ಆ್ಯಪ್ನಗರ

ಮೇವು ಪೂರೈಸಿ ಮಾನವೀಯತೆ ಮೆರೆದ ಮಧು

ಧಾರಾಕಾರ ಮಳೆ, ವರದಾ ನದಿ ನೆರೆಯಿಂದ ತಾಲೂಕಿನ ಆನವಟ್ಟಿ ಹೋಬಳಿ ನೆಲ್ಲಿಕೊಪ್ಪ ಗ್ರಾಮದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸುವ ಸಲುವಾಗಿ ಮಾಜಿ ಶಾಸಕ, ಜೆಡಿಎಸ್‌ ರಾಜ್ಯ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಅವರು ಎರಡು ಲೋಡ್‌ ಭತ್ತದ ಹುಲ್ಲನ್ನು ಪೂರೈಸಿ ಮಾನವೀಯತೆ ಮೆರೆದಿದ್ದಾರೆ.

Vijaya Karnataka 22 Aug 2019, 5:00 am
ಸೊರಬ: ಧಾರಾಕಾರ ಮಳೆ, ವರದಾ ನದಿ ನೆರೆಯಿಂದ ತಾಲೂಕಿನ ಆನವಟ್ಟಿ ಹೋಬಳಿ ನೆಲ್ಲಿಕೊಪ್ಪ ಗ್ರಾಮದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸುವ ಸಲುವಾಗಿ ಮಾಜಿ ಶಾಸಕ, ಜೆಡಿಎಸ್‌ ರಾಜ್ಯ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಅವರು ಎರಡು ಲೋಡ್‌ ಭತ್ತದ ಹುಲ್ಲನ್ನು ಪೂರೈಸಿ ಮಾನವೀಯತೆ ಮೆರೆದಿದ್ದಾರೆ.
Vijaya Karnataka Web SMR-21SRBP3


ತೀವ್ರ ಮಳೆ ಸಂದರ್ಭ ವರದಾ ನದಿ ಉಕ್ಕಿ ಹರಿದಿದ್ದು, ನೆಲ್ಲಿಕೊಪ್ಪ ಗ್ರಾಮದ ಹುಲ್ಲಿನ ಬಣವೆಗಳು ನೀರಿನಲ್ಲಿ ತೇಲಿ ಹೋಗಿವೆ. ಉಳಿದ ಬಣವೆಗಳು ಕೊಳೆತು ನಾರುತ್ತಿವೆ. ಗ್ರಾಮ ವ್ಯಾಪ್ತಿಯಲ್ಲಿ ಏಳೆಂಟು ದಿನಗಳ ಕಾಲ ನೀರು ನಿಂತಿದ್ದರಿಂದ ಹಸಿರು ಮೇವು ಸಹ ಜಾನುವಾರುಗಳಿಗೆ ಸಿಗದಂತಾಗಿದೆ. ಈ ಕುರಿತಂತೆ ತಾಲೂಕು ಆಡಳಿತಕ್ಕೆ ಬೇಡಿಕೊಂಡಿದ್ದರೂ ಪ್ರಯೋಜನವಾಗಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮಾಜಿ ಶಾಸಕ ಎಸ್‌.ಮಧು ಬಂಗಾರಪ್ಪ ಸೇರಿದಂತೆ ವಿವಿಧ ಜನಪ್ರತಿನಿಧಿಗಳ ತಂಡ ಇತ್ತೀಚೆಗೆ ತಾಲೂಕಿನಲ್ಲಿ ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿತ್ತು. ಈ ಸಂದರ್ಭ ನೆಲ್ಲಿಕೊಪ್ಪ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ಗ್ರಾಮಸ್ಥರು ದನಕರುಗಳಿಗೆ ಮೇವಿಲ್ಲ ಎಂದು ಗೋಳು ತೋಡಿಕೊಂಡಿದ್ದರು. ಗ್ರಾಮಸ್ಥರ ವಿನಂತಿಗೆ ಸ್ಪಂದಿಸಿದ ಮಧು ಬಂಗಾರಪ್ಪ, ಜಾನುವಾರು ಮತ್ತು ಜನರ ನೆರವಿಗೆ ಕ್ರಮಕೈಗೊಳ್ಳಲಾಗುವುದು ಎಂದಿದ್ದರು. ಅದರಂತೆ, ತಮ್ಮ ಸ್ವಂತ ಖರ್ಚಿನಲ್ಲಿ ಶಿರಸಿ, ಹೊನ್ನಾವರ ಎರಡು ಲೋಡ್‌ ಭತ್ತದ ಹುಲ್ಲನ್ನು ಗ್ರಾಮಕ್ಕೆ ಸರಬರಾಜು ಮಾಡಿಸಿದ್ದಾರೆ. ಗ್ರಾಮದಲ್ಲಿ 230ಕ್ಕೂ ಹೆಚ್ಚು ಮನೆಗಳಿದ್ದು, ಸಾವಿರಕ್ಕೂ ಹೆಚ್ಚು ಜಾನುವಾರುಗಳಿವೆ.

ತಾಲೂಕಿನ ನೆರೆ ಸಂತ್ರಸ್ತರಿಗೂ ಸ್ಪಂದಿಸುವ ಜತೆಗೆ ಬೆಳೆ ಹಾನಿ ಬಗ್ಗೆ ವರದಿ ಸಿದ್ಧಮಾಡಿ ಸರಕಾರಕ್ಕೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಾಲೂಕಿನಲ್ಲಿ ಆಗಿರುವ ಬೆಳೆ ಹಾನಿಗೆ ಸರಕಾರ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

---------
ತಾಲೂಕಿನಲ್ಲಿ ಜಾನುವಾರುಗಳ ಮೇವಿನ ಕೊರತೆ ಎದುರಾಗಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ. ಸಮಸ್ಯೆ ಎದುರಾದ ಕಡೆ ಮೇವು ವಿತರಿಸಲು ತಾಲೂಕಿನಲ್ಲಿ ಮೇವಿನ ಕೊರತೆ ಇದ್ದು, ಮೇವುದಾರರಿಂದ ಖರೀದಿಗೆ ಪಡೆಯಲು ಪ್ರಕಟಣೆ ನೀಡಲಾಗಿದೆ. ಸರಕಾರಿ ದರದಲ್ಲಿ ಮೇವು ದೊರೆತರೆ, ಸಮಸ್ಯೆ ಇರುವ ಕಡೆ ಪರಿಶೀಲಿಸಿ ಸರಕಾರದ ನಿರ್ದೇಶನದಂತೆ ಮೇವು ವಿತರಿಸಲಾಗುವುದು.
- ಪಟ್ಟರಾಜಗೌಡ, ತಹಸೀಲ್ದಾರರು, ಸೊರಬ.

====
ನೆಲ್ಲಿಕೊಪ್ಪ ಗ್ರಾಮದಲ್ಲಿ ಪ್ರವಾಹದಿಂದ ಬಹಳಷ್ಟು ಹುಲ್ಲಿನ ಬಣಬೆಗಳು ತೇಲಿಹೋಗಿವೆ. ಗ್ರಾಮ ಸುತ್ತಲಿನ ಪ್ರದೇಶದಲ್ಲಿ ಬೆಳೆದಿದ್ದ ಹಸಿರು ಹುಲ್ಲು ಕೊಳೆತುಹೋಗಿದೆ. ಗ್ರಾಮಕ್ಕೆ ಭೇಟಿ ನಿಡಿದ ಮಧು ಬಂಗಾರಪ್ಪ ಅವರು ಜನರ ಸಮಸ್ಯೆಗಳ ಅರಿತು ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
- ಧರ್ಮಪ್ಪ ಪೂಜಾರ್‌, ಕೃಷಿಕರು, ನೆಲ್ಲಿಕೊಪ್ಪ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ