ಆ್ಯಪ್ನಗರ

ಮನುಷ್ಯನ ಪರಮಗುರಿ ಮೋಕ್ಷ : ಸ್ವಾಮೀಜಿ

ಮನುಷ್ಯನ ಪರಮಗುರಿ ಮೋಕ್ಷ ಪ್ರಾಪ್ತಿಯಾಗಿದ್ದು, ಮನಸ್ಸನ್ನು ನಿಗ್ರಹಿಸುವುದರ ಮೂಲಕ ಮೋಕ್ಷ ವನ್ನು ಪ್ರಾಪ್ತಿ ಮಾಡಿಕೊಳ್ಳಬಹುದು ಎಂದು ಜಡೆ ಹಿರೇಮಠ-ಕಾನುಕೇರಿ ಮಠದ ಶ್ರೀಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Vijaya Karnataka 3 Aug 2019, 6:50 pm
ಸೊರಬ:
ಮನುಷ್ಯನ ಪರಮಗುರಿ ಮೋಕ್ಷ ಪ್ರಾಪ್ತಿಯಾಗಿದ್ದು, ಮನಸ್ಸನ್ನು ನಿಗ್ರಹಿಸುವುದರ ಮೂಲಕ ಮೋಕ್ಷ ವನ್ನು ಪ್ರಾಪ್ತಿ ಮಾಡಿಕೊಳ್ಳಬಹುದು ಎಂದು ಜಡೆ ಹಿರೇಮಠ-ಕಾನುಕೇರಿ ಮಠದ ಶ್ರೀಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Vijaya Karnataka Web SMR-02SRBP1


ಪಟ್ಟಣದ ಕಾನುಕೇರಿ ಮಠದಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ಗುರುವಾರ ನಡೆದ 56ನೇ ಶಿವಾನುಭವ ಹಾಗೂ ಅಕ್ಕನ ಬಳಗ ಸೇವಾ ಟ್ರಸ್ಟ್‌ನ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬ್ರಹ್ಮಜ್ಞಾನ ಮನುಷ್ಯ ಜನ್ಮ ಇದ್ದಾಗಲೇ ಸಾಧಿಸಬೇಕು. ಬ್ರಹ್ಮಭಾವನೆ, ಮೋಕ್ಷ ಭಾವನೆ ತಿಳಿಯದವರು ಬಾಲವಿಲ್ಲದ ಎರಡು ಕಾಲಿನ ಕತ್ತೆ ಎಂದು ಸಂತ ತುಕಾರಾಮರು ಹೇಳಿದ್ದಾರೆ. ಯಾರೊಬ್ಬರೂ ಸಹ ಆತ್ಮ ಮತ್ತು ಮನೋಬಲ ಕಳೆದುಕೊಳ್ಳಬಾರದು. ಅನುಷ್ಠಾನದ ಮೂಲಕ ಇವುಗಳನ್ನು ಸಂಪಾದಿಸಿಕೊಳ್ಳಬಹುದು ಎಂದ ಅವರು, ಪಟ್ಟಣದಲ್ಲಿ ಶಿವಶರಣೆ ಅಕ್ಕಮಹಾದೇವಿ ಮೂರ್ತಿ ಸ್ಥಾಪಿಸಲು ಅಕ್ಕನ ಬಳಗದವರು ಮುಂದಾಗಬೇಕು ಎಂದರು.

ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ, ರಾಜು ಹಿರಿಯಾವಲಿ, ಬಸವರಾಜ ಭಾರಂಗಿ ಮಾತನಾಡಿದರು.

12 ದಿನಗಳಿಂದ ಚೊರಟಿ ಬಸವೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಅನುಷ್ಠಾನ ಕೈಗೊಂಡಿದ್ದ ಸಿದ್ದಲಿಂಗೇಶ್ವರ ಸ್ವಾಮಿ ನೇರಲಗಿ ಅವರನ್ನು ಹಾಗೂ ಅಖಿಲ ಭಾರತ ವೀರಶೈವ ಸಮಾಜ ತಾಲೂಕು ಅಧ್ಯಕ್ಷ ಬಸವರಾಜ ಭಾರಂಗಿ, ಪ.ಪಂ. ಸದಸ್ಯೆ ಜಯಲಕ್ಷ್ಮಿ ಹಾಗೂ ರೋಟರಿ ಕ್ಲಬ್‌ ಅಧ್ಯಕ್ಷ ರಾಜು ಹಿರಿಯಾವಲಿ ಅವರನ್ನು ಸನ್ಮಾನಿಸಲಾಯಿತು.

ಟೌನ್‌ ವೀರಶೈವ ಸಮಾಜ ಅಧ್ಯಕ್ಷ ಡಿ.ಲಿಂಗರಾಜ, ಲಕ್ಷ್ಮೀಕಾಂತ ಉರಣಕರ್‌, ಶಿವಯೋಗಿ, ಲಕ್ಷ್ಮೀ ಮುರುಳೀಧರ, ನಾಗರಾಜ ಗುತ್ತಿ, ಚಂದ್ರಶೇಖರ ನಿಜಗುಣ, ಶಾಂತಮ್ಮ, ಪೂರ್ಣಿಮಾ, ರೂಪಾ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ