ಆ್ಯಪ್ನಗರ

ರಕ್ತನಿಧಿಗೆ ರಕ್ತದಾನಿಗಳ ಕೊರತೆ ನೀಗಲಿ

ರಕ್ತದಾನದಿಂದ ರೋಗಿಗಳ ಜೀವ ಉಳಿಯುವ ಜತೆಗೆ ದಾನಿಯ ಆರೋಗ್ಯ ಸದೃಢವಾಗುತ್ತದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

Vijaya Karnataka 11 Sep 2019, 5:00 am
ಸಾಗರ : ರಕ್ತದಾನದಿಂದ ರೋಗಿಗಳ ಜೀವ ಉಳಿಯುವ ಜತೆಗೆ ದಾನಿಯ ಆರೋಗ್ಯ ಸದೃಢವಾಗುತ್ತದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
Vijaya Karnataka Web 09SGR9_46


ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿಸೋಮವಾರ ಯುವ ಕಾಂಗ್ರೆಸ್‌ ಮತ್ತು ರೋಟರಿ ರಕ್ತನಿಧಿ ಕೇಂದ್ರದಿಂದ ತಮ್ಮ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ರೋಟರಿ ಸಂಸ್ಥೆ ಆಶ್ರಯದಲ್ಲಿಸುಸಜ್ಜಿತ ರಕ್ತನಿಧಿಯನ್ನು ಸಾಗರದಲ್ಲಿಸ್ಥಾಪಿಸಿದ್ದು, ಜನರು ರಕ್ತದಾನ ಮಾಡುವ ಜತೆಗೆ ಅಗತ್ಯ ಇದ್ದವರಿಗೆ ರಕ್ತ ಕೊಡಿಸುವ ಸಂಸ್ಥೆಯ ಮಹತ್ಕಾರ್ಯಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.

ರೋಟರಿ ರಕ್ತನಿಧಿ ಕೇಂದ್ರದ ಗೌರವಾಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ರೋಟರಿ ರಕ್ತನಿಧಿ ಕೇಂದ್ರ ಪ್ರಾರಂಭವಾಗಿ 9 ತಿಂಗಳು ಕಳೆದಿದ್ದು, 3100 ಯೂನಿಟ್‌ ರಕ್ತ ಸಂಗ್ರಹಿಸಿದೆ. ಕೇಂದ್ರಕ್ಕೆ ರಕ್ತವನ್ನು ಕೇಳಿಕೊಂಡು ಬರುವವರ ಸಂಖ್ಯೆ ಜಾಸ್ತಿ ಇದ್ದು, ರಕ್ತದಾನ ಮಾಡುವವರ ಸಂಖ್ಯೆ ಕಡಿಮೆ ಇದೆ. ಈ ನಿಟ್ಟಿನಲ್ಲಿರಕ್ತದಾನ ಮಾಡಲು ಅವಕಾಶವಾಗುವಂತೆ ರಕ್ತದಾನಿಗಳು ಮುಂದೆ ಬರಬೇಕು ಎಂದರು.

ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿದರು. ಇದೇ ಸಂದರ್ಭ ಯುವ ಕಾಂಗ್ರೆಸ್‌ ಮತ್ತು ರೋಟರಿ ರಕ್ತನಿಧಿ ಕೇಂದ್ರದಿಂದ ಕಾಗೋಡು ತಿಮ್ಮಪ್ಪ ಅವರನ್ನು ಅಭಿನಂದಿಸಲಾಯಿತು. ಯುವ ಕಾಂಗ್ರೆಸ್‌ ಅಧ್ಯಕ್ಷ ಸುಧಾಕರ ಕುಗ್ವೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾ.ಪಂ. ಉಪಾಧ್ಯಕ್ಷ ಅಶೋಕ ಬರದವಳ್ಳಿ, ಎಪಿಎಂಸಿ ಅಧ್ಯಕ್ಷ ರವಿಕುಮಾರ್‌ , ಕೆ.ಹೊಳೆಯಪ್ಪ, ಪರಶುರಾಮಪ್ಪ , ಗಣಪತಿ ಹೆನಗೆರೆ, ಮಹಾಬಲ ಕೌತಿ, ರೋಟರಿ ರಕ್ತನಿಧಿ ಕೇಂದ್ರದ ಡಾ.ಎಚ್‌.ಎಂ.ಶಿವಕುಮಾರ್‌, ಡಾ. ಬಿ.ಜಿ.ಸಂಗಮ್‌, ಡಾ.ಅನಿಲ್‌, ಕೇಂದ್ರದ ಹರೀಶ್‌ ಮತ್ತಿತರರು ಹಾಜರಿದ್ದರು. ಷಣ್ಮುಖ ಸೂರನಗದ್ದೆ ಸ್ವಾಗತಿಸಿ, ರಾಘವೇಂದ್ರ ವಂದಿಸಿದರು. ಗಿರೀಶ್‌ ಕೋವಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ