ಆ್ಯಪ್ನಗರ

ಕಾಳಜಿಕೇಂದ್ರಕ್ಕೆ ಮಣಿವಣ್ಣನ್‌ ಭೇಟಿ, ಪರಿಶೀಲನೆ

ನಗರದ ಅಪ್ಪರ್‌ ಹುತ್ತಾದ ಕೆಂಪೇಗೌಡ ಸಮುದಾಯ ಭವನದಲ್ಲಿ ನೆರೆ ಸಂತ್ರಸ್ತರಿಗಾಗಿ ತಾತ್ಕಾಲಿಕವಾಗಿ ನಿರ್ಮಿಸಿರುವ ಕಾಳಜಿ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಕಾರ‍್ಯದರ್ಶಿ ಮಣಿವಣ್ಣನ್‌ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 13 Aug 2019, 10:39 pm
ಭದ್ರಾವತಿ: ನಗರದ ಅಪ್ಪರ್‌ ಹುತ್ತಾದ ಕೆಂಪೇಗೌಡ ಸಮುದಾಯ ಭವನದಲ್ಲಿ ನೆರೆ ಸಂತ್ರಸ್ತರಿಗಾಗಿ ತಾತ್ಕಾಲಿಕವಾಗಿ ನಿರ್ಮಿಸಿರುವ ಕಾಳಜಿ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಕಾರ‍್ಯದರ್ಶಿ ಮಣಿವಣ್ಣನ್‌ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web SMR-12BDVT3


ಕವಲುಗುಂದಿ ಪ್ರದೇಶದಲ್ಲಿ 5ಮನೆಗಳಿಗೆ ಕಾಲುವೆ ನೀರು ನುಗ್ಗಿ ಜಲಾವೃತಗೊಂಡ ಹಿನ್ನೆಲೆಯಲ್ಲಿ ಅಲ್ಲಿನ ಸಂತ್ರಸ್ತರನ್ನು ಕಾಳಜಿಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಕೇಂದ್ರದಲ್ಲಿ ಮಕ್ಕಳಾದಿಯಾಗಿ ಸುಮಾರು 50 ಮಂದಿ ಆಶ್ರಯ ಪಡೆಯುತ್ತಿದ್ದಾರೆ. ನಗರಸಭೆ ಆಡಳಿತ ಹಾಗೂ ತಾಲೂಕು ಆಡಳಿತ ಜಂಟಿಯಾಗಿ ಸಮರೋಪಾದಿಯಲ್ಲಿ ಅಲ್ಲಿನ ನಿರಾಶ್ರಿತರಿಗೆ ಊಟ, ತಿಂಡಿ ಹಾಗೂ ಪರಿಕರ ವಿತರಿಸಲು ಕಾರ‍್ಯಪ್ರವೃತ್ತರಾಗಿದ್ದರು. ತಾಲೂಕು ದಂಡಾಧಿಕಾರಿ ಸೋಮಶೇಖರ್‌, ನಗರಸಭಾ ಪೌರಾಯುಕ್ತ ಮನೋಹರ್‌, ಕಂದಾಯಾಧಿಕಾರಿ ಪ್ರಶಾಂತ್‌, ನಗರಸಭೆ ಕಂದಾಯಾಧಿಕಾರಿ ರಾಜಕುಮಾರ್‌, ಸಂಘಟನಾಧಿಕಾರಿ ಸುಹಾಸಿನಿ, ಈಶ್ವರಪ್ಪ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು. ಇದೇ ಸಂದರ್ಭ ಅಜ್ಜಂಪುರದ ಉಪನ್ಯಾಸಕರಾದ ರಾಘವೇಂದ್ರ, ಕೇಶವ, ಪ್ರಕಾಶ್‌ ಇತರರು ನಿರಾಶ್ರಿತರಿಗೆ ಚಾಪೆ ಮುಂತಾದವುಗಳನ್ನು ವಿತರಿಸಿದರು. ಡಾ.ಕವಿತಾ ನೇತೃತ್ವದಲ್ಲಿ ಸಂತ್ರಸ್ತರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ