ಆ್ಯಪ್ನಗರ

ಇತಿಹಾಸ ವಸ್ತುನಿಷ್ಠ ಅಧ್ಯಯನವಾಗಿರಲಿ

ಸ್ಥಳೀಯ ಇತಿಹಾಸ ಪರಂಪರೆ ತಿಳಿಯಲು ಗತಕಾಲ ಮತ್ತು ವರ್ತಮಾನದ ಸಂಗತಿಗಳ ಅರಿವು ಅಗತ್ಯ. ಇತಿಹಾಸವು ವಸ್ತುನಿಷ್ಠ ಅಧ್ಯಯನವಾಗಿರಬೇಕೆಂದು ವಿಶ್ರಾಂತ ಪ್ರಾಚಾರ್ಯ ಡಾ.ವೈ.ಕುಬೇರಪ್ಪ ಹೇಳಿದರು.

Vijaya Karnataka 18 Sep 2019, 5:00 am
ರಿಪ್ಪನ್‌ಪೇಟೆ: ಸ್ಥಳೀಯ ಇತಿಹಾಸ ಪರಂಪರೆ ತಿಳಿಯಲು ಗತಕಾಲ ಮತ್ತು ವರ್ತಮಾನದ ಸಂಗತಿಗಳ ಅರಿವು ಅಗತ್ಯ. ಇತಿಹಾಸವು ವಸ್ತುನಿಷ್ಠ ಅಧ್ಯಯನವಾಗಿರಬೇಕೆಂದು ವಿಶ್ರಾಂತ ಪ್ರಾಚಾರ್ಯ ಡಾ.ವೈ.ಕುಬೇರಪ್ಪ ಹೇಳಿದರು.
Vijaya Karnataka Web 17RPT2_46


ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವೇದಿಕೆ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭೌಗೋಳಿಕ ಇತಿಹಾಸ, ರಾಜಕೀಯ ಇತಿಹಾಸ, ಆರ್ಥಿಕ ಇತಿಹಾಸ ಹಾಗೂ ಸಾಂಸ್ಕೃತಿಕ ಇತಿಹಾಸದ ಅಧ್ಯಯನವು ಇಂದು ಬಹುಮಹತ್ವ ಪಡೆದಿದೆ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಟಿ.ನಳಿನಚಂದ್ರ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜಿ.ಸುಧಾ, ಇತಿಹಾಸ ಉಪನ್ಯಾಸಕರಾದ ಎಂ.ಸಂದೀಪ್‌, ಜಿ.ಸಿ.ಅನಿಲ್‌ಕುಮಾರ್‌ ಉಪಸ್ಥಿತರಿದ್ದರು.

ಚಂದನ ಸ್ವಾಗತಿಸಿ, ಅಶ್ವಿನಿ ನಿರೂಪಿಸಿ, ಅಮೃತ ವಂದಿಸಿದರು. ಕೊನೆಯಲ್ಲಿವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ