ಶಿವಮೊಗ್ಗ: ಪ್ರಾಣಿಗಳ ಆವಾಸ ಸ್ಥಾನದ ಮೇಲೆ ಅಧಿಪತ್ಯ ಸಾಧಿಸುವ ಪ್ರಕ್ರಿಯೆಯಲ್ಲಿ ಕೆಎಫ್ಡಿಯಂತಹ ಅರಣ್ಯ ಸಂಬಂಧಿ ಕಾಯಿಲೆಗಳನ್ನು ಆಹ್ವಾನಿಸಿದ್ದೇವೆ. ಅದರ ಫಲವನ್ನೀಗ ಮಾನವಕುಲ ಎದುರಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಜೀವವೈವಿಧ್ಯ ಮಂಡಳಿಯ ದಕ್ಷಿಣ ಮತ್ತು ಮಧ್ಯ ಏಷಿಯಾದ ಪ್ರಾದೇಶಿಕ ಪ್ರತಿನಿಧಿ ಡಾ.ಎನ್.ಕೆ. ಕೃಷ್ಣ ಕುಮಾರ್ ಪ್ರತಿಪಾದಿಸಿದರು.
ಇಲ್ಲಿನ ನವುಲೆಯಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ 'ಭವಿಷ್ಯಕ್ಕಾಗಿ ಜೀವ ವೈವಿಧ್ಯತೆ ಮತ್ತು ಸಸ್ಯ ಸಂಪನ್ಮೂಲಗಳ ಸಂರಕ್ಷಣೆ' ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಸಂಶೋಧನಾ ಅಬ್ಸ್ಟ್ಯಾಕ್ಟ್ಗಳನ್ನು ಬಿಡುಗಡೆಗೊಳಿಸಿ ಪ್ರಧಾನ ಭಾಷಣ ಮಾಡಿದ ಅವರು, ಅಭಿವೃದ್ಧಿಯನ್ನು ಮನುಷ್ಯ ಕೇಂದ್ರಿತವಾಗಿ ನೋಡಲಾಗುತ್ತಿದೆಯೇ ವಿನಹ ಪ್ರಕೃತಿಯಲ್ಲಿರುವ ಜೀವವೈವಿಧ್ಯಗಳ ಬಗ್ಗೆ ಯೋಚಿಸಲಾಗುತ್ತಿಲ್ಲ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಗಂಭೀರ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಮಲೆನಾಡು ಪ್ರದೇಶಗಳಲ್ಲಿ ಕಾಡು ಪ್ರಾಣಿ ಹಾಗೂ ಮನುಷ್ಯರ ನಡುವೆ ಸಂಘರ್ಷ ಏರ್ಪಡುತ್ತಿದೆ. ಇದಕ್ಕೆ ಕಾರಣ ಪ್ರಾಣಿಗಳಲ್ಲ. ಆನೆ ಎಂದೂ ತನ್ನ ಕಾರಿಡಾರ್ ಬಿಟ್ಟು ಬೇರೆಡೆ ಬರುವುದಿಲ್ಲ. ಅದರ ಮಾರ್ಗ ಮಧ್ಯೆ ಮನುಷ್ಯ ಕುಳಿತುಕೊಂಡು ಪ್ರಾಣಿಗಳ ದಾಳಿ ಎಂದು ಹೇಳುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.
ಕೃಷಿಯಲ್ಲಿ ಎಣಿಕೆಗೆ ಸಿಗದಷ್ಟು ಜೀವವೈವಿಧ್ಯಗಳಿವೆ. ಅವುಗಳನ್ನು ಇದುವರೆಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಎಲ್ಲ ಉದ್ದಿಮೆಗಳಿಗೂ ಕೃಷಿಯೇ ಕೇಂದ್ರವಾಗಿದ್ದರೂ ಇದನ್ನೇ ನಿರ್ಲಕ್ಷಿಸಲಾಗುತ್ತಿದೆ. ಪ್ರದೇಶಕ್ಕೆ ಅನುಗುಣವಾಗಿ ಮಾರುಕಟ್ಟೆ, ಆಹಾರ ಪದಾರ್ಥ ಬೆಳೆಯುವುದರಲ್ಲಿ ವ್ಯತ್ಯಾಸಗಳಿವೆ. ಇದು ಸಹ ಜೀವವೈವಿಧ್ಯತೆಯೇ ಆಗಿದೆ ಎಂದರು.
ಜೀವವೈವಿಧ್ಯವೆಂದರೆ ಹುಲಿ, ಸಿಂಹ ಸಂರಕ್ಷಣೆಯಷ್ಟೇ ಅಲ್ಲ:
ಜೀವ ವೈವಿಧ್ಯತೆಯಲ್ಲಿ ಲಕ್ಷಾಂತರ ಜೀವಿಗಳಿವೆ. ಕಣ್ಣಿಗೆ ಕಾಣುವ ಬಲಾಢ್ಯ ಪ್ರಾಣಿಗಳಾದ ಹುಲಿ, ಸಿಂಹ ಮತ್ತಿತರ ಜೀವಿಗಳ ಜತೆಗೆ ನಿಸರ್ಗದಲ್ಲಿರುವ ಇರುವೆ, ಚಿಟ್ಟೆ, ಜೇನುನೊಣ, ಸೂಕ್ಷ್ಮಾಣುಜೀವಿಗಳನ್ನೂ ಸಂರಕ್ಷಿಸಬೇಕು. ಇಲ್ಲವಾದರೆ ಇಡೀ ಪ್ರಕೃತಿಯೇ ಇಲ್ಲವಾಗುವ ಸಾಧ್ಯತೆಯೂ ಇದೆ. ಈ ಅಂಶಗಳ ಕುರಿತು ಪಾಲಿಸಿ ಮೇಕರ್ಗಳಿಗೆ ತಿಳಿಹೇಳಬೇಕೆಂದರು. ದೇಶದಲ್ಲಿರುವ ಆಯಾ ರಾಜ್ಯಗಳಿಗೆ ಪ್ರತ್ಯೇಕ ಜೀವವೈವಿಧ್ಯತೆ ಇದೆ. ಎಲ್ಲರೂ ಒಂದಾಗಿ ಸಂರಕ್ಷಿಸಲು ಮುಂದಾದರೆ ಭವಿಷ್ಯದಲ್ಲಿ ಪರಿವರ್ತನೆ ಕಾಣಸಿಗಲು ಸಾಧ್ಯ ಎಂದರು.
ಹೊಟ್ಟೆ ತುಂಬಿಸುವುದಷ್ಟೇ ಆಹಾರ ಭದ್ರತೆಯಲ್ಲ:
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶಗಳ ಪ್ರಾಧಿಕಾರದ ಮುಖ್ಯ ನಿರ್ವಹಣಾ ಅಧಿಕಾರಿ ಡಾ.ಅಶೋಕ್ ದಳವಾಯಿ, ಭಾರತದಲ್ಲಿ ಜನಸಂಖ್ಯೆ ಹೆಚ್ಚಿದಂತೆ ಉತ್ಪಾದನೆ ಪ್ರಮಾಣವೂ ಹೆಚ್ಚಿದೆ. ಈಗ ಹೊರದೇಶಗಳಿಗೂ ಆಹಾರ ಪದಾರ್ಥ ರಫ್ತು ಮಾಡುವಷ್ಟು ಭಾರತ ಸಮರ್ಥವಾಗಿದೆ. ಆದರೆ, ಈ ಆಹಾರ ಭದ್ರತೆಯ ಭರಾಟೆಯಲ್ಲಿ ಪೌಷ್ಟಿಕತೆಯನ್ನು ಪೂರ್ಣ ಪ್ರಮಾಣದಲ್ಲಿ ಮರೆಯಲಾಗಿದೆ ಎಂದು ತಿಳಿಸಿದರು.
ಪೌಷ್ಟಿಕಾಂಶಯುಕ್ತ ಆಹಾರ ಸಿಗದೇ ಹಲವು ರೋಗಗಳಿಗೆ ತುತ್ತಾಗುವ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ, ಪೌಷ್ಟಿಕತೆಗೂ ಸಮಾನ ಆದ್ಯತೆ ನೀಡಬೇಕಾಗಿದೆ. ಈ ಬಗ್ಗೆ ಚರ್ಚೆ ನಡೆಯಬೇಕಾದ ಅಗತ್ಯವಿದೆ. ಭಾರತೀಯ ಕೃಷಿ ವ್ಯವಸ್ಥೆಯಲ್ಲಿ ವೈವಿಧ್ಯತೆಯನ್ನೂ ಮರೆಯಲಾಗಿದೆ. ಹಲವು ತಳಿಗಳಿಂದು ಕಾಣಸಿಗದಂತಾಗಿದೆ. ಅವುಗಳ ಸಂರಕ್ಷಣೆ ಕಾರ್ಯವೂ ನಡೆದಿದೆ. ಇದರೊಂದಿಗೆ ಕೃಷಿಕರು ಏಕಬೆಳೆಗಿಂತ ಬಹು ಬೆಳೆ ಪದ್ಧತಿಯೆಡೆಗೆ ಗಮನಹರಿಸಬೇಕಾಗಿದೆ. ಇದು ಭೂಮಿ ಫಲವತ್ತತೆಯೊಂದಿಗೆ ಆರ್ಥಿಕ ಸುಭದ್ರತೆಗೂ ಸಹಕಾರಿಯಾಗಲಿದೆ ಎಂದರು.
ಸಮ್ಮೇಳನದಲ್ಲಿ ಕೈಗೊಂಡ ನಿರ್ಧಾರಗಳನ್ನು ಸರಕಾರಕ್ಕೆ ಶಿಫಾರಸು ರೂಪದಲ್ಲಿ ಮಂಡನೆ ಮಾಡುವಾಗ ಅದು ಸರಳ, ಪ್ರಾಯೋಗಿಕವಾಗಿ ಕಾರ್ಯಗತ ಮಾಡಲು ಸಾಧ್ಯವಾಗಬಹುದಾದ ಮತ್ತು ಸ್ಪಷ್ಟತೆಯಿಂದ ಕೂಡಿರಬೇಕು. ಆಗ ಶಿಫಾರಸುಗಳು ಶಾಸನಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ಸಲಹೆ ನೀಡಿದರು.
ವಿವಿ ಕುಲಪತಿ ಡಾ.ಎಂ.ಕೆ. ನಾಯ್ಕ ಮಾತನಾಡಿ, ಪೌಷ್ಟಿಕಾಂಶಯುಕ್ತ ಆಹಾರ ಸಿಗುತ್ತಿಲ್ಲ. ಹೆಣ್ಣು ಮಕ್ಕಳಲ್ಲಿ ರಕ್ತಹೀನತೆಯಂತಹ ಸಮಸ್ಯೆ ಎದುರಾಗಿದೆ. ಜೀವ ವೈವಿಧ್ಯತೆ ಮತ್ತು ಸಸ್ಯ ಸಂಪನ್ಮೂಲ ಆಹಾರ ಸುಸ್ಥಿರತೆಗೆ ಕೊಂಡಿಯಂತಿದ್ದು, ವೇಗವಾಗಿ ಬದಲಾಗುತ್ತಿರುವ ಕೃಷಿ ಪದ್ಧತಿಗಳಿಗೆ ಅನುಗುಣವಾಗಿ ಸಸ್ಯ ಸಂಪತ್ತು ಸಂರಕ್ಷಿಸುವ ಬಹುದೊಡ್ಡ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಭೂಮಿಯ ಫಲವತ್ತತೆ ಕಾಪಾಡುವ ಕೆಲಸವಾಗಬೇಕೆಂದರು.
ರಾಷ್ಟ್ರೀಯ ಸಸ್ಯ ಸಂಪನ್ಮೂಲಗಳ ಸಂರಕ್ಷಣಾ ಸಂಸ್ಥೆ ಪ್ರಧಾನ ವಿಜ್ಞಾನಿ ಡಾ. ಸುನೀಲ್ ಅರ್ಚಕ್, ಪಾಂಡಿಚೇರಿ ಕೃಷಿ ವಿವಿಯ ಡಾ.ಎಸ್. ತಿರುಮೇಣಿ, ಪ್ರಾಧ್ಯಾಪಕ
ಡಾ. ನಿರಂಜನಮೂರ್ತಿ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ ಅವರು ಮುಖ್ಯ ವೈಜ್ಞಾನಿಕ ವಿಷಯ ಮಂಡಿಸಿದರು. ಕರ್ನಾಟಕ, ತಮಿಳುನಾಡು, ಕೇರಳ, ದಿಲ್ಲಿ, ಮಣಿಪುರ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಪಾಂಡಿಚೇರಿ ಸೇರಿ ನಾನಾ ರಾಜ್ಯಗಳಿಂದ 150ಕ್ಕೂ ಅಧಿಕ ವಿಜ್ಞಾನಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 100 ಸಂಶೋಧನಾ ಭಿತ್ತಿಪತ್ರಗಳ ಮಂಡನೆ, 35 ಸಂಶೋಧನಾ ಲೇಖನಗಳನ್ನು ಮಂಡಿಸಲಾಯಿತು.
=============
ಅರ್ಥ ಮಾಡಿಕೊಳ್ಳದೇ ಹಸ್ತಕ್ಷೇಪ ಬೇಡ:
ಜೀವವೈವಿಧ್ಯಕ್ಕೆ ಕೈಹಾಕುವ ಮುನ್ನ ಮನುಷ್ಯ ಅದರಲ್ಲಿರುವ ಸೂಕ್ಷ್ಮತೆ ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ವ್ಯತಿರಿಕ್ತ ಪರಿಣಾಮಗಳಾಗುವ ಸಾಧ್ಯತೆಯೂ ಇರುತ್ತದೆ. ಇದರ ಫಲವಾಗಿಯೇ ಇಂದು ಹವಾಮಾನ ವೈಪರೀತ್ಯದೊಂದಿಗೆ ಜೀವವೈವಿಧ್ಯಗಳು ಸಂಕಷ್ಟಕ್ಕೆ ಸಿಲುಕಿವೆ. ಆರೇಳು ದಶಕಗಳ ಹಿಂದೆ ಮಲೆನಾಡಿನಲ್ಲಿ ದಟ್ಟ ಅರಣ್ಯವಿತ್ತು. ಆದರೀಗ ಅರಣ್ಯ ಕ್ಷೀಣಿಸಿದ್ದು, ಬರುವ ದಿನಗಳಲ್ಲಾದರೂ ಸಂರಕ್ಷಿಸುವ ಕೆಲಸವಾಗಬೇಕು.
-ಡಾ.ಅಶೋಕ್ ದಳವಾಯಿ
ಇಲ್ಲಿನ ನವುಲೆಯಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ 'ಭವಿಷ್ಯಕ್ಕಾಗಿ ಜೀವ ವೈವಿಧ್ಯತೆ ಮತ್ತು ಸಸ್ಯ ಸಂಪನ್ಮೂಲಗಳ ಸಂರಕ್ಷಣೆ' ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಸಂಶೋಧನಾ ಅಬ್ಸ್ಟ್ಯಾಕ್ಟ್ಗಳನ್ನು ಬಿಡುಗಡೆಗೊಳಿಸಿ ಪ್ರಧಾನ ಭಾಷಣ ಮಾಡಿದ ಅವರು, ಅಭಿವೃದ್ಧಿಯನ್ನು ಮನುಷ್ಯ ಕೇಂದ್ರಿತವಾಗಿ ನೋಡಲಾಗುತ್ತಿದೆಯೇ ವಿನಹ ಪ್ರಕೃತಿಯಲ್ಲಿರುವ ಜೀವವೈವಿಧ್ಯಗಳ ಬಗ್ಗೆ ಯೋಚಿಸಲಾಗುತ್ತಿಲ್ಲ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಗಂಭೀರ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಮಲೆನಾಡು ಪ್ರದೇಶಗಳಲ್ಲಿ ಕಾಡು ಪ್ರಾಣಿ ಹಾಗೂ ಮನುಷ್ಯರ ನಡುವೆ ಸಂಘರ್ಷ ಏರ್ಪಡುತ್ತಿದೆ. ಇದಕ್ಕೆ ಕಾರಣ ಪ್ರಾಣಿಗಳಲ್ಲ. ಆನೆ ಎಂದೂ ತನ್ನ ಕಾರಿಡಾರ್ ಬಿಟ್ಟು ಬೇರೆಡೆ ಬರುವುದಿಲ್ಲ. ಅದರ ಮಾರ್ಗ ಮಧ್ಯೆ ಮನುಷ್ಯ ಕುಳಿತುಕೊಂಡು ಪ್ರಾಣಿಗಳ ದಾಳಿ ಎಂದು ಹೇಳುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.
ಕೃಷಿಯಲ್ಲಿ ಎಣಿಕೆಗೆ ಸಿಗದಷ್ಟು ಜೀವವೈವಿಧ್ಯಗಳಿವೆ. ಅವುಗಳನ್ನು ಇದುವರೆಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಎಲ್ಲ ಉದ್ದಿಮೆಗಳಿಗೂ ಕೃಷಿಯೇ ಕೇಂದ್ರವಾಗಿದ್ದರೂ ಇದನ್ನೇ ನಿರ್ಲಕ್ಷಿಸಲಾಗುತ್ತಿದೆ. ಪ್ರದೇಶಕ್ಕೆ ಅನುಗುಣವಾಗಿ ಮಾರುಕಟ್ಟೆ, ಆಹಾರ ಪದಾರ್ಥ ಬೆಳೆಯುವುದರಲ್ಲಿ ವ್ಯತ್ಯಾಸಗಳಿವೆ. ಇದು ಸಹ ಜೀವವೈವಿಧ್ಯತೆಯೇ ಆಗಿದೆ ಎಂದರು.
ಜೀವವೈವಿಧ್ಯವೆಂದರೆ ಹುಲಿ, ಸಿಂಹ ಸಂರಕ್ಷಣೆಯಷ್ಟೇ ಅಲ್ಲ:
ಜೀವ ವೈವಿಧ್ಯತೆಯಲ್ಲಿ ಲಕ್ಷಾಂತರ ಜೀವಿಗಳಿವೆ. ಕಣ್ಣಿಗೆ ಕಾಣುವ ಬಲಾಢ್ಯ ಪ್ರಾಣಿಗಳಾದ ಹುಲಿ, ಸಿಂಹ ಮತ್ತಿತರ ಜೀವಿಗಳ ಜತೆಗೆ ನಿಸರ್ಗದಲ್ಲಿರುವ ಇರುವೆ, ಚಿಟ್ಟೆ, ಜೇನುನೊಣ, ಸೂಕ್ಷ್ಮಾಣುಜೀವಿಗಳನ್ನೂ ಸಂರಕ್ಷಿಸಬೇಕು. ಇಲ್ಲವಾದರೆ ಇಡೀ ಪ್ರಕೃತಿಯೇ ಇಲ್ಲವಾಗುವ ಸಾಧ್ಯತೆಯೂ ಇದೆ. ಈ ಅಂಶಗಳ ಕುರಿತು ಪಾಲಿಸಿ ಮೇಕರ್ಗಳಿಗೆ ತಿಳಿಹೇಳಬೇಕೆಂದರು. ದೇಶದಲ್ಲಿರುವ ಆಯಾ ರಾಜ್ಯಗಳಿಗೆ ಪ್ರತ್ಯೇಕ ಜೀವವೈವಿಧ್ಯತೆ ಇದೆ. ಎಲ್ಲರೂ ಒಂದಾಗಿ ಸಂರಕ್ಷಿಸಲು ಮುಂದಾದರೆ ಭವಿಷ್ಯದಲ್ಲಿ ಪರಿವರ್ತನೆ ಕಾಣಸಿಗಲು ಸಾಧ್ಯ ಎಂದರು.
ಹೊಟ್ಟೆ ತುಂಬಿಸುವುದಷ್ಟೇ ಆಹಾರ ಭದ್ರತೆಯಲ್ಲ:
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶಗಳ ಪ್ರಾಧಿಕಾರದ ಮುಖ್ಯ ನಿರ್ವಹಣಾ ಅಧಿಕಾರಿ ಡಾ.ಅಶೋಕ್ ದಳವಾಯಿ, ಭಾರತದಲ್ಲಿ ಜನಸಂಖ್ಯೆ ಹೆಚ್ಚಿದಂತೆ ಉತ್ಪಾದನೆ ಪ್ರಮಾಣವೂ ಹೆಚ್ಚಿದೆ. ಈಗ ಹೊರದೇಶಗಳಿಗೂ ಆಹಾರ ಪದಾರ್ಥ ರಫ್ತು ಮಾಡುವಷ್ಟು ಭಾರತ ಸಮರ್ಥವಾಗಿದೆ. ಆದರೆ, ಈ ಆಹಾರ ಭದ್ರತೆಯ ಭರಾಟೆಯಲ್ಲಿ ಪೌಷ್ಟಿಕತೆಯನ್ನು ಪೂರ್ಣ ಪ್ರಮಾಣದಲ್ಲಿ ಮರೆಯಲಾಗಿದೆ ಎಂದು ತಿಳಿಸಿದರು.
ಪೌಷ್ಟಿಕಾಂಶಯುಕ್ತ ಆಹಾರ ಸಿಗದೇ ಹಲವು ರೋಗಗಳಿಗೆ ತುತ್ತಾಗುವ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ, ಪೌಷ್ಟಿಕತೆಗೂ ಸಮಾನ ಆದ್ಯತೆ ನೀಡಬೇಕಾಗಿದೆ. ಈ ಬಗ್ಗೆ ಚರ್ಚೆ ನಡೆಯಬೇಕಾದ ಅಗತ್ಯವಿದೆ. ಭಾರತೀಯ ಕೃಷಿ ವ್ಯವಸ್ಥೆಯಲ್ಲಿ ವೈವಿಧ್ಯತೆಯನ್ನೂ ಮರೆಯಲಾಗಿದೆ. ಹಲವು ತಳಿಗಳಿಂದು ಕಾಣಸಿಗದಂತಾಗಿದೆ. ಅವುಗಳ ಸಂರಕ್ಷಣೆ ಕಾರ್ಯವೂ ನಡೆದಿದೆ. ಇದರೊಂದಿಗೆ ಕೃಷಿಕರು ಏಕಬೆಳೆಗಿಂತ ಬಹು ಬೆಳೆ ಪದ್ಧತಿಯೆಡೆಗೆ ಗಮನಹರಿಸಬೇಕಾಗಿದೆ. ಇದು ಭೂಮಿ ಫಲವತ್ತತೆಯೊಂದಿಗೆ ಆರ್ಥಿಕ ಸುಭದ್ರತೆಗೂ ಸಹಕಾರಿಯಾಗಲಿದೆ ಎಂದರು.
ಸಮ್ಮೇಳನದಲ್ಲಿ ಕೈಗೊಂಡ ನಿರ್ಧಾರಗಳನ್ನು ಸರಕಾರಕ್ಕೆ ಶಿಫಾರಸು ರೂಪದಲ್ಲಿ ಮಂಡನೆ ಮಾಡುವಾಗ ಅದು ಸರಳ, ಪ್ರಾಯೋಗಿಕವಾಗಿ ಕಾರ್ಯಗತ ಮಾಡಲು ಸಾಧ್ಯವಾಗಬಹುದಾದ ಮತ್ತು ಸ್ಪಷ್ಟತೆಯಿಂದ ಕೂಡಿರಬೇಕು. ಆಗ ಶಿಫಾರಸುಗಳು ಶಾಸನಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ಸಲಹೆ ನೀಡಿದರು.
ವಿವಿ ಕುಲಪತಿ ಡಾ.ಎಂ.ಕೆ. ನಾಯ್ಕ ಮಾತನಾಡಿ, ಪೌಷ್ಟಿಕಾಂಶಯುಕ್ತ ಆಹಾರ ಸಿಗುತ್ತಿಲ್ಲ. ಹೆಣ್ಣು ಮಕ್ಕಳಲ್ಲಿ ರಕ್ತಹೀನತೆಯಂತಹ ಸಮಸ್ಯೆ ಎದುರಾಗಿದೆ. ಜೀವ ವೈವಿಧ್ಯತೆ ಮತ್ತು ಸಸ್ಯ ಸಂಪನ್ಮೂಲ ಆಹಾರ ಸುಸ್ಥಿರತೆಗೆ ಕೊಂಡಿಯಂತಿದ್ದು, ವೇಗವಾಗಿ ಬದಲಾಗುತ್ತಿರುವ ಕೃಷಿ ಪದ್ಧತಿಗಳಿಗೆ ಅನುಗುಣವಾಗಿ ಸಸ್ಯ ಸಂಪತ್ತು ಸಂರಕ್ಷಿಸುವ ಬಹುದೊಡ್ಡ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಭೂಮಿಯ ಫಲವತ್ತತೆ ಕಾಪಾಡುವ ಕೆಲಸವಾಗಬೇಕೆಂದರು.
ರಾಷ್ಟ್ರೀಯ ಸಸ್ಯ ಸಂಪನ್ಮೂಲಗಳ ಸಂರಕ್ಷಣಾ ಸಂಸ್ಥೆ ಪ್ರಧಾನ ವಿಜ್ಞಾನಿ ಡಾ. ಸುನೀಲ್ ಅರ್ಚಕ್, ಪಾಂಡಿಚೇರಿ ಕೃಷಿ ವಿವಿಯ ಡಾ.ಎಸ್. ತಿರುಮೇಣಿ, ಪ್ರಾಧ್ಯಾಪಕ
ಡಾ. ನಿರಂಜನಮೂರ್ತಿ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ ಅವರು ಮುಖ್ಯ ವೈಜ್ಞಾನಿಕ ವಿಷಯ ಮಂಡಿಸಿದರು. ಕರ್ನಾಟಕ, ತಮಿಳುನಾಡು, ಕೇರಳ, ದಿಲ್ಲಿ, ಮಣಿಪುರ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ಪಾಂಡಿಚೇರಿ ಸೇರಿ ನಾನಾ ರಾಜ್ಯಗಳಿಂದ 150ಕ್ಕೂ ಅಧಿಕ ವಿಜ್ಞಾನಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 100 ಸಂಶೋಧನಾ ಭಿತ್ತಿಪತ್ರಗಳ ಮಂಡನೆ, 35 ಸಂಶೋಧನಾ ಲೇಖನಗಳನ್ನು ಮಂಡಿಸಲಾಯಿತು.
=============
ಅರ್ಥ ಮಾಡಿಕೊಳ್ಳದೇ ಹಸ್ತಕ್ಷೇಪ ಬೇಡ:
ಜೀವವೈವಿಧ್ಯಕ್ಕೆ ಕೈಹಾಕುವ ಮುನ್ನ ಮನುಷ್ಯ ಅದರಲ್ಲಿರುವ ಸೂಕ್ಷ್ಮತೆ ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ವ್ಯತಿರಿಕ್ತ ಪರಿಣಾಮಗಳಾಗುವ ಸಾಧ್ಯತೆಯೂ ಇರುತ್ತದೆ. ಇದರ ಫಲವಾಗಿಯೇ ಇಂದು ಹವಾಮಾನ ವೈಪರೀತ್ಯದೊಂದಿಗೆ ಜೀವವೈವಿಧ್ಯಗಳು ಸಂಕಷ್ಟಕ್ಕೆ ಸಿಲುಕಿವೆ. ಆರೇಳು ದಶಕಗಳ ಹಿಂದೆ ಮಲೆನಾಡಿನಲ್ಲಿ ದಟ್ಟ ಅರಣ್ಯವಿತ್ತು. ಆದರೀಗ ಅರಣ್ಯ ಕ್ಷೀಣಿಸಿದ್ದು, ಬರುವ ದಿನಗಳಲ್ಲಾದರೂ ಸಂರಕ್ಷಿಸುವ ಕೆಲಸವಾಗಬೇಕು.
-ಡಾ.ಅಶೋಕ್ ದಳವಾಯಿ