ಆ್ಯಪ್ನಗರ

ಸಮಾಜಕ್ಕೆ ಮಾದರಿಯಾಗಿ ಬದುಕಿ: ಸ್ವಾಮೀಜಿ

ಮದುವೆ ಎಂಬುದು ಭೋಜನ, ಗದ್ದಲಕ್ಕೆ ಮಾತ್ರ ಸೀಮಿತವಾಗಬಾರದು. ನೂತನ ವಧುವರರು ಸಂಸಾರದಲ್ಲಿ ಪರಸ್ಪರ ಅನ್ಯೋನ್ಯತೆಯಿಂದ ಬಾಳುವಂತಾಗಬೇಕೆಂದು ಹಾರ್ನಹಳ್ಳಿ ಚೌಕಿಮಠದ ಶ್ರೀನೀಲಕಂಠ ಮಹಾಸ್ವಾಮಿ ಹೇಳಿದರು.

Vijaya Karnataka 20 May 2019, 5:00 am
ಭದ್ರಾವತಿ: ಮದುವೆ ಎಂಬುದು ಭೋಜನ, ಗದ್ದಲಕ್ಕೆ ಮಾತ್ರ ಸೀಮಿತವಾಗಬಾರದು. ನೂತನ ವಧುವರರು ಸಂಸಾರದಲ್ಲಿ ಪರಸ್ಪರ ಅನ್ಯೋನ್ಯತೆಯಿಂದ ಬಾಳುವಂತಾಗಬೇಕೆಂದು ಹಾರ್ನಹಳ್ಳಿ ಚೌಕಿಮಠದ ಶ್ರೀನೀಲಕಂಠ ಮಹಾಸ್ವಾಮಿ ಹೇಳಿದರು.
Vijaya Karnataka Web SMR-19BDVT1


ಅವರು ಭಾನುವಾರ ಬಿ.ಎಚ್‌.ರಸ್ತೆ ಶ್ರೀಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್‌, ವಿಶ್ವಭಾರತಿ ವಿಶ್ವಸ್ಥಮಂಡಳಿ, ಕಾಲಭೈರವ ಟ್ರಸ್ಟ್‌, ಬಸವೇಶ್ವರ ಧರ್ಮ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ 37ನೇ ವರ್ಷದ 10 ಜತೆ ಸಾಮೂಹಿಕ ವಿವಾಹ ಕಾರ‍್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಭಗವಂತ ನೀಡಿರುವ ಬದುಕನ್ನು ಹಾಳು ಮಾಡಿಕೊಳ್ಳದೆ ಸಮಾಜಕ್ಕೆ ಮಾದರಿಯಾಗಿ ಬದುಕಬೇಕು. ಪರಿಶ್ರಮದಿಂದ ದುಡಿದು, ದುಡಿದಿದ್ದರಲ್ಲಿ ಒಂದು ಭಾಗವನ್ನು ಸಮಾಜದ ಕಾರ‍್ಯಕ್ಕೆ ವಿನಿಯೋಗಿಸಿ ಸಮಾಜದ ಋುಣ ತೀರಿಸಬೇಕು. ಮಕ್ಕಳು ದುಶ್ಚಟಕ್ಕೆ ಬಲಿಯಾಗದಂತೆ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಉತ್ತಮ ಸಂಸ್ಕಾರ, ಸಂಸ್ಕೃತಿವಂತರಾಗಿ ರೂಪಿಸಬೇಕು. ಅವರು ಸಮಾಜಕ್ಕೆ ಉತ್ತಮ ಆಸ್ತಿಗಳಾಗಿ ಬೆಳೆಯುವಂತೆ ಮಾಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.

ಶರಣರ ವಚನಗಳನ್ನು ನಿತ್ಯಮನನ ಮಾಡುತ್ತಿದ್ದರೆ ಅದರಲ್ಲಿನ ಸಂದೇಶಗಳು ಮನದಟ್ಟಾಗುತ್ತವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳಿದಾಗ ಬದುಕು ಸಾರ್ಥಕತೆ ಪಡೆಯುತ್ತದೆ ಎಂದರು.

ಶಾಸಕ ಬಿ.ಕೆ.ಸಂಗಮೇಶ್‌ ಮಾತನಾಡಿ, ವಿಶ್ವ ಹಿಂದೂ ಪರಿಷತ್‌ 37ವರ್ಷಗಳಿಂದ ನಡೆಸಿಕೊಂಡು ಬಂದಿರುವ ಉಚಿತ ವಿವಾಹ ಕಾರ್ಯ ಶ್ಲಾಘನೀಯ. ಇಂತಹ ಕಾರ‍್ಯಗಳಿಂದ ಅನೇಕ ಬಡವರ ಮನೆಯ ವಿವಾಹಕಾರ‍್ಯ ಸುಲಲಿತವಾಗಿರುವಂತೆ ಮಾಡಿದೆ. ನೂತನ ವಧುವರರು ಸಂತಸದಾಯಕ ಬದುಕು ನಡೆಸುವಂತಾಗಲಿ ಎಂದು ಹಾರೈಸಿದರು. ತರೀಕೆರೆ ರಸ್ತೆಯ ಶಿವಸುಬ್ರಹ್ಮಣ್ಯ ಸ್ವಾಮಿ ಆಶ್ರಮದ ಮುರುಗೇಶ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವ ಹಿಂದೂ ಪರಿಷತ್‌ ತಾಲೂಕು ಅಧ್ಯಕ್ಷ ಪಿ.ವೆಂಕಟರಮಣ ಶೇಟ್‌ ಅಧ್ಯಕ್ಷ ತೆ ವಹಿಸಿದ್ದರು. ಶಾಸಕ ಕೆ.ಎಸ್‌.ಈಶ್ವರಪ್ಪ ನೂತನ ವಧುವರರಿಗೆ ಶುಭಹಾರೈಸಿದರು. ವೇದಿಕೆಯಲ್ಲಿ ಪ್ರಾಂತ ಉಪಾಧ್ಯಕ್ಷ ಹಾ.ರಾಮಪ್ಪ , ಜಿಲ್ಲಾಧ್ಯಕ್ಷ ರಮೇಶ್‌ ಬಾಬು, ಕಾಲಭೈರವ ಟ್ರಸ್ಟ್‌ ಅಧ್ಯಕ್ಷ ಮಾದೇಗೌಡ, ಪತಂಜಲಿ ಯೋಗಸಮಿತಿ ರಾಜ್ಯ ಕಾರ‍್ಯಕಾರಿಣಿ ಸದಸ್ಯೆ ಅನ್ನಪೂರ್ಣ ಸತೀಶ್‌, ಬಸವೇಶ್ವರ ಧರ್ಮ ಸಂಸ್ಥೆಯ ಶಶಿಕಲಾ, ಶಿವಕುಮಾರ್‌, ಸುನೀಲ್‌ ಇತರರು ಇದ್ದರು. ಇದೇ ಸಂದರ್ಭ ಅನೇಕರನ್ನು ಸನ್ಮಾನಿಸಲಾಯಿತು. ನೂತನ ವಧುವರರು ಶ್ರೀಗಳ ಸಮ್ಮುಖದಲ್ಲಿ ಮಾಂಗಲ್ಯಧಾರಣೆ ಮಾಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ