ಆ್ಯಪ್ನಗರ

ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಡಿಸಿಗೆ ಪತ್ರ

ನದಿಪಾತ್ರದಲ್ಲಿ ಅಧಿಕೃತವಾಗಿ ಗುರುತಿಸಿ ಗುತ್ತಿಗೆ ನೀಡಲಾದ ಪ್ರದೇಶದ ಪಕ್ಕದಲ್ಲಿ ಅಕ್ರಮವಾಗಿ ಮರಳು ಸಾಗಿಸಲಾಗಿದೆ. ಆಳ ಗಣಿಗಾರಿಕೆ ನಡೆಸಲಾಗಿದ್ದು ಪರಿಸರ ನಾಶ ಕೃತ್ಯ ನಡೆದಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಶಾಸಕ ಆರಗ ಜ್ಞಾನೇಂದ್ರ ಬುಧವಾರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

Vijaya Karnataka 30 May 2019, 5:00 am
ತೀರ್ಥಹಳ್ಳಿ: ನದಿ ಪಾತ್ರದಲ್ಲಿ ಅಧಿಕೃತವಾಗಿ ಗುರುತಿಸಿ ಗುತ್ತಿಗೆ ನೀಡಲಾದ ಪ್ರದೇಶದ ಪಕ್ಕದಲ್ಲಿ ಅಕ್ರಮವಾಗಿ ಮರಳು ಸಾಗಿಸಲಾಗಿದೆ. ಆಳ ಗಣಿಗಾರಿಕೆ ನಡೆಸಲಾಗಿದ್ದು ಪರಿಸರ ನಾಶ ಕೃತ್ಯ ನಡೆದಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಶಾಸಕ ಆರಗ ಜ್ಞಾನೇಂದ್ರ ಬುಧವಾರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
Vijaya Karnataka Web letter to dc against illegal sand mining
ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಡಿಸಿಗೆ ಪತ್ರ


ತಾಲೂಕಿನಲ್ಲಿ ಸರಕಾರಿ ಕ್ವಾರೆಗೆ ಸೇರದ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಾಗಣೆ ಆದ ಕುರಿತು ಯಾವುದೇ ಕಾನೂನು ಕ್ರಮ ಜರುಗಿಲ್ಲ. ಗುತ್ತಿಗೆ ಪ್ರದೇಶದ ಬಳಿ ಅನಧಿಕೃತವಾಗಿ ಮರಳು ಸಾಗಣೆಗೊಂಡು ನದಿ ಪ್ರದೇಶಕ್ಕೆ ಹಾನಿಯಾಗಿದೆ. ತಕ್ಷಣ ಜಂಟಿ ಸರ್ವೆ ನಡೆಸಿ ಅಕ್ರಮ ಗುರುತಿಸಿ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಮರಳು ಹೆಚ್ಚು ದರಕ್ಕೆ ಮಾರಾಟವಾದ ಕುರಿತು ಸಾಕ್ಷ್ಯ ಸಮೇತ ಗಮನಕ್ಕೆ ತರಲಾಗಿದೆ. ಶಾಸಕರು, ಜಿಲ್ಲಾಧಿಕಾರಿ ಗಮನಕ್ಕೆ ಬರುವಂತೆ ಅಕ್ರಮ ನಡೆಯುತ್ತಿದ್ದರೂ ತಡೆಯಲಾಗದೆ ಅಸಹಾಯಕರಂತಿರುವುದು ಸಮಂಜಸವಲ್ಲ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ