ಆ್ಯಪ್ನಗರ

ಲೈನ್‌ಮೆನ್‌ ಅರೆಬೆತ್ತಲೆ ಪ್ರತಿಭಟನೆ

ಹಿರಿಯ ಅಧಿಕಾರಿಯ ಕಿರುಕುಳಕ್ಕೆ ಬೇಸತ್ತ ಮೆಸ್ಕಾಂ ಲೈನ್‌ಮೆನ್‌ ಒಬ್ಬರು ಮೆಸ್ಕಾಂ ವೃತ್ತ ಕಚೇರಿ ಆವರಣದಲ್ಲಿ ಶನಿವಾರ ಅರೆ ಬೆತ್ತಲೆ ಪ್ರತಿಭಟನೆ ನಡೆಸಿ ವಿಷ ಸೇವನೆಗೆ ಯತ್ನಿಸಿದರು.

Vijaya Karnataka 4 Aug 2019, 10:29 am
ಶಿವಮೊಗ್ಗ : ಹಿರಿಯ ಅಧಿಕಾರಿಯ ಕಿರುಕುಳಕ್ಕೆ ಬೇಸತ್ತ ಮೆಸ್ಕಾಂ ಲೈನ್‌ಮೆನ್‌ ಒಬ್ಬರು ಮೆಸ್ಕಾಂ ವೃತ್ತ ಕಚೇರಿ ಆವರಣದಲ್ಲಿ ಶನಿವಾರ ಅರೆ ಬೆತ್ತಲೆ ಪ್ರತಿಭಟನೆ ನಡೆಸಿ ವಿಷ ಸೇವನೆಗೆ ಯತ್ನಿಸಿದರು.
Vijaya Karnataka Web lineman


ಲೈನ್‌ಮೆನ್‌ ತಿರುಮಲೇಶ್‌ ಅವರು ಕಿರಿಯ ಎಂಜಿನಿಯರ್‌ ಹನುಮಂತಪ್ಪ ಅವರು ತಮಗೆ ಕಿರುಕುಳ ನೀಡುತ್ತಿದ್ದಾರೆ. ತಮಗೆ ಅವರ ಕೈ ಕೆಳಗೆ ಕೆಲಸ ಮಾಡಲು ಇಷ್ಟವಿಲ್ಲ. ಹೀಗಾಗಿ ತಮ್ಮನ್ನು ಬೇರೆಡೆಗೆ ವರ್ಗಾಯಿಸಿ ಇಲ್ಲವೆ ಅವರನ್ನು ವರ್ಗಾವಣೆ ಮಾಡಬೇಕೆಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರಿಗೆ ಹಲವು ಬಾರಿ ಮನವಿ ಕೊಟ್ಟಿದ್ದೇನೆ. ಆದರೆ, ಇದೂವರೆಗೆ ತಮ್ಮ ಮನವಿಗೆ ಅಧಿಕಾರಿಗಳು ಸ್ಪಂದಿಸಿಲ್ಲ. ಅಂತಿಮವಾಗಿ ಈ ತೀರ್ಮಾನಕ್ಕೆ ಬಂದಿದೇನೆ ಎಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಕೋಟೆ ಠಾಣೆ ಪೊಲೀಸರು ತಿರುಮಲೇಶ್‌ ಅವರ ಮನವೊಲಿಸಿ ಅವರನ್ನು ಪೊಲೀಸ್‌ ಠಾಣೆಗೆ ಕರೆದೊಯ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ