ಶಿವಮೊಗ್ಗ: ವೈದ್ಯ ವೃತ್ತಿಗೆ ಸಮಾಜದಲ್ಲಿ ಅತ್ಯುನ್ನತ ಗೌರವವಿದೆ. ವಿದ್ಯಾರ್ಥಿಗಳು ಇದನ್ನು ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಶ್ರದ್ಧೆ ವಹಿಸಿ ಅಭ್ಯಾಸ ಮಾಡಬೇಕೆಂದು ತಡಿಕೆಲ ಸುಬ್ಬಯ್ಯ ಟ್ರಸ್ಟ್ನ ಚೇರ್ಮನ್ ಟಿ.ಸುಬ್ಬರಾಮಯ್ಯ ಸಲಹೆ ನೀಡಿದರು.
ನಗರದ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಎಂಬಿಬಿಎಸ್ ವಿದ್ಯಾರ್ಥಿಗಳ ಒರಿಯಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಶಿಕ್ಷ ಣ ಎಂಬುದು ಅತ್ಯಂತ ಕ್ಲಿಷ್ಟ ಎನ್ನಲಾಗುತ್ತದೆ. ಆದರೆ ಶ್ರಮವಹಿಸಿ ಕಲಿತರೆ ಯಾವ ವಿಷಯವೂ ಕ್ಲಿಷ್ಟಕರವಲ್ಲ ಎಂದು ಹೇಳಿದರು.
ಪೋಷಕರು ತಮ್ಮ ಮಕ್ಕಳ ಮೇಲೆ ನೂರಾರು ಕನಸು ಇಟ್ಟುಕೊಂಡು ವೈದ್ಯಕೀಯ ಶಿಕ್ಷ ಣಕ್ಕೆ ಸೇರಿಸಿರುತ್ತಾರೆ. ಕಾಲೇಜು ಶಿಕ್ಷ ಣದ ಸಂದರ್ಭ ನೂರಾರು ಆಕರ್ಷಣೆಗಳು ಸೆಳೆಯುತ್ತವೆ. ಆದರೆ ಅವರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಹುಸಿಗೊಳಿಸದೇ ಓದಿನ ಕಡೆಗೆ ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.
ಕಾಲೇಜು ವೈದ್ಯಕೀಯ ನಿರ್ದೇಶಕ ಡಾ. ಎಸ್. ನಾಗೇಂದ್ರ ಮಾತನಾಡಿ, ಪೋಷಕರು ಪ್ರತಿ ಆರು ತಿಂಗಳಿಗೊಮ್ಮೆ ಮಕ್ಕಳ ಪ್ರಗತಿ ಪರಿಶೀಲನೆ ಮಾಡುತ್ತಿರಬೇಕೆಂದರು.
ಕಾಲೇಜು ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಲತಾ ನಾಗೇಂದ್ರ, ತಡಿಕೆಲ ಸುಬ್ಬಯ್ಯ ಟ್ರಸ್ಟ್ನ ಟ್ರಸ್ಟಿಗಳಾದ ಡಾ. ಎಸ್. ಶ್ರೀನಿವಾಸ್, ಡಾ. ಕೃಷ್ಣಪ್ರಸಾದ್, ಡಾ. ವಿನಯಾ ಶ್ರೀನಿವಾಸ್, ಡಾ.ಪುಷ್ಪಲತಾ ವಿಶ್ವನಾಥ್, ವಿಶ್ವನಾಥ್, ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಂ. ಕಟ್ಟಿ, ಉಪ ಪ್ರಾಂಶುಪಾಲ ಡಾ. ಸಿ.ಎಂ.ಸಿದ್ದಲಿಂಗಪ್ಪ, ಶೈಕ್ಷ ಣಿಕ ನಿರ್ದೇಶಕ ಡಾ. ಆರ್.ಪಿ. ಪೈ ಉಪಸ್ಥಿತರಿದ್ದರು.
ನಗರದ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಎಂಬಿಬಿಎಸ್ ವಿದ್ಯಾರ್ಥಿಗಳ ಒರಿಯಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಶಿಕ್ಷ ಣ ಎಂಬುದು ಅತ್ಯಂತ ಕ್ಲಿಷ್ಟ ಎನ್ನಲಾಗುತ್ತದೆ. ಆದರೆ ಶ್ರಮವಹಿಸಿ ಕಲಿತರೆ ಯಾವ ವಿಷಯವೂ ಕ್ಲಿಷ್ಟಕರವಲ್ಲ ಎಂದು ಹೇಳಿದರು.
ಪೋಷಕರು ತಮ್ಮ ಮಕ್ಕಳ ಮೇಲೆ ನೂರಾರು ಕನಸು ಇಟ್ಟುಕೊಂಡು ವೈದ್ಯಕೀಯ ಶಿಕ್ಷ ಣಕ್ಕೆ ಸೇರಿಸಿರುತ್ತಾರೆ. ಕಾಲೇಜು ಶಿಕ್ಷ ಣದ ಸಂದರ್ಭ ನೂರಾರು ಆಕರ್ಷಣೆಗಳು ಸೆಳೆಯುತ್ತವೆ. ಆದರೆ ಅವರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಹುಸಿಗೊಳಿಸದೇ ಓದಿನ ಕಡೆಗೆ ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.
ಕಾಲೇಜು ವೈದ್ಯಕೀಯ ನಿರ್ದೇಶಕ ಡಾ. ಎಸ್. ನಾಗೇಂದ್ರ ಮಾತನಾಡಿ, ಪೋಷಕರು ಪ್ರತಿ ಆರು ತಿಂಗಳಿಗೊಮ್ಮೆ ಮಕ್ಕಳ ಪ್ರಗತಿ ಪರಿಶೀಲನೆ ಮಾಡುತ್ತಿರಬೇಕೆಂದರು.
ಕಾಲೇಜು ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಲತಾ ನಾಗೇಂದ್ರ, ತಡಿಕೆಲ ಸುಬ್ಬಯ್ಯ ಟ್ರಸ್ಟ್ನ ಟ್ರಸ್ಟಿಗಳಾದ ಡಾ. ಎಸ್. ಶ್ರೀನಿವಾಸ್, ಡಾ. ಕೃಷ್ಣಪ್ರಸಾದ್, ಡಾ. ವಿನಯಾ ಶ್ರೀನಿವಾಸ್, ಡಾ.ಪುಷ್ಪಲತಾ ವಿಶ್ವನಾಥ್, ವಿಶ್ವನಾಥ್, ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಂ. ಕಟ್ಟಿ, ಉಪ ಪ್ರಾಂಶುಪಾಲ ಡಾ. ಸಿ.ಎಂ.ಸಿದ್ದಲಿಂಗಪ್ಪ, ಶೈಕ್ಷ ಣಿಕ ನಿರ್ದೇಶಕ ಡಾ. ಆರ್.ಪಿ. ಪೈ ಉಪಸ್ಥಿತರಿದ್ದರು.