ಆ್ಯಪ್ನಗರ

ಮಾಧ್ಯಮ ದಾರಿ ತೋರಿಸಬೇಕು, ತಪ್ಪಿಸಬಾರದು

ಮಾಧ್ಯಮಗಳು ಹದಿಹರೆಯದವರಿಗೆ ದಾರಿ ತೋರಿಸಬೇಕೆ ಹೊರೆತು ದಾರಿ ತಪ್ಪಿಸಬಾರದು ಎಂದು ಕುವೆಂಪು ವಿವಿ ಪ್ರಭಾರ ಕುಲಪತಿ ಪ್ರೊ.ಎಸ್‌.ಎಸ್‌.ಪಾಟೀಲ್‌ ಹೇಳಿದರು.

Vijaya Karnataka 13 Jul 2019, 5:00 am
ಶಿವಮೊಗ್ಗ : ಮಾಧ್ಯಮಗಳು ಹದಿಹರೆಯದವರಿಗೆ ದಾರಿ ತೋರಿಸಬೇಕೆ ಹೊರೆತು ದಾರಿ ತಪ್ಪಿಸಬಾರದು ಎಂದು ಕುವೆಂಪು ವಿವಿ ಪ್ರಭಾರ ಕುಲಪತಿ ಪ್ರೊ.ಎಸ್‌.ಎಸ್‌.ಪಾಟೀಲ್‌ ಹೇಳಿದರು.
Vijaya Karnataka Web SMR-12ganesh4


ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಯುನಿಸೆಫ್‌, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗ ಸಹಯೋಗದಲ್ಲಿ ನಗರದ ಜಿಲ್ಲಾ ಸರಕಾರಿ ನೌಕರರ ಸಂಘದಲ್ಲಿ ಶುಕ್ರವಾರ ಆಯೋಜಿಸಿದ್ದ ಅಭಿವೃದ್ಧಿ ಪತ್ರಿಕೋದ್ಯಮ ಹಾಗೂ ಹದಿ ಹರೆಯದ ಸಮಸ್ಯೆಗಳ ಕುರಿತ ವರದಿಗಾರಿಕೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಹದಿಹರೆಯದ ವಯಸ್ಸೇ ವಿಚಿತ್ರವಾದದ್ದು. ಈ ವಯಸ್ಸಿನಲ್ಲಿ ಬೇಡವಾದುದ್ದನ್ನೇ ಬಯಸುತ್ತವೆ. ದೃಶ್ಯ ಮಾಧ್ಯಮದತ್ತ ಆಕರ್ಷಿತರಾಗುತ್ತಿದ್ದಾರೆ. ಮಾಧ್ಯಮಗಳು ಅವರನ್ನು ದಾರಿ ತಪ್ಪಿಸಬಾರದು ಋುಣಾತ್ಮಕ ವಿಷಯಕ್ಕಿಂತ ಧನಾತ್ಮಕ ವಿಷಯಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ಮೌಲ್ಯಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.

ಮಾಧ್ಯಮಗಳಷ್ಟೆ ಅಲ್ಲದೇ ಪೋಷಕರ ಪಾತ್ರವು ಬಹಳ ಮುಖ್ಯ. ಮಕ್ಕಳ ಬೆಳವಣಿಗೆಯನ್ನು ಸೂಕ್ಷ ್ಮವಾಗಿ ಗಮನಿಸಬೇಕು. ಎಂತಹ ಚಲನಚಿತ್ರಗಳನ್ನು ನೋಡಬೇಕು ಮತ್ತು ಯಾವುದನ್ನು ನೋಡಬಾರದು ಎಂಬ ಮಾರ್ಗದರ್ಶನ ಅತಿ ಮುಖ್ಯ. ಹದಿ ಹರೆಯದ ಮಕ್ಕಳಲ್ಲಿ ನೆಗೆಟಿವ್‌ ಚಿಂತನೆಗಳು ಬೇಗ ತಲುಪುತ್ತವೆ. ಹಾಗಾಗಿ ತುಂಬ ಎಚ್ಚರ ಅಗತ್ಯ. ಮಾಧ್ಯಮ ಕೂಡ ಇಂತಹ ಸಂದರ್ಭದಲ್ಲಿ ತನ್ನ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡು ಮಕ್ಕಳನ್ನು ಸತ್ಪ್ರಜೆಯನ್ನಾಗಿ ರೂಪಿಸಬೇಕು ಎಂದರು.

ಹೈದರಾಬಾದಿನ ಯುನೆಸೆಫ್‌ ದಕ್ಷಿಣಾ ಭಾರತ ನಿರ್ದೇಶಕ ಪ್ರಪುಲ್‌ ಸೇನ್‌ ಮಾತನಾಡಿ, ಹದಿಹರೆಯದ ಮಕ್ಕಳಲ್ಲಿ ಸಮಸ್ಯೆಗಳು ಹೆಚ್ಚು. ಪ್ರತಿ 6ರಲ್ಲಿ ಒಬ್ಬರು ಹದಿಹರೆಯದವರು ಇರುತ್ತಾರೆ. ಶಿಕ್ಷ ಣಕ್ಕೆ ಆದ್ಯತೆ ನೀಡಲೇಬೇಕು. ಶಾಲೆಯಿಂದ ಮಕ್ಕಳು ವಂಚಿತರಾಗದಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷ ಣದ ಜೊತೆಗೆ ಆರೋಗ್ಯದ ಕಡೆ ಗಮನಹರಿಸಬೇಕು. ಹದಿಹರೆಯದ ಸಾಕಷ್ಟು ಮಕ್ಕಳು ಪೌಷ್ಠಿಕ ಆಹಾರದಿಂದ ವಂಚಿತರಾಗಿರುತ್ತಾರೆ. ಬಾಲ್ಯ ವಿವಾಹ ಕೂಡ ಒಂದು ಶಾಪವಾಗಿದೆ ಇದು ನಿಲ್ಲಬೇಕು ಎಂದರು.

ಸಂಯೋಜಕಿ ಡಾ.ಸ್ವಪ್ನ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಗಾರದಲ್ಲಿ ಡಾ.ಶುಬ್ರತ್ತ, ಪ್ರೀತಿ ನಾಗರಾಜ್‌, ವಾಸುದೇವ ಶರ್ಮ ಉಪನ್ಯಾಸ ನೀಡಿದರು. ಕುವೆಂಪು ವಿವಿ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸತ್ಯಪ್ರಕಾಶ್‌, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್‌.ಶಿವಕುಮಾರ್‌, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷ ರಿ, ಸಂಪನ್ಮೂಲ ವ್ಯಕ್ತಿ ವಾಸುದೇವ ಶರ್ಮ, ಪ್ರೀತಿ ನಾಗರಾಜ್‌, ಪತ್ರಕರ್ತ ಸಂಘದ ವೈದ್ಯ , ವಿ.ಟಿ.ಅರುಣ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ