ಆ್ಯಪ್ನಗರ

ಕಲಾವಿದರ ಬದುಕು ಸಹನೀಯವಾಗಲಿ

ವೈಯುಕ್ತಿಕ ಸಂಕಟಗಳನ್ನು ಮರೆತು ಪ್ರೇಕ್ಷಕರ ಮನಸು ಹಗುರಗೊಳಿಸುವ ಕಲಾವಿದರ ಬದುಕು ಸಹನೀಯವಾಗಬೇಕು. ಕಲೆಗಳಿಗೆ ಜೀವ ತುಂಬಿ ಮೌಲ್ಯಗಳನ್ನು ವೃದ್ದಿಸುವ ಕಲಾವಿದರಲ್ಲಿ ವಿಶೇಷ ಸಾಮರ್ಥ್ಯ‌ ಕಾಣಬಹುದು ಎಂದು ಹಿರಿಯ ವೈದ್ಯ ಡಾ. ಜೀವಂಧರ್‌ ಜೈನ್‌ ಅಭಿಪ್ರಾಯಪಟ್ಟರು.

Vijaya Karnataka 21 Mar 2019, 5:00 am
ತೀರ್ಥಹಳ್ಳಿ : ವೈಯುಕ್ತಿಕ ಸಂಕಟಗಳನ್ನು ಮರೆತು ಪ್ರೇಕ್ಷಕರ ಮನಸು ಹಗುರಗೊಳಿಸುವ ಕಲಾವಿದರ ಬದುಕು ಸಹನೀಯವಾಗಬೇಕು. ಕಲೆಗಳಿಗೆ ಜೀವ ತುಂಬಿ ಮೌಲ್ಯಗಳನ್ನು ವೃದ್ದಿಸುವ ಕಲಾವಿದರಲ್ಲಿ ವಿಶೇಷ ಸಾಮರ್ಥ್ಯ‌ ಕಾಣಬಹುದು ಎಂದು ಹಿರಿಯ ವೈದ್ಯ ಡಾ. ಜೀವಂಧರ್‌ ಜೈನ್‌ ಅಭಿಪ್ರಾಯಪಟ್ಟರು.
Vijaya Karnataka Web SMR-20TTH2


ಪಟ್ಟಣದ ವರ್ತಕರ ಸೌಹಾರ್ದ ಸಹಕಾರ ಸಂಘದಲ್ಲಿ ಬುಧವಾರ ಯಕ್ಷಗಾನ ಕಲಾವಿದರಾದ ಕುಂಬ್ಳೆ ಶ್ರೀಧರರಾವ್‌, ವಸಂತಗೌಡ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಸಾಂಸ್ಕೃತಿಕ ಕ್ಷೇತ್ರದಲ್ಲಿ ಯಕ್ಷಗಾನ ಕಲೆ ಶ್ರೇಷ್ಠತೆ ಪರಂಪರೆ ಹೊಂದಿದೆ. ಸಾರ್ಥಕತೆಯೊಂದಿಗೆ ಜೀವನದ ಮೌಲ್ಯಗಳನ್ನು ಸಮಾಜಕ್ಕೆ ಧಾರೆ ಎರೆಯುವ ಶಕ್ತಿ ಕಲೆಗೆ ಇದೆ. ಕುಂಬ್ಳೆ ಶ್ರೀಧರರಾವ್‌, ವಸಂತಗೌಡ ಯಕ್ಷಗಾನ ಕಲೆಯ ಜೀವಂತಿಕೆಯನ್ನು ಇಮ್ಮಡಿಗೊಳಿಸಿದವರು ಎಂದು ಹೇಳಿದರು.

ಹಿರಿಯ ರಂಗ ಕಲಾವಿದ ಸಂದೇಶಜವಳಿ ಮಾತನಾಡಿ, ಶ್ರದ್ಧೆ, ಸಾಧನೆಯಿಂದ ಮಾತ್ರ ಯಕ್ಷಗಾನ ಕಲೆ ಒಲಿಸಿಕೊಳ್ಳಲು ಸಾಧ್ಯ. ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ನೀಡಲು ಯಕ್ಷಗಾನ ಕಲೆ ಉತ್ತಮ ಮಾರ್ಗದರ್ಶಕವಾಗಿದೆ. ಕಲಾವಿದರ ಸಾಧನೆ ಗುರುತಿಸಿ ಸನ್ಮಾನದ ಮೂಲಕ ಪ್ರೋತ್ಸಾಹಿಸುವ ಸೌಹಾರ್ದ ಸಹಕಾರ ಸಂಘದ ಕಾರ‍್ಯ ಶ್ಲಾಘನೀಯ ಎಂದರು.

ವರ್ತಕರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಡಾನ್‌ ರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕರಾದ ರಾಘವೇಂದ್ರ ಮಲ್ಯ, ನಾಗರಾಜಗೌಡ, ಮಹಮ್ಮದ್‌ ರಫಿ, ಮೋಹಿನಿ ಎ.ಆಚಾರ‍್ಯ, ಯುವರಾಜ್‌, ಬಳಗಟ್ಟೆ ಗಿರೀಶ್‌, ರಾಘವೇಂದ್ರ ಶೆಣೈ, ಕಾರ‍್ಯನಿರ್ವಹಣಾಧಿಕಾರಿ ರೂಪರಾವ್‌, ಶ್ಯಾಮಲಾಶೆಟ್ಟಿ, ರಾಜೀವಿಶೆಟ್ಟಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ