ಆ್ಯಪ್ನಗರ

ಸಿಎಂ ಬೆಂಗಾವಲು ವಾಹನಕ್ಕೆ ಮೇಯರ್‌ ಕಾರು ಡಿಕ್ಕಿ

ನಗರದ ನೆರೆ ಪೀಡಿತ ಪ್ರದೇಶಗಳಿಗೆ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭೇಟಿ ನೀಡಿದ್ದ ಸಂದರ್ಭ ಸಿಎಂ ಬೆಂಗಾವಲು ಪಡೆ ವಾಹನಕ್ಕೆ ಮಹಾನಗರ ಪಾಲಿಕೆ ಮೇಯರ್‌ ಕಾರು ಡಿಕ್ಕಿಯಾಗಿದೆ.

Vijaya Karnataka 14 Aug 2019, 5:00 am
ಶಿವಮೊಗ್ಗ : ನಗರದ ನೆರೆ ಪೀಡಿತ ಪ್ರದೇಶಗಳಿಗೆ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭೇಟಿ ನೀಡಿದ್ದ ಸಂದರ್ಭ ಸಿಎಂ ಬೆಂಗಾವಲು ಪಡೆ ವಾಹನಕ್ಕೆ ಮಹಾನಗರ ಪಾಲಿಕೆ ಮೇಯರ್‌ ಕಾರು ಡಿಕ್ಕಿಯಾಗಿದೆ.
Vijaya Karnataka Web SMR-13GANESH6


ನೆರೆ ಹಾನಿ ಪ್ರದೇಶವಾದ ರಾಜೀವ್‌ ಗಾಂಧಿ ಬಡಾವಣೆಯ ವೀಕ್ಷಣೆ ಮುಗಿಸಿ ಜೈನ್‌ ಗೋಶಾಲೆಯತ್ತ ಹೊರಟಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಸಿಎಂ ಬೆಂಗಾವಲು ಪಡೆ ವಾಹನಗಳ ಹಿಂದೆಯೇ ಚಲಿಸುತ್ತಿದ್ದ ಮೇಯರ್‌ ಕಾರು ಏಕಾಏಕಿ ಮುಂದಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ಜಖಂಗೊಂಡಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಕಾರು ಅಪಘಾತವಾಗುತ್ತಿದ್ದಂತೆ ಮೇಯರ್‌ ಲತಾ ಗಣೇಶ್‌ ಅವರು ಉಪ ಮೇಯರ್‌ ಕಾರಿನಲ್ಲಿ ತೆರಳಿದರು. ಮೇಯರ್‌ಗೆ ಕಾರು ಬಿಟ್ಟುಕೊಟ್ಟ ಉಪಮೇಯರ್‌ ಎಸ್‌.ಎನ್‌.ಚನ್ನಬಸಪ್ಪ ಅವರು ಸ್ಥಳೀಯರೊಬ್ಬರ ಬೈಕ್‌ನಲ್ಲಿ ತೆರಳಿದರು.

-----------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ