ಆ್ಯಪ್ನಗರ

ಪೋಷಕರ ನಡೆ ಮಕ್ಕಳಿಗೆ ಮಾದರಿ

ಪೋಷಕರು ನಮ್ಮಲ್ಲಿರುವ ಒಳ್ಳೆಯ ಅಂಶ ಮೊದಲು ಗುರುತಿಸಿ ಪ್ರಶಂಸಿಸಬೇಕೆಂದು ವಿದ್ಯಾರ್ಥಿನಿ ಅಕ್ಷತಾ ಹೇಳಿದರು.

Vijaya Karnataka 21 Nov 2019, 5:00 am
ಸಾಗರ: ಪೋಷಕರು ನಮ್ಮಲ್ಲಿರುವ ಒಳ್ಳೆಯ ಅಂಶ ಮೊದಲು ಗುರುತಿಸಿ ಪ್ರಶಂಸಿಸಬೇಕೆಂದು ವಿದ್ಯಾರ್ಥಿನಿ ಅಕ್ಷತಾ ಹೇಳಿದರು.
Vijaya Karnataka Web 19SGR2_46
ಸಾಗರದ ವಿನೋಬಾನಗರದ ಶ್ರೀಸಾಯಿಬಾಬಾ ದೇಗುಲ ಸಮೀಪದ ಉಮಾಸುತಂ ಆವರಣದಲ್ಲಿಏರ್ಪಡಿಸಿದ್ದ ಮಕ್ಕಳೊಂದಿಗೆ ಒಂದು ದಿನ ಕಾರ‍್ಯಕ್ರಮಕ್ಕೆ ಸಂಚಿತಾ, ಸುಮುಖ ಚಾಲನೆ ನೀಡಿದರು.


ಇಲ್ಲಿನ ವಿನೋಬಾನಗರದ ಶ್ರೀಸಾಯಿಬಾಬಾ ದೇವಸ್ಥಾನ ಸಮೀಪದ ಉಮಾಸುತಂ ಆವರಣದಲ್ಲಿಆನಂದ ಸಾಗರ ಹಾಗೂ ನೆರವಿನ ಕೈಗಳು ಟ್ರಸ್ಟ್‌ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಮಕ್ಕಳೊಂದಿಗೆ ಒಂದು ದಿನ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೋಷಕರು ಮಕ್ಕಳಮೇಲೆ ಒತ್ತಡ ಹೇರುವುದರಿಂದ ತಮ್ಮ ಆರೋಗ್ಯವನ್ನೂ ಹಾಳುಮಾಡಿಕೊಳ್ಳುತ್ತಾರೆ. ಮಕ್ಕಳ ದಿನಾಚರಣೆಯಂದು ಮಕ್ಕಳು ಹೇಗಿರಬೇಕೆಂದು ಭಾಷಣಮಾಡುವುದರ ಬದಲು ಪೋಷಕರು ಹೇಗಿರಬೇಕೆಂದು ತಿಳಿಸಿ ಹೇಳುವಂತಾಗಬೇಕೆಂದರು. ಶುಭಶ್ರೀ ಮಾತನಾಡಿದರು. 1ರಿಂದ 10ನೇ ತರಗತಿಯ ವಿವಿಧ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಚಿತಾ, ಸುಮುಖ ಕಾರ‍್ಯಕ್ರಮ ಉದ್ಘಾಟಿಸಿದರು. ಶ್ರಾವಣಿ ಮತ್ತು ವರ್ಶಿಣಿ ಪ್ರಾರ್ಥಿಸಿದರು. ಸಂಕಲ್ಪ ಸ್ವಾಗತಿಸಿ, ಪ್ರಾರ್ಥನಾ ನಿರೂಪಿಸಿದರು. ಟ್ರಸ್ಟ್‌ ಅಧ್ಯಕ್ಷ ಉದಯಕುಮಾರ್‌ ಕುಂಸಿ ವಂದಿಸಿದರು. ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮ ನೀಡಿದರು. ಡಾ.ಪ್ರಭಾಕರ ಕಥೆ ಹೇಳಿದರು. ಆಸುಪಾಸಿನ ನಿವಾಸಿಗಳು, ಪೋಷಕರು ಹಾಜರಿದ್ದರು.

-------
ಈಗಿನ ಬಹುಪಾಲು ಪೋಷಕರು ತಮ್ಮ ಮಕ್ಕಳು ಪಡೆದಿರುವ ನೂರಕ್ಕೆ ತೊಂಬತ್ತು ಅಂಕಗಳನ್ನು ಪ್ರಶಂಸಿಸುವ ಬದಲು ಕಳೆದುಕೊಂಡ ಹತ್ತು ಅಂಕಗಳ ಬಗ್ಗೆಯೇ ಚಿಂತಿಸುವುದು ದುರಂತ.
-ಅಕ್ಷತಾ, ವಿದ್ಯಾರ್ಥಿನಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ