ಆ್ಯಪ್ನಗರ

ಜೀವಜಲ ಉಳಿವಿಗೆ ಪಣ ತೊಡಿ

ಸ್ವಾರ್ಥಕ್ಕೆ ಪರಿಸರ ಹಾಳು ಮಾಡುತ್ತಿದ್ದಾರೆ. ಇದರ ದುಷ್ಪರಿಣಾಮ ಅವರಿಗೆ ಆಗುವುದರ ಜತೆಗೆ ಇತರರಿಗೂ ತೊಂದರೆ ಆಗುತ್ತದೆ ಎಂದು ಇಲ್ಲಿನ ಸರಕಾರಿ ಪಿಯು ಕಾಲೇಜು ಪ್ರೌಢಶಾಲೆ ವಿಭಾಗದ ಉಪಪ್ರಾಚಾರ‍್ಯ ಕೆ.ತಿಪ್ಪೇಶ್‌ನಾಯ್ಕ್‌ ಹೇಳಿದರು.

Vijaya Karnataka 28 Jul 2019, 5:00 am
ಹೊಳೆಹೊನ್ನೂರು: ಸ್ವಾರ್ಥಕ್ಕೆ ಪರಿಸರ ಹಾಳು ಮಾಡುತ್ತಿದ್ದಾರೆ. ಇದರ ದುಷ್ಪರಿಣಾಮ ಅವರಿಗೆ ಆಗುವುದರ ಜತೆಗೆ ಇತರರಿಗೂ ತೊಂದರೆ ಆಗುತ್ತದೆ ಎಂದು ಇಲ್ಲಿನ ಸರಕಾರಿ ಪಿಯು ಕಾಲೇಜು ಪ್ರೌಢಶಾಲೆ ವಿಭಾಗದ ಉಪಪ್ರಾಚಾರ‍್ಯ ಕೆ.ತಿಪ್ಪೇಶ್‌ನಾಯ್ಕ್‌ ಹೇಳಿದರು.
Vijaya Karnataka Web SMR-27HHR1


ಪಟ್ಟಣದ ಸರಕಾರಿ ಪಿಯು ಕಾಲೇಜು ಪ್ರೌಢಶಾಲೆಯಲ್ಲಿ ಶಿವಮೊಗ್ಗದ ಕೀರ್ತನ ಭಾರತಿ ಕಲಾ ತಂಡವು ಶಾಲೆಯ ಮಕ್ಕಳ ಹಕ್ಕುಗಳ ಕ್ಲಬ್‌ ಹಾಗೂ ಭದ್ರಾ ಇಕೋ ಕ್ಲಬ್‌ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪರಿಸರ ಜಾಗೃತಿ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಸರ ಸಂರಕ್ಷಿಸುವುದು ಮೂಲಭೂತ ಕರ್ತವ್ಯ ಎಂದು ಭಾವಿಸಿ ನಿಭಾಯಿಸಬೇಕು. ಪರಿಸರ ಅಂದವಾಗಿದ್ದರೆ ನಮ್ಮ ಜೀವನವು ಸುಂದರವಾಗಿರುತ್ತದೆ. ನಾವು ಗತಕಾಲ ನೆನೆದು ಭವಿಷ್ಯದ ಕಾಳಜಿ ಹೊಂದಿ ನಮ್ಮ ಸುತ್ತಲ ಪರಿಸರ ಕಾಪಾಡಬೇಕು. ಈ ವರ್ಷ ಮಳೆ ಪ್ರಮಾಣ ತೀವ್ರ ಇಳಿಕೆಯಾಗಿದೆ. ಅಂತರ್‌ ಜಲ ಕ್ಷೀಣಿಸುತ್ತಿದೆ. ಮಳೆ ಇಲ್ಲದೇ ಯಾವುದೇ ಬೆಳೆ ಬೆಳೆಯಲು ಸಾಧ್ಯವಿಲ್ಲ. ಇದರಿಂದ ಸಾಮಾನ್ಯ ಜೀವನ ಅಸ್ತವ್ಯಸ್ಥ ಆಗುತ್ತದೆ. ನೀರಿಲ್ಲದ ಕ್ಷ ಣ ಊಹಿಸಿಕೊಂಡರೆ ನೀರಿನ ಮಹತ್ವ ಅರಿಯುತ್ತದೆ. ಇದಕ್ಕೆಲ್ಲಾ ಏಕೈಕ ಹಾಗೂ ಸುಲಭ ಮಾರ್ಗ ಎಂದರೆ ಗಿಡ ನೆಟ್ಟು ಪೋಷಿಸುವುದು ಹಾಗೂ ಜೀವ ಜಲ ಉಳಿಸುವುದು ಎಂದರು.

ಕೀರ್ತನ ಕಲಾ ತಂಡವು ಹಾಡು ಹಾಗೂ ಅಭಿನಯದ ಮೂಲಕ ಪರಿಸರದ ಸ್ವಚ್ಛತೆ ಕುರಿತು ಅರಿವು ಮೂಡಿಸಿದರು. ಕೀರ್ತನ ಕಲಾ ತಂಡದ ಮುಖ್ಯಸ್ಥ ಜಿ.ಎಂ.ಸುನೀಲ್‌, ಷಣ್ಮುಖಪ್ಪ, ತಮಟೆ ಜಗದೀಶ್‌, ಚನ್ನೇಶ್‌, ಸಹಶಿಕ್ಷ ಕ ಬಿ.ಪಿ.ನಾಗರಾಜಪ್ಪ, ಎನ್‌.ಮಂಜಪ್ಪ, ಭಾರತಿ ಕೇಶವಭಟ್‌, ಆರ್‌.ನಾಗಭೂಷಣ್‌, ಮಮತ, ಲಕ್ಷ್ಮೀ, ಶಫಿನಾಜ್‌ ಬಾನು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ