ಆ್ಯಪ್ನಗರ

ಶಿವಮೊಗ್ಗದಲ್ಲಿ ಮೋದಿ ವಿಡಿಯೋ ಕಾನ್ಫರೆನ್ಸ್‌

ನಗರದ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ 'ನಾನೇ ಚೌಕಿದಾರ' ಶೀರ್ಷಿಕೆ ಅಡಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರು, ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಭಾನುವಾರ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದರು.

Vijaya Karnataka 1 Apr 2019, 5:00 am
ಶಿವಮೊಗ್ಗ: ನಗರದ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ 'ನಾನೇ ಚೌಕಿದಾರ' ಶೀರ್ಷಿಕೆ ಅಡಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರು, ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಭಾನುವಾರ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದರು.
Vijaya Karnataka Web SMR-31ganesh5


ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಅವರು ನಡೆಸಿದ ಸಂವಾದದಲ್ಲಿ ಇತ್ತೀಚೆಗೆ ಭಾರೀ ಚರ್ಚೆಗೀಡಾದ 'ಚೌಕೀದಾರ' ಪದ ಬಳಕೆಯ ಹಿಂದಿನ ಉದ್ದೇಶ ಮತ್ತು ಅದರ ನೈಜಾರ್ಥವನ್ನು ಬಿಚ್ಚಿಟ್ಟರು.

'ಚೌಕೀದಾರ' ಎಂಬ ಹೆಸರನ್ನು ಬೇರೆ, ಬೇರೆ ರೀತಿಯಲ್ಲಿ ಅರ್ಥೈಸಿಕೊಂಡು ಟೀಕಿಸಲಾಗಿದೆ. ಚೌಕೀದಾರನೆಂದರೆ ಸಮವಸ್ತ್ರ ಧರಿಸಿ ಸೀಟಿ ಹೊಡೆಯುವ ವ್ಯಕ್ತಿಯಷ್ಟೇ ಅಲ್ಲ. ಹೀಗೆಂದರೆ, ನಂಬಿಕಸ್ಥನೆಂಬ ಅರ್ಥವೂ ಇದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರು, ಮುಖಂಡರಲ್ಲಿ ಸ್ಪಷ್ಟತೆ ಇರಬೇಕೆಂದರು. ಬಿಜೆಪಿ ಸಂಘಟನೆ ಹಾಗೂ ಐದು ವರ್ಷದಲ್ಲಿ ಮಾಡಿರುವ ಕಾರ್ಯಗಳ ಬಗ್ಗೆ ಸಾರ್ವಜನಿಕರು ಪ್ರಶ್ನೆ ಕೇಳಿದರು. ಇದಕ್ಕೆ ಪ್ರಧಾನಿ ಕೂಡ ವ್ಯವಧಾನದಿಂದ ಉತ್ತರ ನೀಡಿದರು. ಉತ್ತರ ಪ್ರದೇಶ, ಓಡಿಶಾ, ಕರ್ನಾಟಕ, ಮಹಾರಾಷ್ಟ್ರ, ರಾಜಸ್ತಾನ ರಾಜ್ಯಗಳಿಗೆ ಸಂವಾದ ನಡೆಸುವ ಅವಕಾಶ ಕಲ್ಪಿಸಲಾಗಿತ್ತು. ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ರುದ್ರೇಗೌಡ, ಶಾಸಕ ಕುಮಾರ್‌ ಬಂಗಾರಪ್ಪ, ಪ್ರಮುಖರಾದ ಡಿ.ಎಸ್‌, ಅರುಣ್‌, ಎಸ್‌.ಎನ್‌.ಚನ್ನಬಸಪ್ಪ, ಪ್ರಭಾಕರ್‌, ಪದ್ಮನಾಬ್‌ ಭಟ್‌ ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ