ಆ್ಯಪ್ನಗರ

ಕುಮಾರಸ್ವಾಮಿ ಅವರಿಂದ ಸುಳ್ಳಿನ ರಾಜಕಾರಣ: ಆರೋಪ

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀರಾವರಿ ಬಗ್ಗೆ ಇರುವ ಸರಕಾರದ ಮಾಹಿತಿಯನ್ನು ತಿರುಚಿ ಸುಳ್ಳಿನ ಕಂತೆಯನ್ನು ಪುಂಕಾನುಪುಂಕವಾಗಿ ಜನತೆಗೆ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಾಸಕ ಕುಮಾರ್‌ ಬಂಗಾರಪ್ಪ ಆರೋಪಿಸಿದರು.

Vijaya Karnataka 20 Apr 2019, 5:00 am
ಸೊರಬ : ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀರಾವರಿ ಬಗ್ಗೆ ಇರುವ ಸರಕಾರದ ಮಾಹಿತಿಯನ್ನು ತಿರುಚಿ ಸುಳ್ಳಿನ ಕಂತೆಯನ್ನು ಪುಂಕಾನುಪುಂಕವಾಗಿ ಜನತೆಗೆ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಾಸಕ ಕುಮಾರ್‌ ಬಂಗಾರಪ್ಪ ಆರೋಪಿಸಿದರು.
Vijaya Karnataka Web kumara bangarappa -new1


ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕುಮಾರಸ್ವಾಮಿ ಅವರು ಸರಕಾರ, ಬಜೆಟ್‌, ಮನೆ ಸೇರಿದಂತೆ ಎಲ್ಲ ವಿಷಯಗಳಲ್ಲಿ ಸುಳ್ಳಿನ ಆಡಳಿತ ನಡೆಸುತ್ತಿದ್ದಾರೆ. ನವೆಂಬರ್‌ ತಿಂಗಳಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದರ ಪರಿಣಾಮ ಜನವರಿಯಲ್ಲಿ ಮೂಗೂರು ನೀರಾವರಿ ಯೋಜನೆ ಜಾರಿಗೊಳಿಸಲಾಗಿದೆ. ಇದನ್ನು ಅರಿಯದೆ ನಾನೇ ನೀರಾವರಿಗೆ ಒತ್ತು ನೀಡಿದ್ದೇನೆ ಎನ್ನುವುದು ಸರಿಯಲ್ಲ. ಅಲ್ಲದೆ ಜಾರಿಯಾಗದ ಮೂಡಿ ಏತ ನೀರಾವರಿ ಯೋಜನೆಯನ್ನು ಮಂಜೂರು ಮಾಡಿದ್ದೇನೆ ಎಂದು ಸುಳ್ಳಿನ ಮಾತುಗಳನ್ನಾಡಿದ್ದಾರೆ. ಸರಕಾರದ ಅಧಿಕೃತ ದಾಖಲೆಗಳನ್ನು ಮುಂದಿಟ್ಟುಕೊಳ್ಳದೆ ಸುಳ್ಳನ್ನು ಜನತೆಗೆ ಒಪ್ಪಿಸುವ ಮುಖ್ಯಮಂತ್ರಿಗೆ ಜ್ಞಾನ ಇಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಎರಡೂ ಚುನಾವಣೆಗಳಲ್ಲಿ ಮಧು ಬಂಗಾರಪ್ಪ ಅವರನ್ನು ಏಕೆ ಸೋಲಿಸಿದ್ದೀರಿ ಎಂದು ಕಾರಣ ಕೇಳುವ ಕುಮಾರಸ್ವಾಮಿ, ಕಾಗೋಡು ತಿಮ್ಮಪ್ಪ ಅವರೊಂದಿಗೆ ಮಧು ಸೇರಿಕೊಂಡು ಬಗರ್‌ ಹುಕುಂ ಹಕ್ಕುಪತ್ರ ವಿತರಿಸುವಲ್ಲಿ ಲೂಟಿ ಮಾಡಿರುವುದಕ್ಕೆ, ಅಭಿವೃದ್ಧಿ ಮಾಡದಿರುವುದಕ್ಕೆ ಜನ ಪಾಠ ಕಲಿಸಿದ್ದಾರೆ ಎಂಬುದನ್ನು ಅರಿಯಬೇಕು. ಬಂಗಾರಪ್ಪ ಅಂತವರಿಗೆಯೇ ರಾಜಕೀಯ ನೆಲೆ ನೀಡದ ದೇವೇಗೌಡ, ಕುಮಾರಸ್ವಾಮಿ ಅವರಿಂದ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲು ಸಾಧ್ಯವೆ? ಎಂದು ಪ್ರಶ್ನಿಸಿದರು.

ಗೀತಾ ಶಿವರಾಜ್‌ ಕುಮಾರ್‌ ಅವರು ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಕ್ಷೇತ್ರ ಬಿಟ್ಟಿದ್ದು, ಈಗ ತಮ್ಮನನ್ನ ಗೆಲ್ಲಿಸಿಕೊಳ್ಳಲು ದಿಢೀರನೆ ಪ್ರತ್ಯಕ್ಷ ರಾಗಿ ಮಾಹಿತಿ ಕೊರತೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಎ.ಎಲ್‌.ಅರವಿಂದ್‌, ಜಿ.ಪಂ. ಮಾಜಿ ಉಪಾಧ್ಯಕ್ಷ ಪಾಣಿರಾಜಪ್ಪ, ಎಂ.ಆರ್‌.ಪಾಟೀಲ್‌, ವಕೀಲ ನಾಗಪ್ಪ, ಶಿವಯೋಗಿ, ಮಧುರಾಯ್‌ ಜಿ.ಶೇಟ್‌ ಮತ್ತಿತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ