ಆ್ಯಪ್ನಗರ

‘ಮೋದಿ ಕೊಡುಗೆ ನಿರುದ್ಯೋಗಿಗಳ ಅಲೆದಾಟ’

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಯಾವುದೇ ಜನಪರ ಕೆಲಸ ಮಾಡಿಲ್ಲ. ವಿದ್ಯಾವಂತ ಯುವ ಜನತೆ ಕೆಲಸಕ್ಕಾಗಿ ಅಲೆಯಬೇಕಾದ ಸ್ಥಿತಿ ದೇಶದಲ್ಲಿದೆ. ಭಾರತವನ್ನು ನಿರುದ್ಯೋಗಿಗಳ ದೇಶವಾಗಿಸಿ ಬಡತನ ಹೆಚ್ಚಿಸಿದ ಕೀರ್ತಿ ನರೇಂದ್ರಮೋದಿ ಅವರಿಗೆ ಸಲ್ಲುತ್ತದೆ ಎಂದು ತೀರ್ಥಹಳ್ಳಿ ಗ್ರಾಮಾಂತರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮುಡುಬ ರಾಘವೇಂದ್ರ ತಿಳಿಸಿದ್ದಾರೆ.

Vijaya Karnataka 31 Mar 2019, 5:00 am
ತೀರ್ಥಹಳ್ಳಿ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಯಾವುದೇ ಜನಪರ ಕೆಲಸ ಮಾಡಿಲ್ಲ. ವಿದ್ಯಾವಂತ ಯುವ ಜನತೆ ಕೆಲಸಕ್ಕಾಗಿ ಅಲೆಯಬೇಕಾದ ಸ್ಥಿತಿ ದೇಶದಲ್ಲಿದೆ. ಭಾರತವನ್ನು ನಿರುದ್ಯೋಗಿಗಳ ದೇಶವಾಗಿಸಿ ಬಡತನ ಹೆಚ್ಚಿಸಿದ ಕೀರ್ತಿ ನರೇಂದ್ರಮೋದಿ ಅವರಿಗೆ ಸಲ್ಲುತ್ತದೆ ಎಂದು ತೀರ್ಥಹಳ್ಳಿ ಗ್ರಾಮಾಂತರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮುಡುಬ ರಾಘವೇಂದ್ರ ತಿಳಿಸಿದ್ದಾರೆ.
Vijaya Karnataka Web SMR-30TTH1


ಈ ಕುರಿತು ಅವರು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ , ಸಂವಿಧಾನ ಆಶಯಕ್ಕೆ ವಿರುದ್ಧವಾಗಿ 5ವರ್ಷ ಆಡಳಿತ ನಡೆಸಿದ ಬಿಜೆಪಿ ಭಾರತದ ಆರ್ಥಿಕ ಸ್ಥಿತಿ ಸಂಪೂರ್ಣ ಹಾಳು ಮಾಡಿದೆ. 60 ವರ್ಷ ಕಾಂಗ್ರೆಸ್‌ ನೇತೃತ್ವದ ಆಡಳಿತದಲ್ಲಿ ಆರ್ಥಿಕ ಸ್ಥಿತಿ ಸದೃಢವಾಗಿತ್ತು ಎಂಬುದು ಜನರ ಅನುಭವದಲ್ಲಿದೆ. ಡಾಲರ್‌ ಖರೀದಿಸುವ ಶಕ್ತಿ ಈಗ ಭಾರತಕ್ಕಿಲ್ಲವಾಗಿದ್ದು ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ಯುವ ಜನರ ಕೈಯಲ್ಲಿ ಉದ್ಯೋಗ ಇಲ್ಲ. ವಿದ್ಯಾವಂತ ಯುವಜನತೆಗೆ ಕಡಿಮೆ ಸಂಬಳ ಕೊಡಲಾಗುತ್ತಿದೆ. 2017ರಲ್ಲಿ ನೀತಿ ಆಯೋಗ ಪ್ರಕಟಿಸಿದ ಅಂಶಗಳಲ್ಲಿ ಕೇಂದ್ರ ಸರಕಾರದ ವಿಫಲತೆ ಗುರುತಿಸಬಹುದು. ಚುನಾವಣೆಯ ಈ ಸಂದರ್ಭ ಮತದಾರರು ಭಾರತದ ಆರ್ಥಿಕ, ಉದ್ಯೋಗ ಕ್ಷೇತ್ರದ ಸದೃಢತೆ ಕುರಿತು ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದೆ. ಕೈಗಾರಿಕೆ, ಸಣ್ಣ ಕೈಗಾರಿಕೆ, ಸೇವಾ ಕ್ಷೇತ್ರ, ಕೃಷಿ, ಬ್ಯಾಂಕಿಂಗ್‌, ಆನ್‌ಲೈನ್‌ ವಹಿವಾಟು, ಐಟಿಬಿಟಿ, ಸ್ವಉದ್ಯೋಗ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯಲ್ಲಿ ಉದ್ಯೋಗ ಕಡಿಮೆ ಆಗಿದೆ. ಸಮಾನ ಆರ್ಥಿಕ ಶಕ್ತಿ ವೃದ್ಧಿಸುವಲ್ಲಿ ವಿಫಲವಾಗಿ ಬಡವರ ಸಂಖ್ಯೆ ಹೆಚ್ಚಾಗಲು ಕೇಂದ್ರ ಸರಕಾರದ ಆರ್ಥಿಕ ನೀತಿ ಕಾರಣ. 10 ವರ್ಷದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರ ಪ್ರತಿನಿಧಿಸಿರುವ ಬಿಜೆಪಿ ಸಂಸದರು ಅಭಿವೃದ್ಧಿ ಕೆಲಸ ಮಾಡಿಲ್ಲ. ಜನರಲ್ಲಿ ಭ್ರಮೆ ಮೂಡಿಸುವಂತೆ ಪ್ರಚಾರ ಪಡೆದ ಸ್ಮಾರ್ಟ್‌ಸಿಟಿ, ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ವಿಫಲವಾಗಿವೆ. ಆದರ್ಶ ಗ್ರಾಮ ಯೋಜನೆಯಡಿ 1ಗ್ರಾಮ ಅಭಿವೃದ್ಧಿಪಡಿಸಲಾಗದ ಬಿಜೆಪಿಗೆ ದೇಶದ ನೇತೃತ್ವ ನಿರ್ವಹಿಸುವ ಸಾಮರ್ಥ್ಯ‌ ಇಲ್ಲ ಎಂದು ಮುಡುಬರಾಘವೇಂದ್ರ ದೂರಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ ಶ್ರೇಷ್ಠ ಪರಂಪರೆ ಹೊಂದಿದ್ದು, ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ಅವರ ಗೆಲುವಿನಿಂದ ಪರಂಪರೆ ಮರಳಿ ಪಡೆಯಬೇಕಿದೆ. ಕ್ಷೇತ್ರದ ಘನತೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಹ ಸಂದೇಶವನ್ನು ಮತದಾರರು ನೀಡಬೇಕೆಂದು ಮುಡುಬರಾಘವೇಂದ್ರ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ