ಆ್ಯಪ್ನಗರ

ಎನ್‌ಎಸ್‌ಎಸ್‌ನಿಂದ ಜೀವನದ ಪಾಠ

ಸತ್ಯ, ಅಹಿಂಸೆ, ತ್ಯಾಗ, ಭ್ರಾತೃತ್ವಗಳ ಸಂಕೇತವಾಗಿ ರಾಮ ರಾಜ್ಯ ಸ್ಥಾಪನೆಯ ಕನಸು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರದ್ದಾಗಿತ್ತು ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಜೆ.ಎಲ್‌.ಪದ್ಮನಾಭ ತಿಳಿಸಿದರು.

Vijaya Karnataka 28 Sep 2019, 5:00 am
ಶಿವಮೊಗ್ಗ: ಸತ್ಯ, ಅಹಿಂಸೆ, ತ್ಯಾಗ, ಭ್ರಾತೃತ್ವಗಳ ಸಂಕೇತವಾಗಿ ರಾಮ ರಾಜ್ಯ ಸ್ಥಾಪನೆಯ ಕನಸು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರದ್ದಾಗಿತ್ತು ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಜೆ.ಎಲ್‌.ಪದ್ಮನಾಭ ತಿಳಿಸಿದರು.
Vijaya Karnataka Web 26GANESH11_46


ನಗರದ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವ ಹಾಗೂ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ, ಎನ್‌ಎಸ್‌ಎಸ್‌ ಸಂಸ್ಥಾಪನಾ ದಿನಾಚರಣೆಯಲ್ಲಿಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನೆ ಮನುಷ್ಯನಲ್ಲಿಸೇವೆ, ಸ್ವಾಭಿಮಾನ, ತ್ಯಾಗ ಮನೋಭಾವ ಬೆಳೆಸಲು ಸಹಕಾರಿ. ವಿದ್ಯಾರ್ಥಿನಿಯರಿಗೆ ಜೀವನ ಪಾಠ ಕಲಿಸಲು ಸರಿಯಾದ ವೇದಿಕೆಯಾಗಿದೆ. ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿ ಸದುಪಯೋಗಪಡಿಸಿಕೊಳ್ಳಬೇಕೆಂದರು.

ಹಿಂದೆ ಮಹಿಳೆಗೆ ಏನಾದರೂ ಶಿಕ್ಷಣ ದೊರಕಿಸಿಕೊಳ್ಳಬೇಕು, ಸಾಮಾಜಿಕ ಸೇವೆಯಲ್ಲಿತೊಡಗಿಸಿಕೊಳ್ಳಬೇಕೆಂದು ಮನಸ್ಸು ಮಾಡಿದರೂ ಅಂದಿನ ಸಾಮಾಜಿಕ ವ್ಯವಸ್ಥೆ ಅವಕಾಶ ನೀಡುತ್ತಿರಲಿಲ್ಲ. ಆದರೆ, ಈಗ ಕಾಲ ಬದಲಾಗಿದೆ. ಪ್ರತಿಯೊಬ್ಬ ಮಹಿಳೆ ಸಾರ್ವಜನಿಕ ಕ್ಷೇತ್ರದಲ್ಲಿತೊಡಗಿಸಿಕೊಳ್ಳಲು ಸಕಲ ಅವಕಾಶಗಳಿವೆ ಎಂದರು. ಕಾರ್ಯಕ್ರಮದಲ್ಲಿಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಟಿ.ಪಾರ್ವತಮ್ಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಡಾ.ಆರ್‌.ಎಂ.ಜಗದೀಶ, ಕಾರ್ಯಕ್ರಮಾಧಿಕಾರಿ ವಿದ್ವಾನ್‌ ಮಂಜುನಾಥ ಭಟ್‌, ಎನ್‌.ಮಂಜುಳಾ, ಸ್ವಾತಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ