ಆ್ಯಪ್ನಗರ

ಶಿಕ್ಷ ಣದ ಅರಿವು ಮಕ್ಕಳಿಗೆ ಮೂಡಿಸಿ: ಸ್ವಾಮೀಜಿ

ಶಿಕ್ಷಣದಿಂದ ಮಾತ್ರ ಅರಿವು ಸಾಧ್ಯ. ಇದನ್ನು ಮಕ್ಕಳಿಗೆ ಬಾಲ್ಯದಲ್ಲೇ ಮನದಟ್ಟು ಮಾಡಿಕೊಡಬೇಕೆಂದು ಶ್ರೀನಾರಾಯಣ ಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಹೇಳಿದರು.

Vijaya Karnataka 18 Jun 2019, 5:00 am
ರಿಪ್ಪನ್‌ಪೇಟೆ : ಶಿಕ್ಷಣದಿಂದ ಮಾತ್ರ ಅರಿವು ಸಾಧ್ಯ. ಇದನ್ನು ಮಕ್ಕಳಿಗೆ ಬಾಲ್ಯದಲ್ಲೇ ಮನದಟ್ಟು ಮಾಡಿಕೊಡಬೇಕೆಂದು ಶ್ರೀನಾರಾಯಣ ಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಹೇಳಿದರು.
Vijaya Karnataka Web SMR-17RPT3


ಸೋಮವಾರ ಬಿದರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಮಠದಿಂದ ಉಚಿತವಾಗಿ ನೋಟ್‌ ಬುಕ್‌, ಪೆನ್ನು ಇತರ ಪರಿಕರ ವಿತರಿಸಿ ಅವರು ಆಶೀರ್ವಚನ ನೀಡಿದರು.

ದೇವರು ಮನುಷ್ಯನಿಗೆ ಇಚ್ಛಾ ಶಕ್ತಿ, ಬುದ್ಧಿ ಶಕ್ತಿ, ಕ್ರಿಯಾ ಶಕ್ತಿ ನೀಡಿದ್ದಾನೆ. ಇದನ್ನು ಸದ್ಬಳಕೆ ಮಾಡಿಕೊಂಡು ಸಮಾಜ ಮುಖಿ ಕಾರ‍್ಯದಲ್ಲಿ ತೊಡಗಿದಾಗ ಸಮಾಜದ ಅಭಿವೃದ್ಧಿ ಸಾಧ್ಯ. ಸಮಾಜದ ಅಭಿವೃದ್ದಿಯಲ್ಲಿ ಶಿಕ್ಷ ಣ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಲ್ಲಿರುವ ಸುಪ್ತವಾಗಿರುವ ಪ್ರತಿಭೆ ಹೊರ ತರಲು ಶಿಕ್ಷ ಕರು ಹಾಗೂ ಪೋಷಕರು ಮುಂದಾಗಬೇಕು. ಶಿಕ್ಷ ಣ ಪಡೆದವರು ಸಮಾಜಮುಖಿ ಕಾರ‍್ಯಗಳಲ್ಲಿ ತೊಡಗಿಕೊಳ್ಳಬೇಕೆಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ವೇತಾ.ಆರ್‌. ಬಂಡಿ ಮಾತನಾಡಿ, ಮಕ್ಕಳ ಶೈಕ್ಷ ಣಿಕ ಅಭಿವೃದ್ಧಿಗಾಗಿ ಸರಕಾರ ಅನೇಕ ಯೋಜನೆ ಅನುಷ್ಠಾನಗೊಳಿಸಿದೆ. ಶ್ರೀನಾರಾಯಣ ಗುರುಗಳು ಶಿಕ್ಷ ಣಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ದಕ್ಷಿಣ ಭಾರತದಲ್ಲಿ ಶೈಕ್ಷ ಣಿಕ ಕ್ರಾಂತಿ ಉಂಟು ಮಾಡಿದರು ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಸದಸ್ಯ ಬಂಡಿ ರಾಮಚಂದ್ರ. ಬಿ.ಎಸ್‌.ನಾಗೇಶ್‌, ಮಹೇಶ ಬಂಡಿ, ಕೆರೆಮನೆ ರಮೇಶ್‌, ಮಹೇಂದ್ರ, ಮುಖ್ಯ ಶಿಕ್ಷ ಕ ದೇವೇಂದ್ರಪ್ಪ,

ಶ್ರೀಮಠದ ವಕ್ತಾರ ಮಹೇಂದ್ರ ಇತರರಿದ್ದರು. ಶಿಕ್ಷ ಕರಾದ ಮಧುಕರ ಸ್ವಾಗತಿಸಿ. ದಿನೇಶ್‌ ನಿರೂಪಿಸಿ, ಎಸ್‌.ಆರ್‌. ಸೌಮ್ಯ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ