ಆ್ಯಪ್ನಗರ

ಮಕ್ಕಳಲ್ಲಿ ಪರಿಸರ ಪ್ರೇಮ ಮೂಡಲಿ

ಪರಿಸರ ಪ್ರೇಮ ಪ್ರತಿಯೊಬ್ಬ ಮಕ್ಕಳಲ್ಲಿ ಮೂಡಬೇಕು. ಇದಕ್ಕಾಗಿ ಪ್ರತಿವರ್ಷ ಗಿಡ ನೆಟ್ಟು ಅದನ್ನು ಬೆಳೆಸುವ ಕೆಲಸಕ್ಕೆ ವಿದ್ಯಾರ್ಥಿಗಳನ್ನು ಹಚ್ಚಬೇಕೆಂದು ಜಿ.ಪಂ.ಸದಸ್ಯ ನರಸಿಂಗನಾಯ್ಕ ಹೇಳಿದರು.

Vijaya Karnataka 16 Jul 2019, 5:00 am
ಶಿಕಾರಿಪುರ: ಪರಿಸರ ಪ್ರೇಮ ಪ್ರತಿಯೊಬ್ಬ ಮಕ್ಕಳಲ್ಲಿ ಮೂಡಬೇಕು. ಇದಕ್ಕಾಗಿ ಪ್ರತಿವರ್ಷ ಗಿಡ ನೆಟ್ಟು ಅದನ್ನು ಬೆಳೆಸುವ ಕೆಲಸಕ್ಕೆ ವಿದ್ಯಾರ್ಥಿಗಳನ್ನು ಹಚ್ಚಬೇಕೆಂದು ಜಿ.ಪಂ.ಸದಸ್ಯ ನರಸಿಂಗನಾಯ್ಕ ಹೇಳಿದರು.
Vijaya Karnataka Web SMR-15SKP1


ಪಟ್ಟಣದ ಚನ್ನಮಲ್ಲಿಕಾರ್ಜುನ ಸಿಬಿಎಸ್‌ಸಿ ವಿದ್ಯಾಸಂಸ್ಥೆಯಲ್ಲಿ ಸೋಮವಾರ ವನಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಹಜ ಅರಣ್ಯ ಪ್ರದೇಶ ವರ್ಷದಿಂದ ವರ್ಷಕ್ಕೆ ನಾಶವಾಗುತ್ತಿದೆ, ಅದರ ಪರಿಣಾಮ ಮಳೆ ಪ್ರಮಾಣ, ಉತ್ತಮ ಆಕ್ಸಿಜನ್‌ ಕೊರತೆ ಆಗುತ್ತಿದೆ. ಇದು ಇಡೀ ಮನುಕುಲದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಕುರಿತು ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕೆಂದರು.

ಚನ್ನಮಲ್ಲಿಕಾರ್ಜುನ ವಿದ್ಯಾಸಂಸ್ಥೆ ಕಾರ‍್ಯದರ್ಶಿ ಚನ್ನಯ್ಯ ಮಾತನಾಡಿ, ಪ್ರತಿವರ್ಷ ಸಾರ್ವಜನಿಕ ಸ್ಥಳದಲ್ಲಿ ಗಿಡ ನೆಟ್ಟು ಬೆಳೆಸುವ ಕೆಲಸದಲ್ಲಿ ಸಂಸ್ಥೆ ತನ್ನನ್ನು ತೊಡಗಿಸಿಕೊಂಡಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಪ್ರತಿವರ್ಷ ಗಿಡನೆಟ್ಟು ಅದನ್ನು ಬೆಳೆಸಬೇಕು. ಆಗ ಭವಿಷ್ಯದಲ್ಲಿ ಉತ್ತಮ ಪ್ರಕೃತಿ ನಿರ್ಮಿಸಲು ಸಾಧ್ಯ ಎಂದರು.

ಪುರಸಭೆ ಸದಸ್ಯ ಪಾಲಾಕ್ಷ ಪ್ಪ, ರೂಪಕಲಾ ಹೆಗಡೆ, ಗಿಡನೆಡುವ ಮೂಲಕ ಕಾರ‍್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು. ಪ್ರಾಂಶುಪಾಲ ಮೋಹನ್‌ಕುಮಾರ್‌, ಗೀತಾ ಚನ್ನಯ್ಯ, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ