ಆ್ಯಪ್ನಗರ

ಸರಕಾರ ವಿಶ್ವಕರ್ಮ ಜನಾಂಗಕ್ಕೆ ಸೂಕ್ತ ಸ್ಥಾನ ಕಲ್ಪಿಸಲಿ

ವಿಶ್ವಕರ್ಮರು ವಿಶ್ವದ ಜನರ ಒಳಿತು ಬಯಸುವವರು ಎಂದು ಆನಂದಪುರ ವಿಶ್ವಕರ್ಮ ಕರಕುಶಲ ಕಾರ್ಮಿಕ ಸಂಘದ ಅಧ್ಯಕ್ಷ ಎಂ.ಎಸ್‌.ರಾಘವೇಂದ್ರ ಆಚಾರ್‌ ಹೇಳಿದರು.

Vijaya Karnataka 20 Sep 2019, 5:00 am
ಆನಂದಪುರಂ: ವಿಶ್ವಕರ್ಮರು ವಿಶ್ವದ ಜನರ ಒಳಿತು ಬಯಸುವವರು ಎಂದು ಆನಂದಪುರ ವಿಶ್ವಕರ್ಮ ಕರಕುಶಲ ಕಾರ್ಮಿಕ ಸಂಘದ ಅಧ್ಯಕ್ಷ ಎಂ.ಎಸ್‌.ರಾಘವೇಂದ್ರ ಆಚಾರ್‌ ಹೇಳಿದರು.
Vijaya Karnataka Web let govt make place for vishwakarmas
ಸರಕಾರ ವಿಶ್ವಕರ್ಮ ಜನಾಂಗಕ್ಕೆ ಸೂಕ್ತ ಸ್ಥಾನ ಕಲ್ಪಿಸಲಿ


ಅವರು ಬಸವನಬೀದಿಯಲ್ಲಿಮಂಗಳವಾರ ನಡೆದ ವಿಶ್ವಕರ್ಮಜಯಂತಿಯಲ್ಲಿಮಾತನಾಡಿ, ರಾಜ್ಯದಲ್ಲಿಸುಮಾರು 45 ಲಕ್ಷ ಜನಸಂಖ್ಯೆಯುಳ್ಳ ವಿಶ್ವಕರ್ಮ ಸಮಾಜದವರಿಗೆ ರಾಜ್ಯಸರಕಾರ ಸೂಕ್ತ ಸ್ಥಾನ ಮಾನ ಕಲ್ಪಿಸಬೇಕೆಂದರು.

ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಜಗತ್ತಿನ ಮೊದಲ ವ್ಯಕ್ತಿ ವಿಶ್ವಕರ್ಮ ಋುಷಿಗಳು. 64 ಕಲೆಗಳನ್ನು ರೂಪಿಸಿ ಜಗತ್ತಿಗೆ ಧಾರೆ ಎರೆದ ವಿಶ್ವಕರ್ಮ ಸಮಾಜಕ್ಕೆ ಇಂದು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಕ್ಷೇತ್ರದಲ್ಲಿಸದೃಢವಾಗಲು ಸೂಕ್ತ ಅವಕಾಶ ಕಲ್ಪಿಸುವ ಅಗತ್ಯವಿದೆ. ದೇಶದ ಸಂಸ್ಕೃತಿ ಪಸರಿಸುವಲ್ಲಿವಿಶ್ವಕರ್ಮ ಸಮಾಜ ತನ್ನದೇ ಆದ ಕೊಡುಗೆ ನೀಡಿದೆ ಎಂದರು. ಸಂಘದ ಕಾರ‍್ಯದರ್ಶಿ ಕೇಶವಾಚಾರ್‌, ಸದಾಶಿವ ಆಚಾರ್‌, ಮಂಜುನಾಥ ಆಚಾರ್‌, ಗೋಪಾಲ್‌ ಆಚಾರ್‌, ವಾಸುದೇವ ಆಚಾರ್‌, ರಾಘು ಆಚಾರ್‌, ರವೀಂದ್ರ ಆಚಾರ್‌, ಪ್ರವೀಣ್‌, ರಾಜೇಶ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ