ಆನಂದಪುರಂ: ಹಿರೇಹಾರಕ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್ನಿಂದ ಎಲ್ಕೆಜಿ ಮತ್ತು ಯುಕೆಜಿ ತರಗತಿ ನಡೆಸಲು ಸಾರ್ವಜನಿಕ ಶಿಕ್ಷ ಣ ಇಲಾಖೆಯಿಂದ ಮಂಜೂರು ದೊರೆತಿದ್ದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
ರಾಜ್ಯಾದ್ಯಂತ ಸರಕಾರ ಇಂತಹ ತರಗತಿ ತೆರೆಯಲು ಅನುಮತಿ ನೀಡುವ ಮೊದಲೇ ಈ ಶಾಲೆಯ ಎಸ್ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು, ಶಿಕ್ಷ ಕರು ಪೂರ್ವ ಪ್ರಾಥಮಿಕ ಶಿಕ್ಷ ಣದ ತರಗತಿ ಆರಂಭಿಸಿದ್ದರು. 2017ರ ಜೂನ್ನಲ್ಲಿ ಶ್ರೀದುರ್ಗಾಮಾತಾ ಪೂರ್ವ ಪ್ರಾಥಮಿಕ ಶಾಲೆ ಎಂಬ ಹೆಸರಲ್ಲಿ ತರಗತಿ ಆರಂಭಿಸಲಾಗಿತ್ತು. ತರಗತಿ ಬೋಧನಾ ಕಾರ್ಯಕ್ಕೆ ಗ್ರಾಮಸ್ಥರೇ ವಂತಿಗೆ ಸಂಗ್ರಹಿಸಿ ಇಬ್ಬರು ಶಿಕ್ಷ ಕಿಯರು ಮತ್ತು ಒಬ್ಬ ಸಹಾಯಕಿ ನೇಮಕ ಮಾಡಿಕೊಂಡಿದ್ದರು. ತರಗತಿ ಆರಂಭಿಸಿದ ನಂತರ ಶಾಲೆ ಮಕ್ಕಳ ಸಂಖ್ಯೆ ಸಹ ಗಣನೀಯವಾಗಿ ಏರಿತ್ತು. ಪೋಷಕರು ತಮ್ಮ ಗ್ರಾಮದಲ್ಲೇ ಈ ವ್ಯವಸ್ಥೆಗೆ ಧನ್ಯತೆ ಹೊಂದಿದ್ದರು. ಈ ತರಗತಿಗಳ ಬಗ್ಗೆ ಸರಕಾರದಿಂದ ಮಂಜೂರು ನೀಡುವಂತೆ ಮನವಿ ಸಲ್ಲಿಸಿದ್ದರು. ಸಾಗರ ತಾ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ 2018ರ ಜುಲೈನಲ್ಲಿ ಶಾಲೆಗೆ ಭೇಟಿ ನೀಡಿ ಶಾಲಾ ಪರಿಸರ ಮತ್ತು ವ್ಯವಸ್ಥೆ ನೋಡಿ ಸಂತಸವ್ಯಕ್ತಪಡಿಸಿದ್ದರು. ಸರಕಾರಕ್ಕೆ ಮನವಿ ಸಲ್ಲಿಸಿ ಸಾಗರ ತಾಲೂಕಿನ ಹಲವು ಶಾಲೆಗಳಲ್ಲಿ ಎಲ್ಕೆಜಿ. ಮತ್ತು ಯುಕೆಜಿ ಮಂಜೂರಿಗೆ ಪ್ರಯತ್ನಿಸುವ ಭರವಸೆ ನೀಡಿದ್ದರು. ಅವರ ಸತತ ಪ್ರಯತ್ನದ ಫಲವಾಗಿ ಈಗ ಮಂಜೂರು ದೊರೆತಿದೆ ಎಂಬುದು ಗ್ರಾಮಸ್ಥರ ಅಭಿಮತ. ಎಸ್ಡಿಎಂಸಿ ಅಧ್ಯಕ್ಷ ಓಂಕಾರಪ್ಪ , ಗೌತಮಪುರ ಗ್ರಾ.ಪಂ.ಸದಸ್ಯ ರೇವಪ್ಪ ಪಟೇಲ್, ಶಾಲೆ ಮುಖ್ಯ ಶಿಕ್ಷ ಕ ಆರ್.ಚಂದ್ರಶೇಖರ್, ಇಲಾಖೆ ಮತ್ತು ತಾ.ಪಂ.ಅಧ್ಯಕ್ಷ ಹಕ್ರೆ ಅವರನ್ನು ಅಭಿನಂದಿಸಿದ್ದಾರೆ.
ರಾಜ್ಯಾದ್ಯಂತ ಸರಕಾರ ಇಂತಹ ತರಗತಿ ತೆರೆಯಲು ಅನುಮತಿ ನೀಡುವ ಮೊದಲೇ ಈ ಶಾಲೆಯ ಎಸ್ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು, ಶಿಕ್ಷ ಕರು ಪೂರ್ವ ಪ್ರಾಥಮಿಕ ಶಿಕ್ಷ ಣದ ತರಗತಿ ಆರಂಭಿಸಿದ್ದರು. 2017ರ ಜೂನ್ನಲ್ಲಿ ಶ್ರೀದುರ್ಗಾಮಾತಾ ಪೂರ್ವ ಪ್ರಾಥಮಿಕ ಶಾಲೆ ಎಂಬ ಹೆಸರಲ್ಲಿ ತರಗತಿ ಆರಂಭಿಸಲಾಗಿತ್ತು. ತರಗತಿ ಬೋಧನಾ ಕಾರ್ಯಕ್ಕೆ ಗ್ರಾಮಸ್ಥರೇ ವಂತಿಗೆ ಸಂಗ್ರಹಿಸಿ ಇಬ್ಬರು ಶಿಕ್ಷ ಕಿಯರು ಮತ್ತು ಒಬ್ಬ ಸಹಾಯಕಿ ನೇಮಕ ಮಾಡಿಕೊಂಡಿದ್ದರು. ತರಗತಿ ಆರಂಭಿಸಿದ ನಂತರ ಶಾಲೆ ಮಕ್ಕಳ ಸಂಖ್ಯೆ ಸಹ ಗಣನೀಯವಾಗಿ ಏರಿತ್ತು. ಪೋಷಕರು ತಮ್ಮ ಗ್ರಾಮದಲ್ಲೇ ಈ ವ್ಯವಸ್ಥೆಗೆ ಧನ್ಯತೆ ಹೊಂದಿದ್ದರು. ಈ ತರಗತಿಗಳ ಬಗ್ಗೆ ಸರಕಾರದಿಂದ ಮಂಜೂರು ನೀಡುವಂತೆ ಮನವಿ ಸಲ್ಲಿಸಿದ್ದರು. ಸಾಗರ ತಾ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ 2018ರ ಜುಲೈನಲ್ಲಿ ಶಾಲೆಗೆ ಭೇಟಿ ನೀಡಿ ಶಾಲಾ ಪರಿಸರ ಮತ್ತು ವ್ಯವಸ್ಥೆ ನೋಡಿ ಸಂತಸವ್ಯಕ್ತಪಡಿಸಿದ್ದರು. ಸರಕಾರಕ್ಕೆ ಮನವಿ ಸಲ್ಲಿಸಿ ಸಾಗರ ತಾಲೂಕಿನ ಹಲವು ಶಾಲೆಗಳಲ್ಲಿ ಎಲ್ಕೆಜಿ. ಮತ್ತು ಯುಕೆಜಿ ಮಂಜೂರಿಗೆ ಪ್ರಯತ್ನಿಸುವ ಭರವಸೆ ನೀಡಿದ್ದರು. ಅವರ ಸತತ ಪ್ರಯತ್ನದ ಫಲವಾಗಿ ಈಗ ಮಂಜೂರು ದೊರೆತಿದೆ ಎಂಬುದು ಗ್ರಾಮಸ್ಥರ ಅಭಿಮತ. ಎಸ್ಡಿಎಂಸಿ ಅಧ್ಯಕ್ಷ ಓಂಕಾರಪ್ಪ , ಗೌತಮಪುರ ಗ್ರಾ.ಪಂ.ಸದಸ್ಯ ರೇವಪ್ಪ ಪಟೇಲ್, ಶಾಲೆ ಮುಖ್ಯ ಶಿಕ್ಷ ಕ ಆರ್.ಚಂದ್ರಶೇಖರ್, ಇಲಾಖೆ ಮತ್ತು ತಾ.ಪಂ.ಅಧ್ಯಕ್ಷ ಹಕ್ರೆ ಅವರನ್ನು ಅಭಿನಂದಿಸಿದ್ದಾರೆ.