ಆ್ಯಪ್ನಗರ

ಭಕ್ತಸಾಗರದ ಮಧ್ಯೆ ಮಾರಿ ಪೂಜೆ

ನಗರದ ಗ್ರಾಮದೇವತೆ ಕೋಟೆ ಶ್ರೀ ಮಾರಿಕಾಂಬ ದೇವಿಗೆ ಗಾಂಧಿ ಬಜಾರ್‌ನಲ್ಲಿಮಂಗಳವಾರ ಮುಂಜಾನೆಯಿಂದ ತಡರಾತ್ರಿವರೆಗೆ ಪೂಜೆ ಸಲ್ಲಿಸಿದ ಭಕ್ತರು ಬುಧವಾರದಂದು ಮನೆಗಳಲ್ಲಿದೇವಿಗೆ ಹರಕೆಯ ಕುರಿಗಳನ್ನು ಅರ್ಪಿಸಿ ಭಕ್ತಿಯನ್ನು ಸಮರ್ಪಿಸಿದರು.

Vijaya Karnataka 27 Feb 2020, 5:00 am
ಶಿವಮೊಗ್ಗ: ನಗರದ ಗ್ರಾಮದೇವತೆ ಕೋಟೆ ಶ್ರೀ ಮಾರಿಕಾಂಬ ದೇವಿಗೆ ಗಾಂಧಿ ಬಜಾರ್‌ನಲ್ಲಿಮಂಗಳವಾರ ಮುಂಜಾನೆಯಿಂದ ತಡರಾತ್ರಿವರೆಗೆ ಪೂಜೆ ಸಲ್ಲಿಸಿದ ಭಕ್ತರು ಬುಧವಾರದಂದು ಮನೆಗಳಲ್ಲಿದೇವಿಗೆ ಹರಕೆಯ ಕುರಿಗಳನ್ನು ಅರ್ಪಿಸಿ ಭಕ್ತಿಯನ್ನು ಸಮರ್ಪಿಸಿದರು.
Vijaya Karnataka Web 26SMG5053417


ಬುಧವಾರದಂದು ಶಿವಮೊಗ್ಗ ನಗರಕ್ಕೆ ನಗರವೇ ಬಾಡೂಟದಲ್ಲಿಮಿಂದೆದ್ದಂತೆ ಇತ್ತು. ಎರಡು ವರ್ಷಗಳಿಗೊಮ್ಮೆ ನಡೆಯುವ ಮಾರಿ ಜಾತ್ರೆ ನೆಪದಲ್ಲಿಬಂಧುಗಳು, ನೆಂಟರು, ಇಷ್ಟರು, ಸ್ನೇಹಿತರನ್ನು ಆಹ್ವಾನಿಸಿ ಬಾಡೂಟದ ಔತಣ ನೀಡಿದರು.

ಮಾರಿ ಜಾತ್ರೆ ಹಿನ್ನೆಲೆಯಲ್ಲಿಮಂಗಳವಾರದಿಂದಲೆ ನಗರದಲ್ಲೆಡೆ ಸಂಚಾರ ದಟ್ಟಣ ಹೆಚ್ಚಾಗಿತ್ತು. ಬುಧವಾರ ಮಧ್ಯಾಹ್ನದಿಂದ ತಡರಾತ್ರಿ ವರೆಗೆ ವಾಹನಗಳ ದಟ್ಟಣೆ ವಿಪರೀತವಾಯಿತು. ಬಾಡೂಟಕ್ಕೆ ಬೈಕು, ಕಾರುಗಳನ್ನೇರಿ ಬಂದವರು ರಸ್ತೆ ಬದಿಗಳಲ್ಲಿಸಾಲುಗಟ್ಟಿ ನಿಲ್ಲಿಸಿದ್ದರಿಂದಾಗಿ ಸಂಚಾರಕ್ಕೆ ತೊಂದರೆಯಾಯಿತು. ಗಲ್ಲಿಗಳಲ್ಲಿ, ಕೆಲ ಪ್ರಮುಖ ರಸ್ತೆಗಳಲ್ಲಿಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಕೋಟೆ ಶ್ರೀ ಮಾರಿಕಾಂಬ ದೇವಿಯ ತವರುಮನೆಯಾದ ಗಾಂಧಿಬಜಾರ್‌ನಲ್ಲಿಮಂಗಳವಾರ ಪೂಜೆ ಸಲ್ಲಿಸಿ ಜಾತ್ರೆಗೆ ಚಾಲನೆ ನೀಡಿದ ಬಳಿಕ ಸಂಪ್ರದಾಯದಂತೆ ಬುಧವಾರ ಬೆಳಗಿನ ಜಾವ ಅಮ್ಮನವರು ಗದ್ದುಗೆ ಪ್ರವೇಶಿಸಿದರು. ಗದ್ದುಗೆಯಲ್ಲಿ ಮಾರಿಕಾಂಬಾ ದೇವಿ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳನ್ನು ಸಾಂಪ್ರಾದಾಯಿಕ ಬಾಬುದಾರ ಚೌಡಿಕೆ ಕುಟುಂಬವು ಕೋಟೆ ಮಾರಿಕಾಂಬಾ ಸೇವಾ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿನೆರವೇರಿಸಿ ಪೂಜೆ ಸಲ್ಲಿಸಿದ ನಂತರ ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಲಾಯಿತು.

ಜಾತ್ರೆಯ ಎರಡನೆ ದಿನವಾದ ಬುಧವಾರ ಸಾವಿರಾರು ಜನ ದೇವಿಗೆ ಬೇವಿನುಡಿಗೆ ಮತ್ತಿತರ ಹರಕೆ ತೀರಿಸುವ ಮೂಲಕ ಒಳಿತಿಗಾಗಿ ಪ್ರಾರ್ಥಿಸಿದರು. ಜಿಲ್ಲಾಹೆಚ್ಚುವರಿ ರಕ್ಷಣಾಧಿಕಾರಿ ಶೇಖರ್‌ ಅವರು ದಂಪತಿ ಸಮೇತ ಗದ್ದುಗೆಗೆ ಆಗಮಿಸಿ ಮಾರಿಕಾಂಬೆಯ ದರ್ಶನ ಪಡೆದರು. ಮಂಗಳವಾರ ತಡರಾತ್ರಿ ಉಪ್ಪಾರ ಸಮಾಜದವರು ಮಾರಿಕಾಂಬೆಗೆ ಮಡಿಲು ತುಂಬಿ ಡೊಳ್ಳು, ತಮಟೆ ಮತ್ತು ಮಂಗಳವಾದ್ಯಗಳೊಂದಿಗೆ ದೇವಸ್ಥಾನಕ್ಕೆ ಕರೆದೊಯ್ದು ಮಾರಿಗದ್ದುಗೆ ಮೇಲೆ ಪ್ರತಿಷ್ಠಾಪಿಸಿದರು. ಈ ವೇಳೆ ಗಾಂಧಿಬಜಾರ್‌ನಲ್ಲಿಸಾವಿರಾರು ಭಕ್ತಾದಿಗಳು ದೇವಿ ದರ್ಶನ ಪಡೆದು ಕೃತಾರ್ಥರಾದರು. ಮೆರವಣಿಗೆ ಮೂಲಕ ಸಾಗಿದ ಮಾರಿಕಾಂಬೆಯನ್ನು ಬಾಣ, ಬಿರುಸು ಸಿಡಿಸಿ ಗದ್ದುಗೆಗೆ ಕರೆದುಕೊಂಡು ಬರಲಾಯಿತು. ಭಕ್ತರು ದೇವಿಗೆ ಕೋಳಿಗಳನ್ನು ಅರ್ಪಿಸಿದರು. ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿಪ್ರತಿಷ್ಠಾಪನೆಗೊಂಡಿರುವ ದೇವಿಯನ್ನು ನೋಡುವುದಕ್ಕೆ ಬೆಳಗ್ಗೆಯಿಂದಲೇ ಭಕ್ತಾದಿಗಳು ಸರತಿಯಲ್ಲಿನಿಂತಿದ್ದರು. ಮಧ್ಯಾಹ್ನದ ನಂತರ ಭಕ್ತಾದಿಗಳ ಸಂಖ್ಯೆಯ ಇನ್ನಷ್ಟು ಹೆಚ್ಚಿತು.

ಕೋಟೆ ಮಾರಿಕಾಂಬ ದೇವಸ್ಥಾನ ಆವರಣದಲ್ಲಿಪ್ರಾಣಿ ಬಲಿಗೆ ಅವಕಾಶ ಇಲ್ಲದ ಕಾರಣ ಬುಧವಾರ ಮುಂಜಾನೆಯೇ ಗಾಂಧಿ ಬಜಾರ್‌ನಲ್ಲಿವಿತರಿಸಲಾದ ತೀರ್ಥ ತೆಗೆದುಕೊಂಡು ಹೋಗಿ ಕುರಿ, ಮೇಕೆಗಳಿಗೆ ಪ್ರೋಕ್ಷಣೆ ಮಾಡಿ ದೇವಿ ಹರಕೆ ತೀರಿಸಿದರು.

* ಕುರಿ, ಕೋಳಿ ಬಲಿ: ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಪ್ರಯುಕ್ತ ನಗರದಲ್ಲಿಅಸಂಖ್ಯಾತ ಕುರಿ, ಕೋಳಿಗಳ ಬಲಿ ಕೊಡಲಾಯಿತು.

===
ಮಾಂಸದಂಗಡಿ ಮುಂದೆ ಕ್ಯೂ
ಹರಕೆಯ ಕುರಿಗಳನ್ನು ಬುಧವಾರ ಬೆಳಗ್ಗೆಯಿಂದಲೇ ಸಮರ್ಪಿಸಿದರೆ, ಇದರ ಹೊರತಾಗಿ ಮಂಗಳವಾರ ರಾತ್ರಿಯಿಂದಲೇ ಮಾಂಸದ ಅಂಗಡಿಗಳಲ್ಲಿಜನಸಂದಣಿ ಹೆಚ್ಚಿತ್ತು. ಜಾತ್ರೆ ಹಿನ್ನೆಲೆಯಲ್ಲಿಕುರಿ ಮತ್ತು ಮೇಕೆ ಮಾಂಸಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿತ್ತು. ಹಬ್ಬದ ಹೊರತಾದ ದಿನಗಳಲ್ಲಿಕುರಿ ಮಾಂಸದ ಬೆಲೆ ಕೆಜಿಗೆ 500 ರೂ. ಇದ್ದರೆ, ಜಾತ್ರೆಯಿಂದಾಗಿ ಅದರ ದರದಲ್ಲಿಭಾರಿ ಏರಿಕೆಯಾಗಿತ್ತು. ಕೆಜಿಗೆ 800 ರೂ.ವರೆಗೂ ಮಾರಾಟ ಮಾಡಲಾಯಿತು. ಜವಾರಿ ಕೋಳಿಗಳಿಗೂ ಭರ್ಜರಿ ಬೇಡಿಕೆ ಇತ್ತು. ಜಾತ್ರೆ ಇನ್ನೂ ಎರಡು ದಿನ ಇರುವಾಗಲೇ ನಾನಾ ನಗರದ ಕಡೆ ಕೋಳಿಗಳ ಮಾರಾಟ ಮಾಡುತ್ತಿದ್ದ ದೃಶ್ಯ ಹೇರಳವಾಗಿ ಕಾಣುತ್ತಿತ್ತು.

===
ಜಾತ್ರೆಯಲ್ಲೂಭರ್ಜರಿ ವ್ಯಾಪಾರ
ಕೋಟೆ ಪ್ರದೇಶದಲ್ಲಿಮಾರಿಕಾಂಬ ಜಾತ್ರೆಗಾಗಿ ಬೆಂಡು, ಬತ್ತಾಸು, ಆಟಿಕೆಗಳ ಅಂಗಡಿಗಳನ್ನು ತೆರೆಯಲಾಗಿದ್ದು ಅವುಗಳಿಗೆ ಜನರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಆಟಿಕೆಗಳನ್ನು ತರಲಾಗಿದ್ದು, ಮಕ್ಕಳಾದಿಯಾಗಿ ಎಲ್ಲರೂ ಅದರೆಡೆಗೆ ಮಾರುಹೋದರು.

ಬಿಗಿ ಬಂದೋಬಸ್‌್ತ: ದೇವಿ ಉತ್ಸವ ಮೂರ್ತಿಯನ್ನು ಗದ್ದುಗೆಗೆ ತರುವ ವೇಳೆ ಅಪಾರ ಸಂಖ್ಯೆಯಲ್ಲಿಜನ ಸೇರಿದ್ದರು. ನೂಕುನುಗ್ಗಲು ಉಂಟಾಗಿದ್ದು, ಡಿವೈಎಸ್‌ಪಿ ಉಮೇಶ್‌ ನಾಯ್‌್ಕ, ಸರ್ಕಲ್‌ ಇನ್ಸ್‌ಪೆಕ್ಟರ್‌ ವಸಂತಕುಮಾರ್‌ ನೇತೃತ್ವದ ಪೊಲೀಸ್‌ ತಂಡ ಬಿಗಿ ಬಂದೋಬಸ್‌್ತ ಕಲ್ಪಿಸಿತ್ತು. ಈ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಲಾಯಿತು.

===


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ