ಆ್ಯಪ್ನಗರ

ಸಾಹಿತ್ಯದ ಓದು ವ್ಯಕ್ತಿತ್ವ ವಿಕಸನಕ್ಕೆ ಪೂರಕ

ಸಾಹಿತ್ಯದ ಓದು ವ್ಯಕ್ತಿತ್ವ ವಿಕಸನಕ್ಕೆ ಪೂರಕ ಎಂದು ಸಾಹಿತಿ ಡಾ. ಶಾಂತಾರಾಮ ಪ್ರಭು ಹೇಳಿದರು.

Vijaya Karnataka 30 Aug 2019, 5:00 am
ಹೊಸನಗರ: ಸಾಹಿತ್ಯದ ಓದು ವ್ಯಕ್ತಿತ್ವ ವಿಕಸನಕ್ಕೆ ಪೂರಕ ಎಂದು ಸಾಹಿತಿ ಡಾ. ಶಾಂತಾರಾಮ ಪ್ರಭು ಹೇಳಿದರು.
Vijaya Karnataka Web literary reading complements personality development
ಸಾಹಿತ್ಯದ ಓದು ವ್ಯಕ್ತಿತ್ವ ವಿಕಸನಕ್ಕೆ ಪೂರಕ


ಇಲ್ಲಿನ ಕೊಡಚಾದ್ರಿ ಪ್ರಥಮದರ್ಜೆ ಕಾಲೇಜಿನಲ್ಲಿಗುರುವಾರ ಕನ್ನಡ ಸಾಹಿತ್ಯ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿ, ನಿತ್ಯ ಜೀವನದಲ್ಲಿಓದಿಗೆ ಕೊಂಚವಾದರೂ ಸಮಯ ಮೀಸಲಿಡಬೇಕೆಂದರು.

ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಕೋನದಿಂದ ನೋಡುವ ಪ್ರವೃತ್ತಿ ಹೆಚ್ಚುತ್ತಿದೆ. ವರ್ಷವಿಡೀ ನಡೆಯುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಾರ‍್ಯಕ್ರಮ ಯಶಸ್ವಿಯಾಗಲಿ. ವಿದ್ಯಾರ್ಥಿಗಳು ಇಂತಹ ಕಾರ‍್ಯಕ್ರಮ ಸದುಪಯೋಗ ಪಡೆಯಬೇಕೆಂದರು. ನಿವೃತ್ತ ಪ್ರಾಚಾರ‍್ಯ ಡಾ.ಮಾರ್ಷಲ್‌ ಶರಾಂ ಮಾತನಾಡಿ, ಕನ್ನಡ ಸಾಹಿತ್ಯ ವೇದಿಕೆಯನ್ನು ರಚನಾತ್ಮಕವಾಗಿ ನಡೆಸಿಕೊಂಡು ಹೋಗಬೇಕೆಂದರು. ಯಕ್ಷಸಿರಿ ಪ್ರಶಸ್ತಿಗೆ ಭಾಜನರಾಗಿರುವ ಹಿನ್ನೆಲೆಯಲ್ಲಿವೇದಿಕೆ ವತಿಯಿಂದ ಡಾ.ಶಾಂತಾರಾಮ ಪ್ರಭು ಅವರನ್ನು ಸನ್ಮಾನಿಸಲಾಯಿತು. ಐಕ್ಯೂಎಸಿ ಸಂಚಾಲಕರಾದ ಡಾ.ಎಚ್‌.ಲೋಕೇಶಪ್ಪ, ಕನ್ನಡ ವಿಭಾಗದ ಮುಖ್ಯಸ್ಥೆ ಕೆ.ಸಿ.ಸೌಮ್ಯ, ಸಾಹಿತ್ಯ ವೇದಿಕೆ ಉಪಾಧ್ಯಕ್ಷ ಬಿ.ಆರ್‌.ನವೀನ, ಸಹಾಯಕ ಪ್ರಾಧ್ಯಾಪಕ ಸಿ. ಜಯಪ್ಪ, ಉಪನ್ಯಾಸಕರಾದ ಶ್ರೀಧರಶೆಟ್ಟಿ, ನಾಗಶ್ರೀ ಇತರರು ಇದ್ದರು. ಸಹಾಯಕ ಪ್ರಾಧ್ಯಾಪಕಿ ಪ್ರತಿಮಾ ಪ್ರಾಸ್ತಾವಿಕ ಮಾತನಾಡಿದರು. ರಶ್ಮಿತಾ ಸ್ವಾಗತಿಸಿ, ಭೂಮಿಕಾ ವಂದಿಸಿ, ರಂಜನಿ ನಿರೂಪಿಸಿದರು.

------
ಜೀವನದ ಮೌಲ್ಯಗಳ ಸಾರ ಅರಿಯಲು ಓದು ಹೆಚ್ಚು ಸಹಕಾರಿ. ಕನ್ನಡ ಭಾಷೆ ಸಾಹಿತ್ಯ ಕ್ಷೇತ್ರದಲ್ಲಿಅತ್ಯಂತ ಶ್ರೀಮಂತವಾಗಿದ್ದು, ವಿದ್ಯಾರ್ಥಿಗಳು ಅಧ್ಯಯನಕ್ಕೆ ಮಹತ್ವ ನೀಡಬೇಕು. ವಾಚನಾಲಯಕ್ಕೆ ನಿಯಮಿತವಾಗಿ ಭೇಟಿ ನೀಡುವ ಹವ್ಯಾಸ ಬೆಳೆಸಿಕೊಳ್ಳಬೇಕು.
- ಡಾ.ಶಾಂತಾರಾಮಪ್ರಭು, ಸಾಹಿತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ