ಆ್ಯಪ್ನಗರ

ಬಿಜೆಪಿಯಿಂದ 2ದಿನದಲ್ಲಿ 16 ಸಮಾಜಗಳ ಸಭೆ

ಲೋಕಸಭೆ ಉಪ ಚುನಾವಣೆಯಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗದವರ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಎರಡು ದಿನದ ಅವಧಿಯಲ್ಲಿ 16ಕ್ಕೂ ಹೆಚ್ಚು ಸಮಾಜಗಳ ಮುಖಂಡರ ಸಭೆಗಳನ್ನು ನಡೆಸಿದ್ದಾರೆ.

Vijaya Karnataka 23 Oct 2018, 5:00 am
ಶಿವಮೊಗ್ಗ: ಲೋಕಸಭೆ ಉಪ ಚುನಾವಣೆಯಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗದವರ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಎರಡು ದಿನದ ಅವಧಿಯಲ್ಲಿ 16ಕ್ಕೂ ಹೆಚ್ಚು ಸಮಾಜಗಳ ಮುಖಂಡರ ಸಭೆಗಳನ್ನು ನಡೆಸಿದ್ದಾರೆ.
Vijaya Karnataka Web SMG-2210-2-15-22SMG BJP


ವಿನೋಬನಗರದಲ್ಲಿ ತಮ್ಮ ಮನೆ ಮುಂಭಾಗದಲ್ಲಿರುವ ಸಭಾಂಗಣದಲ್ಲಿ ಭಾನುವಾರ ಮತ್ತು ಸೋಮವಾರ ನಿರಂತರವಾಗಿ ವಿವಿಧ ಸಮಾಜಗಳ ಮುಖಂಡರ ಸಭೆ ನಡೆಸಿ ಕೇಂದ್ರ ಸರಕಾರದ ಸಾಧನೆಗಳು, ರಾಜ್ಯ ಸರಕಾರದ ವೈಫಲ್ಯಗಳ ಬಗ್ಗೆ ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನದಿಂದ ಸೋಮವಾರ ಸಂಜೆವರೆಗೆ ತಲಾ ಅರ್ಧ ಅಥವಾ ಮುಕ್ಕಾಲು ತಾಸಿನಂತೆ ಲಿಂಗಾಯಿತ, ಒಕ್ಕಲಿಗ, ಕುರುಬ, ಮಡಿವಾಳ, ವಿಶ್ವಕರ್ಮ, ಬಂಜಾರ, ಸವಿತಾ, ಭೋವಿ, ಸಾಧುಶೆಟ್ಟಿ, ಈಡಿಗ, ಉಪ್ಪಾರ, ತಮಿಳರು, ಮಲಯಾಳಿ ಸೇರಿದಂತೆ ವಿವಿಧ ಸಮಾಜ ಮತ್ತು ಭಾಷಿಕರ ಒಟ್ಟಾರೆ 16 ಸಭೆಗಳನ್ನು ನಡೆಸಲಾಗಿದೆ. ಸಮಾಜದ ಮುಖಂಡರನ್ನು ಕರೆತರಲು ತಮ್ಮ ಪಕ್ಷದಲ್ಲಿರುವ ಆಯಾ ಸಮಾಜಗಳ ಮುಖಂಡರಿಗೆ ಜವಾಬ್ದಾರಿ ನೀಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ