ಆ್ಯಪ್ನಗರ

ಮಧು ಗೆಲ್ಲಿಸಲು ದಸಂಸ ಮನವಿ

ಬಿಜೆಪಿ ಮತ್ತು ಮೋದಿ ಜನದ್ರೋಹಿ ಆಡಳಿತ ಕೊನೆಗೊಳಿಸಲು ಹಾಗೂ ಸಂವಿಧಾನ ಉಳಿವಿಗಾಗಿ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲೇಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಡಾ.ಎಂ.ಬಿ. ಶ್ರೀನಿವಾಸ್‌ ಮನವಿ ಮಾಡಿದರು.

Vijaya Karnataka 21 Apr 2019, 5:00 am
ಶಿವಮೊಗ್ಗ: ಬಿಜೆಪಿ ಮತ್ತು ಮೋದಿ ಜನದ್ರೋಹಿ ಆಡಳಿತ ಕೊನೆಗೊಳಿಸಲು ಹಾಗೂ ಸಂವಿಧಾನ ಉಳಿವಿಗಾಗಿ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲೇಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಡಾ.ಎಂ.ಬಿ. ಶ್ರೀನಿವಾಸ್‌ ಮನವಿ ಮಾಡಿದರು.
Vijaya Karnataka Web madhu requested for support to win
ಮಧು ಗೆಲ್ಲಿಸಲು ದಸಂಸ ಮನವಿ


ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ಆಡಳಿತದಲ್ಲಿ ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಕ್ರೈಸ್ತರ ಮೇಲೆ ದೌರ್ಜನ್ಯ ಮಾಡಲಾಗಿದೆ. ಚುನಾವಣೆ ಮುನ್ನ ಮೋದಿ ನೀಡಿದ ಆಶ್ವಾಸನೆಗಳೆಲ್ಲಾ ಸುಳ್ಳಾಗಿವೆ. ಕಪ್ಪು ಹಣ ಬಂದಿಲ್ಲ, ಉದ್ಯೋಗವೂ ಸೃಷ್ಟಿಯಾಗಿಲ್ಲ. ಬಡವರ ಖಾತೆಗೆ 15 ಲಕ್ಷ ವೂ ಜಮಾ ಆಗಿಲ್ಲ ಎಂದು ಹೇಳಿದರು.

ಸೈನಿಕರನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದ್ದು, ನ್ಯಾಯಾಂಗ, ರಿಸರ್ವ್‌ ಬ್ಯಾಂಕ್‌, ಸಿಬಿಐ, ಮಾಹಿತಿ ಹಕ್ಕು ಕಾಯಿದೆ, ಚುನಾವಣಾ ಆಯೋಗ, ಕೇಂದ್ರ ಮಾಹಿತಿ ಆಯೋಗ ಮುಂತಾದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಸ್ವಾಯತ್ತತೆಯನ್ನು ಬಿಜೆಪಿ ಸರಕಾರ ಕಸಿದುಕೊಂಡಿದೆ. ಪ್ರಗತಿಪರರಾದ ಪತ್ರಕರ್ತೆ ಗೌರಿ ಲಂಕೇಶ್‌, ಎಂ.ಎಂ. ಕಲಬುರ್ಗಿ, ನರೇಂದ್ರ ದಾಬೋಲ್ಕರ್‌, ಗೋವಿಂದ ಪನ್ಸಾರೆ ಮುಂತಾದವರ ಜೀವ ತೆಗೆದಿದೆ ಎಂದು ಆರೋಪಿಸಿದರು.

ಎಂ.ವಿ. ಕೃಷ್ಣ, ಪರಶುರಾಮ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ