧ್ಯಕ್ಷ ಡಾ.ದಯಾನಂದ ಅಧ್ಯಕ್ಷ ತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಜಿ.ಕೋಡಪ್ಪ, ಮಹಿಳಾ ಸಂರಕ್ಷ ಣಾಧಿಕಾರಿ ಆರ್‌.ನಿರ್ಮಲ, ಸರಕಾರಿ ಸಹಾಯಕ ಅಭಿಯೋಜಕ ದಾದಾಪೀರ್‌ ಬಾನುವಳ್ಳಿ, ಎನ್‌.ಸಿ.ಸಂತೋಷ್‌ಕುಮಾರ್‌, ಲಯನ್ಸ್‌ ಸಂಸ್ಥೆಯ ಡಿ.ಕೆ.ಮಲ್ಲಿಕಾರ್ಜುನ್‌, ಹೆಚ್‌.ಜಿ.ಜಯಣ್ಣ, ಪಾಂಡುರಂಗಶೇಟ್‌, ಶಿವಾನಂದ ಸಾನು, ಎಂ.ಪಿ.ಪ್ರಶಾಂತ್‌ಕುಮಾರ್‌, ಪರಮೇಶ್ವರನಾಯ್ಕ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ