ಆ್ಯಪ್ನಗರ

ಜಿಲ್ಲಾಸ್ಪತ್ರೆ ಸ್ಥಳಾಂತರಕ್ಕೆ ಮಧು ಬಂಗಾರಪ್ಪ ಕಾರಣ: ಸಂಸದ

ಪಟ್ಟಣದಲ್ಲಿ ಕಾರ‍್ಯನಿರ್ವಹಿಸುತ್ತಿದ್ದ ಜಿಲ್ಲಾ ಮಟ್ಟದ ಆಸ್ಪತ್ರೆ ಸ್ಥಳಾಂತರಿಸಲು ವಿಧಾನಸಭೆಯಲ್ಲಿ ಗಲಾಟೆ ಮಾಡುವ ಮೂಲಕ ಐದು ತಾಲೂಕಿನ ಜನರಿಗೆ ಅನ್ಯಾಯ ಮಾಡಿದ ಕೀರ್ತಿ ಮಧು ಬಂಗಾರಪ್ಪಗೆ ಸಲ್ಲುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.

Vijaya Karnataka 23 Mar 2019, 5:00 am
ಶಿಕಾರಿಪುರ: ಪಟ್ಟಣದಲ್ಲಿ ಕಾರ‍್ಯನಿರ್ವಹಿಸುತ್ತಿದ್ದ ಜಿಲ್ಲಾ ಮಟ್ಟದ ಆಸ್ಪತ್ರೆ ಸ್ಥಳಾಂತರಿಸಲು ವಿಧಾನಸಭೆಯಲ್ಲಿ ಗಲಾಟೆ ಮಾಡುವ ಮೂಲಕ ಐದು ತಾಲೂಕಿನ ಜನರಿಗೆ ಅನ್ಯಾಯ ಮಾಡಿದ ಕೀರ್ತಿ ಮಧು ಬಂಗಾರಪ್ಪಗೆ ಸಲ್ಲುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.
Vijaya Karnataka Web SMR-22SKP2


ಪಟ್ಟಣದಲ್ಲಿ ಶುಕ್ರವಾರ ಕಾರ‍್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಮೆಗ್ಗಾನ್‌ ಹೊರತುಪಡಿಸಿದರೆ ಜಿಲ್ಲೆಯಲ್ಲೆ ಅತಿಹೆಚ್ಚು ರೋಗಿಗಳು ಭೇಟಿ ನೀಡುವ ಸರಕಾರಿ ಆಸ್ಪತ್ರೆ ಶಿಕಾರಿಪುರದ್ದು. ಇಲ್ಲಿದ್ದ ಜಿಲ್ಲಾ ಮಟ್ಟದ ಆಸ್ಪತ್ರೆ ಬೇರೆಕಡೆ ವರ್ಗಾಯಿಸಬೇಕು ಎಂದು ಮಧು ಬಂಗಾರಪ್ಪ ಒತ್ತಾಯಿಸಿದರ ಪರಿಣಾಮ ಅದು ಶಿವಮೊಗ್ಗಕ್ಕೆ ಸ್ಥಳಾಂತರಗೊಂಡಿತು. ಸೊರಬ, ಸಾಗರ, ಹಿರೇಕೇರೂರು, ಹೊನ್ನಾಳಿ ಭಾಗದ ರೋಗಿಗಳು ಇಲ್ಲಿಗೆ ಆಗಮಿಸುತ್ತಾರೆ. ಅವರೆಲ್ಲರಿಗೆ ಸಿಗುತ್ತಿದ್ದ ಸೌಲಭ್ಯ ಕಿತ್ತುಕೊಂಡರು ಎಂದು ಟೀಕಿಸಿದರು.

ಜಿಲ್ಲೆಯ ನೀರಾವರಿ ಯೋಜನೆಗಾಗಿ ಕಡತ ಸಿದ್ಧಪಡಿಸುವುದಕ್ಕೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ, ಕಡತ ಬೋರ್ಡ್‌ ಮೀಟಿಂಗ್‌ನಲ್ಲಿ ಪಾಸ್‌ ಆಗುವವರೆಗೂ ನಿತ್ಯ ಪಾಲೋಅಪ್‌ ಮಾಡಿದ್ದು ನಾವು. ಡಿಕೆಶಿ ಮನೆಗೆ ತೆರಳುವುದಕ್ಕೆ ನಮ್ಮ ಪಕ್ಷ ದವರದ್ದೆ ವಿರೋಧ ಇತ್ತು. ಆದರೂ ರೈತರ ಹಿತಕ್ಕಾಗಿ ಬಿಎಸ್‌ವೈ ಶಿಷ್ಟಾಚಾರ ಬದಿಗೊತ್ತಿ ಡಿಕೆಶಿ ಭೇಟಿ ಮಾಡಿದ್ದರು. ಮುಖ್ಯಮಂತ್ರಿಗಳ ಬಳಿಯೂ ತೆರಳಿ ಮನವಿ ಮಾಡಿದ ಪರಿಣಾಮ ಅನುದಾನ ಬಿಡುಗಡೆಯಾಗಿದೆ ಎಂದರು.

ಸೊರಬದಲ್ಲಿ ಮಧು ಶಾಸಕರಾಗಿದ್ದಾಗ ಯಾವ ನೀರಾವರಿ ಯೋಜನೆ ತಂದಿದ್ದಾರೆ, ಜನರ ಒತ್ತಡ ಇಲ್ಲದಿದ್ದರೂ ಪಟ್ಟಣ, ಶಿರಾಳಕೊಪ್ಪ ಕುಡಿಯುವ ನೀರಿಗಾಗಿ ಅಂಜನಾಪುರ ಜಲಾಶಯದಿಂದ ಪೈಪ್‌ಲೈನ್‌ ಮಾಡಲಾಗಿದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ ಮಾತನಾಡಿ, ಬಿಎಸ್‌ವೈ ಮುಖ್ಯಮಂತ್ರಿ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆ ಇಂದಿಗೂ ಜನರು ಮೆಚ್ಚುತ್ತಿದ್ದಾರೆ. ರೈತರ ಸಾಲಮನ್ನಾ, ಶೂನ್ಯ ಬಡ್ಡಿಗೆ ಸಾಲ, ಹಾಲಿಗೆ ಪ್ರೋತ್ಸಾಹ ಧನ, ಭಾಗ್ಯಲಕ್ಷ್ಮಿ ಯೋಜನೆ, ಕೃಷಿಭೂಮಿ ಅಭಿವೃದ್ಧಿಗೆ 10ಸಾವಿರ ಅನುದಾನ ಹೀಗೆ ಹಲವು ಸೌಲಭ್ಯ ನೀಡಿದ್ದಾರೆ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಕೊಳಗಿ ರೇವಣಪ್ಪ ಅಧ್ಯಕ್ಷ ತೆ ವಹಿಸಿದ್ದರು. ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭಭಟ್‌, ಕಾಡಾ ಮಾಜಿ ಅಧ್ಯಕ್ಷ ಕೆ.ಶೇಖರಪ್ಪ, ಕೆ.ಎಸ್‌.ಗುರುಮೂರ್ತಿ, ಸಿದ್ರಾಮಪ್ಪ, ಕೆ.ಹಾಲಪ್ಪ, ರಾಮಾನಾಯ್ಕ, ಬಂಗಾರಿನಾಯ್ಕ, ಟಿ.ಎಸ್‌.ಮೋಹನ್‌, ವಸಂತಗೌಡ ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ