ಆ್ಯಪ್ನಗರ

ವಿದ್ಯಾರ್ಥಿ ಉತ್ತಮ ವಿಜ್ಞಾನಿ ಆಗಲಿ

ಸ್ಪರ್ಧಾತ್ಮಕ ಯುಗದಲ್ಲಿವಿಜ್ಞಾನ ಆವಿಷ್ಕಾರಗಳಂತಹ ಕ್ಷೇತ್ರದ ಬಗ್ಗೆ ಗಮನ ಹರಿಸುವ ಮೂಲಕ ಸಮಾಜದಲ್ಲಿಜ್ಞಾನ ನೀಡುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಭವಿಷ್ಯದಲ್ಲಿಉತ್ತಮ ವಿಜ್ಞಾನಿಗಳಾಗಬೇಕೆಂದು ಶಾಸಕ ಬಿ.ಕೆ.ಸಂಗಮೇಶ್ವರ್‌ ಹೇಳಿದರು.

Vijaya Karnataka 5 Dec 2019, 5:00 am
* ಆವಿಷ್ಕಾರದತ್ತ ಗಮನಹರಿಸಿ
Vijaya Karnataka Web 4BDVT2_46
ಭದ್ರಾವತಿ ತಾಲೂಕಿನ ಬಿಆರ್‌ಪಿ ಸರಕಾರಿ ಮಾದರಿ ಕನ್ನಡ ಮತ್ತು ಆಂಗ್ಲಮಾದ್ಯಮ ಶಾಲೆಯಲ್ಲಿಮಕ್ಕಳ ವಿಜ್ಞಾನ ಹಬ್ಬವನ್ನು ಶಾಸಕ ಬಿ.ಕೆ.ಸಂಗಮೇಶ್ವರ್‌ ಉದ್ಘಾಟಿಸಿದರು.


* ಜ್ಞಾನ ನೀಡುವ ಕೆಲಸವಾಗಲಿ

*ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ

ಭದ್ರಾವತಿ: ಸ್ಪರ್ಧಾತ್ಮಕ ಯುಗದಲ್ಲಿವಿಜ್ಞಾನ ಆವಿಷ್ಕಾರಗಳಂತಹ ಕ್ಷೇತ್ರದ ಬಗ್ಗೆ ಗಮನ ಹರಿಸುವ ಮೂಲಕ ಸಮಾಜದಲ್ಲಿಜ್ಞಾನ ನೀಡುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಭವಿಷ್ಯದಲ್ಲಿಉತ್ತಮ ವಿಜ್ಞಾನಿಗಳಾಗಬೇಕೆಂದು ಶಾಸಕ ಬಿ.ಕೆ.ಸಂಗಮೇಶ್ವರ್‌ ಹೇಳಿದರು.

ಅವರು ತಾಲೂಕಿನ ಬಿಆರ್‌ಪಿ ಸರಕಾರಿ ಮಾದರಿ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲೆಯಲ್ಲಿಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಭಾರತ ವಿಜ್ಞಾನ ಸಮಿತಿ ಆಶ್ರಯದಲ್ಲಿಕ್ಲಸ್ಟರ್‌ ಮಟ್ಟದ ಎರಡು ದಿನಗಳ 'ಮಕ್ಕಳ ವಿಜ್ಞಾನ ಹಬ್ಬ' ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿರುವ ಸೂಕ್ತ ಪ್ರತಿಭೆ ಗುರುತಿಸುವಂತಹ ಕಾರ್ಯ ಇದು. ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆಂದರು.

ಕಾರ‍್ಯಕ್ರಮದಲ್ಲಿಚುಕ್ಕಿ ಚಂದ್ರಮ, ಸೌರವ್ಯೂಹ, ಮಾಡು ಆಡು, ಆಡು-ಹಾಡು, ಊರು ತಿಳಿಯೋಣ ಎಂಬ ನಾಲ್ಕು ಭಾಗದಲ್ಲಿಮಕ್ಕಳ ಹಬ್ಬ ಆಯೋಜಿಸಲಾಗುತ್ತಿದೆ. ಸರಕಾರಿ ಮಾದರಿ ಕನ್ನಡ ಮತ್ತು ಆಂಗ್ಲಮಾದ್ಯಮ ಶಾಲೆ ಬಿಆರ್‌ಪಿ, ಗೋಣಿಬೀಡು, ನೆಲ್ಲಿಸರ, ಕಂಬದಾಳು ಹೊಸೂರು, ಹುಣಸೆಕಟ್ಟೆ, ಶಂಕರಘಟ್ಟ ಭಾಗಗಳಿಂದ ಸುಮಾರು 150 ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳ ವೇಷಭೂಷಣವು ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನಡೆದ ಪಥ ಸಂಚಲನದಲ್ಲಿಗಮನ ಸೆಳೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮಾ, ಎಸ್‌ಡಿಎಂಸಿ ಅಧ್ಯಕ್ಷ ಮುತ್ತುರಾಜು, ಸಿಆರ್‌ಪಿ ನಾಗರತ್ನಮ್ಮ, ಪಿಡಿಒ ಸೋಮಶೇಖರ, ಶಿಕ್ಷಕ ಪ್ರವೀಣ್‌, ಸದಸ್ಯರಾದ ಜಯಮ್ಮ, ಗಿರೀಶ್‌, ರುದ್ರೇಶ್‌ ಹಾಗೂ ಮನ್ಸೂರ್‌ ಆಲಿಖಾನ್‌ ಇತರರು ಇದ್ದರು.

==========
ವಿದ್ಯಾರ್ಥಿಗಳು ಮುಂದೆ ಸೃಜಶೀಲರಾಗಲು ಇಂತಹ ಹಬ್ಬ ಸಹಕಾರಿ. ಆದ್ದರಿಂದ ಭವಿಷ್ಯದಲ್ಲಿಉತ್ತಮ ವಿಜ್ಞಾನಿಗಳಾಗಿ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು.
-ಬಿ.ಕೆ.ಸಂಗಮೇಶ್ವರ್‌, ಶಾಸಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ