ಆ್ಯಪ್ನಗರ

ಸಾಲ ಮರುಪಾವತಿಸಲು ಮಾಮ್ಕೋಸ್‌ ಮನವಿ

ಅಡಕೆಯಲ್ಲಿ ಔಷಧೀಯ ಗುಣ ಇದೆ ಎನ್ನುವ ಕುರಿತ ವರದಿಯನ್ನು ಮಾಮ್ಕೋಸ್‌ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಒಕ್ಕೂಟದ ಮೂಲಕ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಮಾಮ್ಕೋಸ್‌ ಉಪಾಧ್ಯಕ್ಷ ವೈ.ಎಸ್‌. ಸುಬ್ರಹ್ಮಣ್ಯ ಹೇಳಿದರು.

Vijaya Karnataka 1 Aug 2018, 5:00 am
ಸಾಗರ: ಅಡಕೆಯಲ್ಲಿ ಔಷಧೀಯ ಗುಣ ಇದೆ ಎನ್ನುವ ಕುರಿತ ವರದಿಯನ್ನು ಮಾಮ್ಕೋಸ್‌ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಒಕ್ಕೂಟದ ಮೂಲಕ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಮಾಮ್ಕೋಸ್‌ ಉಪಾಧ್ಯಕ್ಷ ವೈ.ಎಸ್‌. ಸುಬ್ರಹ್ಮಣ್ಯ ಹೇಳಿದರು.
Vijaya Karnataka Web mamkos request to repay the loan
ಸಾಲ ಮರುಪಾವತಿಸಲು ಮಾಮ್ಕೋಸ್‌ ಮನವಿ


ನಗರದ ಬ್ರಾಸಂ ಸಭಾಭವನದಲ್ಲಿ ಮಂಗಳವಾರ ಮಾಮ್ಕೋಸ್‌ ಹಮ್ಮಿಕೊಂಡಿದ್ದ ಷೇರುದಾರರ ಸಮಾಲೋಚನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಕೇಂದ್ರ ಸರಕಾರದ ಸಚಿವರು ಅಡಕೆ ಹಾನಿಕಾರಕ ಎಂಬ ಹೇಳಿಕೆ ನೀಡಿದ್ದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಲಾಗಿದೆ. ಜತೆಗೆ ಬಿ.ಎಸ್‌.ಯಡಿಯೂರಪ್ಪ, ಅನಂತಕುಮಾರ್‌, ಅನಂತಕುಮಾರ್‌ ಹೆಗಡೆ, ಸದಾನಂದ ಗೌಡ ಸೇರಿದಂತೆ ರಾಜ್ಯದ ಎಲ್ಲ ಸಂಸದರ ಜತೆ ಕೇಂದ್ರ ಕೃಷಿ, ಆರೋಗ್ಯ ಸಚಿವರನ್ನು ಭೇಟಿ ಮಾಡಿ, ಅಡಕೆ ವಿಷಕಾರಕ ಎಂಬ ವರದಿ ತೆಗೆದು ಹಾಕುವಂತೆ ಮನವಿ ಸಲ್ಲಿಸಲಾಗಿದೆ ಎಂದರು.

ಕಳೆದ ಆರ್ಥಿಕ ವರ್ಷದಲ್ಲಿ ಮಾಮ್ಕೋಸ್‌ ಷೇರುದಾರರಿಗೆ 169 ಕೋಟಿ ರೂ. ಸಾಲ ನೀಡಲಾಗಿದೆ. ಸಾಲ ವಸೂಲಾತಿ ಪ್ರಮಾಣ ಕಡಿಮೆ ಇದೆ. ಕೆಲವರು ರೈತರ ಸಾಲವನ್ನು ರಾಜ್ಯ ಸರಕಾರ ಮನ್ನಾ ಮಾಡಿದ್ದರಿಂದ ತಮಗೆ ಅದರ ನೆರವು ಸಿಗುತ್ತದೆ ಎಂದು ಭಾವಿಸಿದ್ದಾರೆ. ಮಾಮ್ಕೋಸ್‌ ಮಾರಾಟ ಸಂಸ್ಥೆಯಾಗಿರುವುದರಿಂದ ಸರಕಾರದ ಯಾವುದೇ ಸಾಲಮನ್ನಾ ಯೋಜನೆ ನಮಗೆ ಅನ್ವಯಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಪುನರ್‌ ಪಾವತಿಸಿ ಸಂಸ್ಥೆ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಶಾಸಕ ಎಚ್‌.ಹಾಲಪ್ಪ, ವ.ಶಂ.ರಾಮಚಂದ್ರ, ಚೆನ್ನಬಸಪ್ಪ ಗೌಡ ಕಲ್ಯಾಣಪುರ, ಪ್ರಭಾಕರ ಮತ್ತಿತರರು ಮಾತನಾಡಿದರು.

ಮಾಮ್ಕೋಸ್‌ ನಿರ್ದೇಶಕರಾದ ಜಯಶ್ರೀ, ಮಾತಾಂಡ, ವಿರೂಪಾಕ್ಷ ಪ್ಪ, ವೆಂಕಪ್ಪ ಗೌಡ, ಚಂದ್ರಶೇಖರ್‌, ಶಶಿಧರ್‌ ಹರತಾಳು, ಸೋಮಶೇಖರ ಇರುವಕ್ಕಿ, ಬಡಿಯಣ್ಣ, ನಾಗೇಶ್‌ ರಾವ್‌, ಭೀಮರಾವ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ